Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು
Tamarind Sale: ಸಾಮಾನ್ಯವಾಗಿ ಹುಣಸೆ ಹಣ್ಣು ಅಡುಗೆ ಮನೆಯಲ್ಲಿ ಇರಲೇಬೇಕಾದ ಪ್ರಮುಖ ಪದಾರ್ಥವಾಗಿದೆ. ಆದರೆ, ತುಮಕೂರಿನ ಈ ಹುಣಸೆ ಹಣ್ಣಿನ ಬೆಲೆ ಕೇಳಿದರೆ ನೀವು ಶಾಕ್ ಆಗೋದು ಗ್ಯಾರಂಟಿ. ಎಪಿಎಂಸಿ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್ ಹುಣಸೆ ಬರೋಬ್ಬರಿ 44 ಸಾವಿರ ರೂಪಾಯಿಗೆ ಮಾರಾಟವಾಗಿದ್ದು, ಇದರಿಂದ ರೈತ ಜಯಣ್ಣ ಅವರ ಮುಖದಲ್ಲಿ ಮಂದಹಾಸ ಮೂಡಿದೆ. ಈ ಕುರಿತು ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.
ತುಮಕೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ವಹಿವಾಟು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಗುಬ್ಬಿ ತಾಲ್ಲೂಕಿನ ಕುಂಟರಾಮನಹಳ್ಳಿಯ ರೈತ ಜಯಣ್ಣ ಎಂಬುವವರು ತಾವು ಬೆಳೆದ ಅತ್ಯುತ್ತಮ ಗುಣಮಟ್ಟದ ಹುಣಸೆ ಹಣ್ಣನ್ನು ಮಾರುಕಟ್ಟೆಗೆ ತಂದಿದ್ದರು.

ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು
ಜಯಣ್ಣ ಅವರು ತಂದಿದ್ದ ಕೇವಲ 55 ಕೆ.ಜಿ ತೂಕದ ಹುಣಸೆ ಹಣ್ಣನ್ನು ವ್ಯಾಪಾರಿಯೊಬ್ಬರು ₹24,200 ನೀಡಿ ಖರೀದಿಸಿದ್ದಾರೆ. ಇದರ ಲೆಕ್ಕಾಚಾರದ ಪ್ರಕಾರ ಪ್ರತಿ ಕ್ವಿಂಟಲ್ಗೆ ₹44,000 ದರ ಸಿಕ್ಕಂತಾಗಿದೆ. ಇದು ಈ ವರ್ಷದ ಹಂಗಾಮಿನಲ್ಲೇ ಅತಿ ಹೆಚ್ಚು ಬೆಲೆಯಾಗಿದೆ. ವಿಶೇಷ ಅಂದ್ರೆ, ಇದೇ ಮರದ ಹಣ್ಣು ಕಳೆದ ವರ್ಷ ಕ್ವಿಂಟಲ್ಗೆ ಬರೋಬ್ಬರಿ ₹47,000ಕ್ಕೆ ಮಾರಾಟವಾಗಿತ್ತು.
ಯಾವ ತಳಿಗೆ ಎಷ್ಟಿದೆ ಬೆಲೆ?
ಮಾರುಕಟ್ಟೆಯಲ್ಲಿ ಕೇವಲ ಜಯಣ್ಣ ಅವರ ಹಣ್ಣು ಮಾತ್ರವಲ್ಲದೆ, ವಿವಿಧ ತಳಿಗಳಿಗೂ ಉತ್ತಮ ಬೆಲೆ ಲಭಿಸುತ್ತಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (IIHR) ಗುರುತಿಸಿರುವ 'ಲಕ್ಷ್ಮಣ' ಎಂಬ ವಿಶೇಷ ತಳಿಯ ಹುಣಸೆ ಕ್ವಿಂಟಲ್ಗೆ ₹34,000 ರೂಪಾಯಿವರೆಗೆ ಮಾರಾಟವಾಗಿರುವ ಉದಾಹರಣೆ ಇದೆ.
ಗುಣಮಟ್ಟಕ್ಕೆ ಅನುಗುಣವಾಗಿ ಕ್ವಿಂಟಲ್ಗೆ ಕನಿಷ್ಠ ₹11,500 ರಿಂದ ₹34,000 ವರೆಗೆ ಮಾರಾಟವಾಗುತ್ತಿದೆ. "ರೈತರು ಬೆಳೆಯುವ ಬೆಳೆ ಗುಣಮಟ್ಟದಿಂದ ಕೂಡಿದ್ದರೆ ಮಾರುಕಟ್ಟೆಯಲ್ಲಿ ಅದಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಜಯಣ್ಣ ಅವರ ಹಣ್ಣು ಅಷ್ಟು ಉತ್ಕೃಷ್ಟವಾಗಿದ್ದರಿಂದ ಈ ದಾಖಲೆ ಬೆಲೆ ಸಿಕ್ಕಿದೆ" ಎಂದು ಹಿರಿಯ ವರ್ತಕ ದೇವೇಂದ್ರಪ್ಪ ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ. ಒಟ್ಟಿನಲ್ಲಿ ಹೇಳುವುದಾದರೆ, ಸರಿಯಾದ ನಿರ್ವಹಣೆ ಮತ್ತು ಉತ್ತಮ ತಳಿಗಳನ್ನು ಬೆಳೆದರೆ ಹುಣಸೆ ಹಣ್ಣು ಕೂಡ ರೈತರ ಪಾಲಿಗೆ 'ಕಲ್ಪವೃಕ್ಷ'ವಾಗಬಲ್ಲದು ಎಂಬುದನ್ನು ಈ ಘಟನೆ ಸಾಬೀತುಪಡಿಸಿದೆ.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ? -
Chandrika Dixit: ಒಂದು ರಾತ್ರಿ ನನ್ನ ಜೊತೆ ಮಲಗಿದ್ರೆ 50 ಲಕ್ಷ ಕೊಡ್ತೇನೆ; ಚಂದ್ರಿಕಾಗೆ ಖ್ಯಾತ ಉದ್ಯಮಿ ಆಫರ್












Click it and Unblock the Notifications