ಫೆ.13ರಂದು ಶೀಬಿ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ
ತುಮಕೂರು, ಫೆಬ್ರವರಿ 8: ಇದೇ ತಿಂಗಳ 13ರಂದು ತಾಲೂಕಿನ ಬೆಳ್ಳಾವಿ ಹೋಬಳಿಯಲ್ಲಿರುವ ಶೀಬಿ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಇದ್ದು, ಫೆಬ್ರವರಿ 10ರಿಂದ 13ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಫೆ.10ರಂದು ಬೆಳಗ್ಗೆ ದೇವರಿಗೆ ಅಭಿಷೇಕ ಹಾಗೂ ಅರ್ಚನೆ, ಸಂಜೆ ಅಂಕುರಾರ್ಪಣೆ, ಪ್ರಹ್ಲಾದೋತ್ಸವ ಹಾಗೂ ಬೆಳ್ಳಿ ಡೋಲೋತ್ಸವ.
11ರಂದು ಬೆಳಗ್ಗೆ ಅಭಿಷೇಕ, ಅರ್ಚನೆ, ಧ್ವಜಾರೋಹಣ, ಸಂಜೆ ಗಜೇಂದ್ರ ಮೋಕ್ಷ. 12ರಂದು ಬೆಳಗ್ಗೆ ಅಭಿಷೇಕ ಹಾಗೂ ಅರ್ಚನೆ. ಸಂಜೆ ಲೋಕಾಂಬ, ಚೆಂಚುಮಾಂಬ ಸಮೇತ ಶೀಬಿ ನರಸಿಂಹ ದೇವರ ಕಲ್ಯಾಣೋತ್ಸವ ನಡೆಯಲಿದೆ. ಫೆಬ್ರವರಿ 13ರಂದು ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಎನ್.ಕೆ.ಮೋಹನ್ ಕುಮಾರ್ ಮತ್ತು ಇತರ ಕಲಾವಿದರಿಂದ ನಾಟ್ಯ, ಸಂಗೀತ, ಗಮಕ ಹಾಗೂ ಕೀರ್ತನೋತ್ಸವ ಇದೆ.[ಫೆ. 17ರಿಂದ ಕೊಟ್ಟೂರು ಗುರುಬಸವೇಶ್ವರ ಸ್ವಾಮಿ ಜಾತ್ರೆ ಆರಂಭ]

ಆ ನಂತರವೂ ಧಾರ್ಮಿಕ ಕಾರ್ಯಕ್ರಮಗಳು ಮುಂದುವರಿದು, 14ರಂದು ಬೆಳಗ್ಗೆ ಅಭಿಷೇಕ- ಅರ್ಚನೆ, ಸಂಜೆ ತೆಪ್ಪೋತ್ಸವ ಅಥವಾ ಅಡ್ಡಪಲ್ಲಕ್ಕಿ ಉತ್ಸವ, ಮೃಗಯಾ ಯಾತ್ರೆ, ಶಯನೋತ್ಸವ ಇದೆ. 15ರಂದು ಲೋಕಾಂಬ, ಚೆಂಚುಮಾಂಬ ದೇವಿಗೆ ಬಾಳೆಹಣ್ಣು ಅಲಂಕಾರ, ಅವಭೃತ ಸ್ನಾನ, ಮಹಾಭಿಷೇಕ ಹಾಗೂ ಸಂಜೆ ಧ್ವಜ ಅವರೋಹಣ, ದೊಡ್ಡ ಗರುಡೋತ್ಸವ ಇದೆ.
16ಕ್ಕೆ ದೇವರಿಗೆ ಅಭಿಷೇಕ-ಅರ್ಚನೆ, ಸಂಜೆ ದವನೋತ್ಸವ, ಹೆಜ್ಜೆ ಮಂಗಳಾರತಿ. 24ರಂದು ಮಹಾಶಿವರಾತ್ರಿ ಪ್ರಯುಕ್ತ ಅರ್ಧನಾರೀಶ್ವರ ದೇವರಿಗೆ ಅಭಿಷೇಕ-ಅರ್ಚನೆ, ಸಂಜೆ ದೇವರಿಗೆ ಪೂಜಾ ಕೈಂಕರ್ಯ ನಡೆಯಲಿದೆ. ಮಾರ್ಚ್ 25ರಂದು ಗೌರಿಗಂಗಾ ಚಂದ್ರಮೌಳೀಶ್ವರ ಸ್ವಾಮಿ ರಥೋತ್ಸವ ನಡೆಯಲಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications