ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿಗೆ ಭೇಟಿ ನೀಡಿ ಹಲವು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಹಾಗಾದರೆ ಕಾರ್ಯಕ್ರಮದ ಸಿದ್ಧತೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
ತುಮಕೂರು, ಫೆಬ್ರವರಿ, 06: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ (ಫೆಬ್ರವರಿ 06) ಬೆಂಗಳೂರಿಗೆ ಭೇಟಿ ನೀಡಿದ್ದು, ಎಚ್ಎಎಲ್ನಲ್ಲಿ ಮೋದಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು. ಹಾಗೆಯೇ ಪ್ರಧಾನಿ ಮೋದಿಯವರು ರಾಜ್ಯ ರಾಜಧಾನಿ ಬೆಂಗಳೂರು ಮತ್ತು ತುಮಕೂರಿಗೆ ಭೇಟಿ ನೀಡಿ ಒಂದೇ ದಿನ 6 ಪ್ರಮುಖ ಯೋಜನಗಳಿಗೆ ಚಾಲನೆ ನೀಡಲಿದ್ದಾರೆ.
ಸೋಮವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣದಿಂದ ವಾಯುಪಡೆ ವಿಶೇಷ ವಿಮಾನದ ಮೂಲಕ ಹೊರಟು ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮೊದಲು ಬೆಂಗಳೂರಿನ ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರಕ್ಕೆ ಆಗಮಿಸಲಿದ್ದು, ಅಲ್ಲಿ ಆಯೋಜಿಸಿರುವ ಭಾರತ ಇಂಧನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಸಲಿದ್ದಾರೆ.
ಫೆ. 6ಕ್ಕೆ ಮೋದಿಯಿಂದ ತುಮಕೂರಿನ ಎಚ್ಎಎಲ್ ಘಟಕ ಉದ್ಘಾಟನೆ
ಗುಬ್ಬಿಗೆ
ಭೇಟಿ
ನೀಡಲಿರುವ
ಮೋದಿ
ನಂತರ
ಜಿಲ್ಲೆಯ
ಗುಬ್ಬಿ
ತಾಲೂಕಿನ
ಬಿದರಹಳ್ಳಿ
ಕಾವಲ್ನಲ್ಲಿ
ನಿರ್ಮಾಣವಾಗಿರುವ
ಎಚ್ಎಎಲ್
ಲಘು
ಹೆಲಿಕಾಪ್ಟರ್
ತಯಾರಿಕಾ
ಘಟಕವನ್ನು
ಲೋಕಾರ್ಪಣೆಗೊಳಿಸಲಿದ್ದಾರೆ.
ಇದು
ರಕ್ಷಣಾ
ಕ್ಷೇತ್ರದಲ್ಲಿ
ಭಾರತದ
ಆತ್ಮನಿರ್ಭರತೆಯ
ಮತ್ತೊಂದು
ಹೆಜ್ಜೆ
ಎಂದೇ
ಬಣ್ಣಿಸಲಾಗುತ್ತಿದೆ.
ಅದೇ
ವೇದಿಕೆಯಲ್ಲಿಯೇ
ಪೆಟ್ರೋಲ್ಗೆ
ಶೇಕಡಾ
20ರಷ್ಟು
ಎಥಾನಾಲ್
ಮಿಶ್ರಣ
ಮಾಡಿ
ಸಿದ್ಧಪಡಿಸಲಾಗಿರುವ
ಇ-20
ಪೆಟ್ರೋಲ್
ಅನ್ನು
ದೇಶದ
ವಿವಿಧ
ರಾಜ್ಯಗಳ
67
ಪೆಟ್ರೋಲ್
ಬಂಕ್ಗಳಲ್ಲಿ
ಪ್ರಾಯೋಗಿಕವಾಗಿ
ವಿತರಣೆಗೆ
ಚಾಲನೆ
ನೀಡಲಿದ್ದಾರೆ.
ಜೊತೆಗೆ
ಒಂದು
ಬಾರಿ
ಬಳಸಿ
ಬಿಸಾಡುವ
ಹಳೇ
ಪ್ಲಾಸ್ಟಿಕ್
ಬಾಟಲ್
ತ್ಯಾಜ್ಯದಿಂದ
ತಯಾರಿಸಿದ
ಸಮವಸ್ತ್ರ
ಅನಾವರಣ
ಮಾಡಲಿದ್ದಾರೆ.
ಬಳಿಕ
ಹೆಲಿಕಾಪ್ಟರ್
ಮೂಲಕವೇ
ತುಮಕೂರಿಗೆ
ತೆರಳಲಿದ್ದಾರೆ
ಎನ್ನುವ
ಮಾಹಿತಿ
ಲಭ್ಯವಾಗಿದೆ.
ಈ ವೇಳೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಮೋದಿಯವರಿಗೆ ಸಾಥ್ ನೀಡಲಿದ್ದಾರೆ.
ಪೊಲೀಸರಿಂದ
ಭಾರಿ
ಬಿಗಿ
ಭದ್ರತೆ
ಇನ್ನು
ಕಾರ್ಯಕ್ರಮದಲ್ಲಿ
80-90
ಸಾವಿರ
ಜನರು
ಸೇರುವ
ಸಾಧ್ಯತೆ
ಇದ್ದು,
ಸುಮಾರು
3
ಸಾವಿರ
ಪೊಲೀಸರನ್ನು
ಸ್ಥಳದಲ್ಲಿ
ಭದ್ರತೆಗಾಗಿ
ನಿಯೋಜನೆ
ಮಾಡಲಾಗಿದೆ.
ತಿಪಟೂರು
ಕಡೆಯಿಂದ
ಬರುವವರು
ಕೆಬಿ
ಕ್ರಾಸ್,
ತುರುವೇಕೆರೆ
ಟಿಬಿ
ಕ್ರಾಸ್
ಹಾಗೂ
ನಿಟ್ಟೂರು
ಮೂಲಕ
ತುಮಕೂರು
ಕಡೆ
ಹೋಗಬೇಕು.
ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಬಾರಿ ಬಂದೋಬಸ್ತ್ ಮಾಡಲಾಗಿದ್ದು, ತುಮಕೂರು ಎಸ್.ಪಿ ರಾಹುಲ್ ಕುಮಾರ್ ಸೇರಿದಂತೆ ಒಟ್ಟು 5 ಜನ ಎಸ್.ಪಿಗಳ ನೇತೃತ್ವದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.