ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ವಿಚಾರ: ಎಚ್ಡಿಕೆ ಬದ್ಧತೆ ಪ್ರಶ್ನಿಸಿದ ಸ್ವಪಕ್ಷೀಯ ಶಾಸಕ
ತುಮಕೂರು, ಅಕ್ಟೋಬರ್ 19: ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಟ್ವೀಟ್ ಉದ್ದೇಶಿಸಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್, ಕುಮಾರಸ್ವಾಮಿಯವರ ಬದ್ಧತೆಯನ್ನೇ ಪ್ರಶ್ನಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಎಸ್.ಆರ್. ಶ್ರೀನಿವಾಸ್, ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಸಿದ್ದರಾಮಯ್ಯರಿಗೆ ಹೇಳುವ ಮೊದಲು ನಾವೆಷ್ಟು ಪ್ರಾತಿನಿಧ್ಯ ನೀಡಿದ್ದೇವೆ ಎನ್ನುವುದನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು. ಬದ್ಧತೆ ಬಗ್ಗೆ ನಮ್ಮ ಆತ್ಮವಿಮರ್ಶೆಯನ್ನು ನಾವು ಮಾಡಿಕೊಳ್ಳಬೇಕು. ಉಪ ಚುನಾವಣೆಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕಿಳಿಸಿ ಏನು ಪ್ರಯೋಜನ ಎಂದು ತಿಳಿಸಿದರು.
ತುಮಕೂರು ನಗರದಲ್ಲಿ 45- 50 ಸಾವಿರ ಮುಸ್ಲಿಮರ ಮತ ಇದೆ. ಆದರೂ ಕಾಂಗ್ರೆಸ್ ಅಭ್ಯರ್ಥಿ ಸೋತು, ಬಿಜೆಪಿಯ ಜ್ಯೋತಿಗಣೇಶ್ ಗೆದ್ದಿದ್ದಾರೆ. ಇಂತಹದರಲ್ಲಿ 10-15 ಸಾವಿರ ಮತ ಇರುವ ಉಪ ಚುನಾವಣೆಯ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟರೆ ಯಾವ ಪ್ರಯೋಜನವೂ ಇಲ್ಲ. ಬಸವಕಲ್ಯಾಣದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿ ಏನು ಪ್ರಯೋಜನವಾಯಿತು ಎಂದು ಸ್ವಪಕ್ಷದ ನಾಯಕರ ನಿರ್ಧಾರವನ್ನೇ ಜೆಡಿಎಸ್ ಶಾಸಕ ಎಸ್.ಆರ್ ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಎಚ್ಡಿಕೆ
ಟ್ವೀಟ್ನಲ್ಲಿ
ಏನಿದೆ?
ಅಲ್ಪಸಂಖ್ಯಾತರ
ಕಲ್ಯಾಣ
ಎಂದರೆ
ಇದೇನಾ
ಸಿದ್ದಹಸ್ತರೇ?
ತೊಟ್ಟಿಲನ್ನೂ
ತೂಗುತ್ತಾ,
ಮಗುವನ್ನೂ
ಚಿವುಟುತ್ತಾ,
ಸಾಧ್ಯವಾದರೆ
ಆ
ಮಗುವಿನ
ಕತ್ತನ್ನೂ
ಕುಯ್ಯುತ್ತಾ
ನಡೆಸುತ್ತಿರುವ
ಇಂಥ
ನೀಚ
ರಾಜರಾರಣ
ಮುಸ್ಲಿಂ
ಬಾಂಧವರಿಗೆ
ಈಗ
ಗೊತ್ತಾಗಿಬಿಟ್ಟಿದೆ
ಎಂದು
ಪರೋಕ್ಷವಾಗಿ
ಮಾಜಿ
ಸಿಎಂ
ಹಾಗೂ
ವಿಪಕ್ಷ
ನಾಯಕ
ಸಿದ್ದರಾಮಯ್ಯರಿಗೆ
ಎಚ್.ಡಿ.
ಕುಮಾರಸ್ವಾಮಿ
ಕುಟುಕಿದ್ದರು.
ಇಕ್ಬಾಲ್ ಸರಡಗಿಯವರನ್ನು ಸೋಲಿಸಿದಿರಿ, ಜಾಫರ್ ಷರೀಫರ ಮೊಮ್ಮಗನನ್ನು ಮುಗಿಸಿದಿರಿ, ರೋಷನ್ ಬೇಗ್ ವಿರುದ್ಧ ರೋಷ ತೀರಿಸಿಕೊಂಡಿರಿ, ತನ್ವೀರ್ ಸೇಠ್ ಮೇಲೆ ಹಗೆ ಸಾಧಿಸಿದಿರಿ, ಇನ್ನೊಬ್ಬರ ಮೇಲಿನ ಸೇಡನ್ನು ಬಡಪಾಯಿ ಸಲೀಂ ಮೇಲೆ ತಿರುಗಿಸಿ ಒಂದೇ ಕಲ್ಲಿನಲ್ಲಿ 2 ಹಕ್ಕಿ ಹೊಡೆದು ʼಕಿರಾತಕ ರಾಜಕಾರಣʼ ಮಾಡಿದಿರಿ ಎಂದು ಹರಿಹಾಯ್ದಿದ್ದರು.
ಚಕ್ರ ತಿರುಗುತ್ತಿದೆ, ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ. ಅಲ್ಪಸಂಖ್ಯಾತ ಬಾಂಧವರಿಗೆ ನಿಮ್ಮ ನಿಜಬಣ್ಣ ಗೊತ್ತಾಗಿದೆ ಸಿದ್ದಹಸ್ತರೇ. ನಿಮಗೆ ಪಾಠ ಕಲಿಸುವ ಜನತಾಪರ್ವ ಈಗಷ್ಟೇ ಆರಂಭವಾಗಿದೆ. ಕಾದು ನೋಡಿ... ಎಂದು ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯರ ಕಾಲೆಳಿದಿದ್ದರು. ಅದಕ್ಕೆ ಪ್ರತಿಯಾಗಿ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ತಮ್ಮ ನಾಯಕರ ನಡೆಯನ್ನೇ ಪ್ರಶ್ನಿಸಿದ್ದಾರೆ.
ಜೆಡಿಎಸ್ ಸಮಾವೇಶದ ಬಗ್ಗೆ ಶಾಸಕರಿಗೆ ಮಾಹಿತಿಯಿಲ್ಲ
ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ಗೆ ತಿಳಿಯದೇ ಕ್ಷೇತ್ರದಲ್ಲಿ ಜೆಡಿಎಸ್ನ ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಅಕ್ಟೋಬರ್ 25ರಂದು ಗುಬ್ಬಿ ಪಟ್ಟಣದ ಸರ್ಕಾರಿ ಮೈದಾನದಲ್ಲಿ ಜೆಡಿಎಸ್ ಪಕ್ಷದ ಸಮಾವೇಶವೊಂದು ಆಯೋಜನೆಗೊಂಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಸಮಾವೇಶ ಉದ್ಘಾಟಿಸಲಿದ್ದಾರೆ.
ಗುಬ್ಬಿ ಕ್ಷೇತ್ರದ ಯುವ ಮುಖಂಡ ಬಿ. ಎಸ್. ನಾಗರಾಜು ಈ ಸಮಾವೇಶ ಆಯೋಜನೆ ಮಾಡಿದ್ದು, ಹಲವಾರು ಜೆಡಿಎಸ್ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೆ ಈ ಸಮಾವೇಶದ ಬಗ್ಗೆ ಸ್ಥಳೀಯ ಶಾಸಕ ಎಸ್. ಆರ್. ಶ್ರೀನಿವಾಸ್ಗೆ ಯಾವುದೇ ಮಾಹಿತಿ ಇಲ್ಲ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಎಲ್ಲಿ
ಸಮಾವೇಶ?
ಅಕ್ಟೋಬರ್
25ರಂದು
ಮಧ್ಯಾಹ್ನ
12
ಗಂಟೆಗೆ
ಸರ್ಕಾರಿ
ಕಾಲೇಜು
ಮೈದಾನ,
ಬಿ.
ಎಸ್.
ರಸ್ತೆ
ಗುಬ್ಬಿಯಲ್ಲಿ
ಸಮಾವೇಶ
ನಡೆಯಲಿದೆ.
ಕಾರ್ಯಕ್ರಮವನ್ನು
ಮಾಜಿ
ಮುಖ್ಯಮಂತ್ರಿ
ಎಚ್.
ಡಿ.
ಕುಮಾರಸ್ವಾಮಿ
ಉದ್ಘಾಟಿಸಲಿದ್ದಾರೆ.
ತಾಲೂಕು
ಜೆಡಿಎಸ್
ಅಧ್ಯಕ್ಷರಾದ
ಗುರು
ರೇಣುಕಾರಾಧ್ಯ
ಅಧ್ಯಕ್ಷತೆ
ವಹಿಸಲಿದ್ದಾರೆ.
ಶಾಸಕರಾದ
ಎಸ್.
ಆರ್.
ಶ್ರೀನಿವಾಸ್,
ಗೌರಿ
ಶಂಕರ್
ಮುಂತಾದವರು
ಮುಖ್ಯ
ಅತಿಥಿಗಳು
ಎಂದು
ಕಾರ್ಯಕ್ರಮದ
ಆಹ್ವಾನ
ಪತ್ರಿಕೆಯಲ್ಲಿ
ಮಾಹಿತಿ
ನೀಡಲಾಗಿದೆ.