ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಸ್ವಾಮೀಜಿ ಹೆಸರು ಘೋಷಣೆ
ಬೆಂಗಳೂರು, ಏಪ್ರಿಲ್ 1: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ 115ನೇ ಜಯಂತಿ ಸಂದರ್ಭದಲ್ಲಿ ಕರ್ನಾಟಕದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರು ನಾಮಕರಣ ಮಾಡಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಸಿದ್ದಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಮಾತನಾಡಿ, ''ಸರ್ಕಾರದ ಮಧ್ಯಾಹ್ಯದ ಬಿಸಿ ಊಟದ ಯೋಜನೆಗೆ ಶಿವಕುಮಾರ ಸ್ವಾಮೀಜಿ ಹೆಸರು ಇಡಲು ಸರ್ಕಾರ ಮುಂದಾಗುತ್ತದೆ,'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.
Breaking: ಸಿದ್ದಗಂಗಾ ಶ್ರೀಗಳಿಗೆ ಭಾರತರತ್ನ ನೀಡುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ; ಕರ್ನಾಟಕ HC
ಸಿದ್ದಗಂಗಾ ಶ್ರೀಗಳು ನಡೆದಾಡಿದ ನೆಲದಲ್ಲಿ ಸ್ಫೂರ್ತಿ, ಹೆಮ್ಮೆ ಇದೆ. ಸುಮಾರು 88 ವರ್ಷ ಈ ಮಠದ ಸೇವೆ ಮಾಡಿದ್ದು, ಇದು ದಾಖಲೆಯಾಗಿದೆ. ಇಡೀ ದೇಶದಲ್ಲೇ ಈ ಕೆಲಸ ಯಾರು ಮಾಡಿಲ್ಲ. ಆ ದಾಖಲೆ ನಮ್ಮ ಶಿವಕುಮಾರ ಸ್ವಾಮಿಗಳು ಮಾಡಿದ್ದಾರೆ. ಶ್ರೀಗಳು ಅಂದು ಹಚ್ಚಿದ ಒಲೆಯ ಕಿಚ್ಚು ನಿರಂತರವಾಗಿ ನಡೆಯುತ್ತಿವೆ.
ಸಿದ್ದಗಂಗಾ ಶ್ರೀಗಳು ನಮ್ಮ ನಡುವೆ ಜೀವಂತ ಆಗಿದ್ದಾರೆ. ಅವರು ದೈಹಿಕವಾಗಿ ಇಲ್ಲದೆ ಇದ್ದರೂ ಅವರ ನಡೆ ಗೌರವ ನಮ್ಮ ಜೊತೆ ಸದಾ ಇರುತ್ತದೆ. ಬದುಕನ್ನು ಕಟ್ಟಿಕೊಟ್ಟ ಪರಮಪೂಜ್ಯರು ಅವರು. ಎಲ್ಲಾ ಸಮುದಾಯದ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ಅದು ಸಾಮಾನ್ಯ ಮಾತಲ್ಲ. ಅದು ದೈವ ಶಕ್ತಿ. ಸ್ವಾಮೀಜಿಯವರು ಯಾವುದೇ ಜಾತಿ ಭೇದ ಮಾಡಿಲ್ಲ. ಸರ್ವೋದಯ ಅಂತ್ಯೋದಯ ಆಗಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
Recommended Video
ಆಡಳಿತಗಾರರು ಸಿದ್ದಗಂಗಾ ಮಠವನ್ನು ಶ್ರದ್ಧಾ ಭಕ್ತಿಯಿಂದ ಕಂಡಿದ್ದಾರೆ. ನಮ್ಮ ಸರ್ಕಾರವೂ ಅತ್ಯಂತ ಶ್ರದ್ಧೆಯಿಂದ ಕಾಣುತ್ತಿದೆ. ಭಕ್ತಿಯಿಂದ ಬಸವಣ್ಣನವರ ದಾಸೋಹ, ಶಿಕ್ಷಣ, ಆರೋಗ್ಯ ತತ್ವಗಳಿಗೆ ನಮ್ಮ ಸರ್ಕಾರ ಮಹತ್ವ ನೀಡಿದೆ. ಸರ್ವೋದಯ ಕಾರ್ಯಕ್ರಮಕ್ಕೆ 60 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಅನುದಾನವನ್ನು ಈ ವರ್ಷದ ಬಜೆಟ್ನಲ್ಲಿ ಮೀಸಲಿರಿಸಿದೆ.
ಜನಕಲ್ಯಾಣಕ್ಕಾಗಿ ಹಾಗೂ ಜನರ ಪರವಾಗಿ ನಮ್ಮ ಸರ್ಕಾರ ಕೆಲಸ ಮಾಡಲಿದೆ. ನಿಮ್ಮ ವಿಶ್ವಾಸ ಗಳಿಸುವ ರೀತಿಯಲ್ಲಿ ಕೆಲಸ ಮಾಡುತ್ತದೆ. ಬಡವರು, ದೀನದಲಿತರು, ಹೆಣ್ಣುಮಕ್ಕಳಿಗೆ ಕಾರ್ಯಕ್ರಮಗಳ ಅನುಷ್ಠಾನ ಮಾಡಿ ನಿಮ್ಮ ಪ್ರೀತಿ ವಿಶ್ವಾಸವನ್ನು ಗಳಿಸಿ ನಿಮ್ಮ ಮುಂದೆ ಬರುತ್ತೇವೆ ಎಂದರು.
ಶಿವಕುಮಾರ
ಸ್ವಾಮೀಜಿಗಳ
ಸ್ಪೂರ್ತಿ
ಈ
ನೆಲದಲ್ಲಿ
ಅವರ
ಸ್ಫೂರ್ತಿ,
ಪ್ರೇರಣೆ
ಇದೆ.
ಇಲ್ಲಿ
ಬಂದರೆ
ಮನಸ್ಸಿಗೆ
ಶಾಂತಿ,
ಬದುಕಿಗೆ
ದಾರಿ
ಸಿಗುವ
ಶಕ್ತಿ
ಸಿದ್ದಗಂಗಾ
ಕ್ಷೇತ್ರದಲ್ಲಿ
ಇದೆ.
ಅದೇ
ದಾರಿಯಲ್ಲಿ
ಸಿದ್ದಲಿಂಗಸ್ವಾಮಿಗಳು
ಶಿವಕುಮಾರ
ಸ್ವಾಮಿಗಳ
ಪರಂಪರೆಯನ್ನು
ಅತ್ಯಂತ
ಪ್ರಾಮಾಣಿಕವಾಗಿ
ದಕ್ಷತೆಯಿಂದ
ಜನರ
ಭಾವನೆಗಳನ್ನು
ಅರ್ಥ
ಮಾಡಿಕೊಂಡು
ಯೋಗ್ಯವಾಗಿ
ಮುನ್ನಡೆಸುತ್ತಿದ್ದಾರೆ
ಎಂದು
ಹೇಳಿದರು.
ಅನನ್ಯ
ಸೇವೆಯ
ದಾಖಲೆ
ಶ್ರೀ
ಶಿವಕುಮಾರ
ಸ್ವಾಮೀಜಿ
ಸುಮಾರು
88
ವರ್ಷಗಳ
ಕಾಲ
ಈ
ನಾಡಿನ
ಸೇವೆಯನ್ನು
ಮಠದ
ಮುಖಾಂತರ
ಮಾಡಿರುವುದು
ಒಂದು
ದಾಖಲೆ.
ಯಾವುದೇ
ಪರಮಪೂಜ್ಯರು
ಇಷ್ಟು
ದೀರ್ಘಕಾಲದ
ಸೇವೆಯನ್ನು
ಇಡೀ
ಭಾರತ
ದೇಶದಲ್ಲಿ
ಮಾಡಿಲ್ಲ
ಎನ್ನುವುದು
ನಮ್ಮೆಲ್ಲರಿಗೂ
ಅಭಿಮಾನದ
ಸಂಗತಿ.
ಅದಕ್ಕಾಗಿಯೇ
ಅವರಿಗೆ
ನಡೆದಾಡುವ
ದೇವರು
ಎಂಬ
ಬಿರುದು
ಬಂದಿದೆ.
ಅವರು ಹಚ್ಚಿದ ಒಲೆಯ ಕಿಚ್ಚು ಸುಮಾರು 100 ವರ್ಷಕ್ಕಿಂತ ಹೆಚ್ಚಿನದಾಗಿದ್ದು, ಇಂದಿಗೂ ಉರಿಯುತ್ತಿದೆ. ಎಲ್ಲಿಯವರೆಗೆ ಈ ಅಡಿಗೆ ಒಲೆಯ ಕಿಚ್ಚು ಉರಿಯುತ್ತಿರುತ್ತದೆ, ಅಲ್ಲಿಯವರೆಗೆ ಬಡ ಮಕ್ಕಳ ಹೊಟ್ಟೆ ತಣ್ಣಗಾಗುತ್ತದೆ ಎಂದರು. ನಾವೆಲ್ಲರೂ ಕೋಟಿ ಕೋಟಿ ಗುರುವಂದನೆಗಳನ್ನು ಸದಾ ಸಲ್ಲಿಸಬೇಕು. ಅನ್ನ, ಅಕ್ಷರ, ಆಶ್ರಯಗಳನ್ನು ಅಕ್ಷರಶಃ ಪಾಲಿಸಿದ ದೇವರು ಶಿವಕುಮಾರ ಸ್ವಾಮೀಜಿ. ಅವರು ನಮ್ಮ ನಡುವೆ ಜೀವಂತವಾಗಿದ್ದು, ಪ್ರೇರಣೆ, ಆಶೀರ್ವಾದ ನೀಡುತ್ತಿದ್ದಾರೆ.
ಸರ್ವೋದಯ
ಮತ್ತು
ಅಂತ್ಯೋದಯ
ಪರಿಕಲ್ಪನೆ
ಸಾಧಕನಿಗೆ
ಸಾವು
ಅಂತ್ಯವಲ್ಲ.
ಸಾವಿನ
ನಂತರವೂ
ಬದುಕುವವನು
ನಿಜ
ಸಾಧಕ
ಎಂದು
ಸ್ವಾಮಿ
ವಿವೇಕಾನಂದರು
ಹೇಳಿದಂತೆ
ಅವರು
ಬದುಕಿದ್ದಾರೆ.
ಶಿವಕುಮಾರ
ಸ್ವಾಮೀಜಿ
ಅವರು
ಬದುಕಿನ
ದಾರಿಯನ್ನು
ಕಟ್ಟಿಕೊಟ್ಟಿರುವ
ಸ್ವಾಮೀಜಿಗಳು.
ದೂರದ
ಉತ್ತರ
ಕರ್ನಾಟಕದ
ಮಕ್ಕಳು,
ಎಲ್ಲಾ
ಸಮುದಾಯದ
10
ಸಾವಿರಕ್ಕೂ
ಹೆಚ್ಚು
ಮಕ್ಕಳನ್ನು
ಸಲಹುವುದು
ಸುಲಭದ
ಮಾತಲ್ಲ.
ದೈವಶಕ್ತಿ
ನಮ್ಮೆಲ್ಲರಿಗೂ
ಮಾರ್ಗದರ್ಶನ
ಮಾಡುತ್ತಿದೆ.
ಅವರ
ಶ್ರದ್ಧೆ,
ನಿಷ್ಠೆ
ಮತ್ತು
ಪರಿಶ್ರಮ
ಅವರ
ಧ್ಯೇಯ.
ಅದರ
ಪರಿಪಾಲನೆ
ಮಾಡುವುದು
ನಮ್ಮೆಲ್ಲರ
ಕರ್ತವ್ಯ.
ಶಿವಕುಮಾರ ಸ್ವಾಮೀಜಿ ಅವರಿಗೆ ಜಾತಿ- ಕುಲ ಎಂದು ನೋಡದೆ, ಎಲ್ಲ ವರ್ಗದ ಜನರನ್ನು ಪ್ರೀತಿ ಮಾಡಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಸರ್ವೋದಯ ಮತ್ತು ಅಂತ್ಯೋದಯ ಪರಿಕಲ್ಪನೆ ಈ ಮಠದಲ್ಲಿ ನಿತ್ಯ ನಿರಂತರವಾಗಿ ನಡೆಯುತ್ತಿದೆ. ಅಂತ್ಯೋದಯ ಪರಿಕಲ್ಪನೆಯಲ್ಲಿ ಅತ್ಯಂತ ಕಟ್ಟ ಕಡೆಯ ಮನುಷ್ಯನಿಗೆ ಇಲ್ಲಿ ಸ್ಥಾನವಿದೆ. ಅವನು ತನ್ನ ಬದುಕು ಪ್ರಾರಂಭಿಸಲು ಎಲ್ಲ ರೀತಿಯ ವ್ಯವಸ್ಥೆ ಶ್ರೀ ಮಠದಲ್ಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ 115ನೇ ಜಯಂತಿ ಹಿನ್ನೆಲೆ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ತುಮಕೂರು ಸಿದ್ದಗಂಗಾ ಮಠದಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯುತ್ತಿದೆ. 'ನಡೆದಾಡುವ ದೇವರ ಬಸವ ಭಾರತ' ಹೆಸರಿನಲ್ಲಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹಿತ ಹಲವು ಗಣ್ಯರು ಪಾಲ್ಗೊಂಡಿದ್ದಾರೆ.