ತುಮಕೂರಿನಲ್ಲಿ ಕುದಿಸಿದರೂ ಕರಗದ ಪ್ಲಾಸ್ಟಿಕ್ ಸಕ್ಕರೆ ಪತ್ತೆ
ತುಮಕೂರು ನಗರದಲ್ಲಿ ಮಾರ್ಚ್ 20ರಂದು ಚಿಲ್ಲರೆ ದಿನಸಿ ವ್ಯಾಪಾರಿಯೊಬ್ಬರಿಗೆ ಪ್ಲಾಸ್ಟಿಕ್ ಸಕ್ಕರೆ ಸಿಕ್ಕಿದೆ. ಮಂಡಿಪೇಟೆಯ ಸಗಟು ವ್ಯಾಪಾರಿಯೊಬ್ಬರಿಂದ ಖರೀದಿಸಿದ ಸಕ್ಕರೆ ಅದಾಗಿತ್ತು. ಸದ್ಯಕ್ಕೆ ನಗರದಾದ್ಯಂತ ಈ ಬಗ್ಗೆ ಚರ್ಚೆಯಾಗುತ್ತಿದೆ
ತುಮಕೂರು, ಮಾರ್ಚ್ 21: ತುಮಕೂರು ನಗರದಲ್ಲಿ ಸೋಮವಾರ (ಮಾರ್ಚ್ 20) ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿದ್ದು, ಈ ಸಂಬಂಧ ಮಂಡಿಪೇಟೆಯಲ್ಲಿನ ಅಂಗಡಿಯೊಂದರ ಬಗ್ಗೆ ಜನ ನಾನಾ ರೀತಿಯಲ್ಲಿ ಮಾತನಾಡಿಕೊಳ್ಳುವಂತಾಗಿದೆ. ಚಿಲ್ಲರೆ ವ್ಯಾಪಾರಿಯಾದ ಸಿದ್ದೇಶ್ ಎಂಬುವವರು ಮಂಡಿಪೇಟೆಯಲ್ಲಿರುವ ಸಗಟು ವ್ಯಾಪಾರಿಗಳಿಂದ ಸಕ್ಕರೆ ಖರೀದಿಸಿ ತಂದಿದ್ದಾರೆ.
ಆ ನಂತರ ಅದನ್ನು ಮಾರಿದಾಗ, ಗ್ರಾಹಕರೊಬ್ಬರು ವಾಪಸ್ ತಂದಿದ್ದಾರೆ. ಈ ಸಕ್ಕರೆ ಬರೀ ಮೂವತ್ತರಷ್ಟು ಮಾತ್ರ ಕರಗುತ್ತಿದೆ. ಇನ್ನು ಎಪ್ಪತ್ತರಷ್ಟು ಕರಗುತ್ತಿಲ್ಲ ಎಂದು ದೂರಿದ್ದಾರೆ. ಆಗ ಅನುಮಾನಗೊಂಡ ಸಿದ್ದೇಶ್, ಪರಿಶೀಲಿಸಿದಾಗ ರಬ್ಬರ್ ನಂತೆ ನಾಲಗೆಗೆ ಅನುಭವಕ್ಕೆ ಬಂದಿದೆ. ಆಗ ಸಗಟು ವ್ಯಾಪಾರಿ ಬಳಿಗೆ ಹೋಗಿ ವಿಚಾರಿಸಿದ್ದಾರೆ.[ತುಮಕೂರಿನಲ್ಲಿ ಕುಡಿಯುವ ನೀರು ಯೋಜನೆಗೆ ಮುತ್ತಪ್ಪ ರೈ ಚಾಲನೆ]
ಮೂಲ ಬೆಳಗಾವಿಯಿಂದ ಬಂದಿರುವ ಈ ಸಕ್ಕರೆ ಮೂಟೆ, ಅಲ್ಲಿಂದ ಬೆಂಗಳೂರಿಗೆ ತಲುಪಿ, ಆ ನಂತರ ತುಮಕೂರಿಗೆ ಬಂದಿದೆ. ಈಗ ಬೆಳಗಾವಿ ಮೂಲದ ಸಕ್ಕರೆ ತಯಾರಕರು-ವ್ಯಾಪಾರಿಗಳಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿ, ತುಮಕೂರಿನ ಇತರೆ ಯಾವ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೋ ಅಲ್ಲೆಲ್ಲ ಪರಿಶೀಲಿಸಬೇಕು ಎಂದು ಒತ್ತಾಯಿಸಿದ ಮೇಲೆ, ಆ ಮಾರಾಟಗಾರರು ಬೆಳಗಾವಿಯಿಂದ ತುಮಕೂರಿಗೆ ಬಂದು ಪರಿಶೀಲಿಸಲು ಒಪ್ಪಿದ್ದಾರೆ.

ಆದರೆ, ಸಿದ್ದೇಶ್ ಬಳಿಯಲ್ಲಿ ಸಕ್ಕರೆ ಮೂಟೆ ಖರೀದಿಸಿರುವುದಕ್ಕೆ ರಸೀದಿ ಇಲ್ಲ. ಅವರೇ ತಿಳಿಸಿರುವಂತೆ ಸಗಟು ಮಾರಾಟಗಾರ, ತಾವೇ ಆ ಸಕ್ಕರೆ ಮೂಟೆ ಮಾರಾಟ ಮಾಡಿರುವುದಾಗಿ ತಿಳಿಸಿರುವ ವಿಡಿಯೋ ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಬುಧವಾರ ದೂರು ದಾಖಲಿಸುವುದಾಗಿ ಸಿದ್ದೇಶ್ 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದರು.[ಮಧುಗಿರಿಯ ಜಯಮಂಗಲಿಯಲ್ಲಿ ಕೃಷ್ಣಮೃಗ ನೋಡುವುದೇ ಚಂದ]
ನಾವು ಯಾವಾಗಲೂ ಅದೇ ಅಂಗಡಿಯಲ್ಲೇ ಖರೀದಿ ಮಾಡೋದು. ಈ ಹಿಂದೆ ಯಾವಾಗಲೂ ಅಂಥ ಅನುಭವ ಆಗಿರಲಿಲ್ಲ. ಆದರೆ ಇದೇ ಮೊದಲ ಸಲ ತುಮಕೂರಿನಲ್ಲಿ ಪ್ಲಾಸ್ಟಿಕ್ ಸಕ್ಕರೆ ಕಂಡುಬಂದಿದೆ ಎಂದು ಅವರು ಹೇಳಿದರು.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications