Get Updates
Get notified of breaking news, exclusive insights, and must-see stories!

Gubbi Constituency: ಗುಬ್ಬಿ ರಾಜಕೀಯ ಚಿತ್ರಣ ಬದಲಿಸಿರುವ ಶಾಸಕ ಶ್ರೀನಿವಾಸ್, ಐದನೇ ಬಾರಿ ಗೆಲುವು ಸಾಧಿಸುವರೇ?

ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಈ ಬಾರಿಯೂ ಗೆಲುವು ಸಾಧಿಸಬೇಕು ಎಂಬ ಹಠದಲ್ಲಿದ್ದಾರೆ.

ತುಮಕೂರು, ಮಾರ್ಚ್ 15: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಲ್ಲಿ ಗುಬ್ಬಿ ವಿಧಾನಸಭಾ ಕ್ಷೇತ್ರವು ಒಂದು. ಇದು ತುಮಕೂರು ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಈ ಬಾರಿಯು ಚುನಾವಣೆಯಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ಬಾರಿಯಿಂದ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ವಾಸಣ್ಣ( ಎಸ್ ಆರ್ ಶ್ರೀನಿವಾಸ್) ಈ ಚುನಾವಣೆಯ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಹೌದು, 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದ ಎಸ್ ಆರ್ ಶ್ರೀನಿವಾಸ್ ಮತ್ತೆ ಹಿಂತಿರುಗಿ ನೋಡಿಯೇ ಇಲ್ಲ. ಅಲ್ಲಿಂದ ಪ್ರತಿ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದಾರೆ. ಆದರೆ, ಈ ಬಾರಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಜೆಡಿಎಸ್ ಮತ್ತೋಬ್ಬರನ್ನು ಅಭ್ಯರ್ಥಿಯಾಗಿಸಿದೆ. ಬಿಜೆಪು ಕೂಡ ಇಲ್ಲಿ ತನ್ನ ಅಭ್ಯರ್ಥಿ ಆಯ್ಕೆ ಮಾಡದೇ ಗೊಂದಲದಲ್ಲಿದೆ.

Karnataka Assembly Elections 2023: Gubbi Assembly Constituency Analysis

ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಈ ಬಾರಿಯೂ ಗೆಲುವು ಸಾಧಿಸಬೇಕು ಎಂಬ ಹಠದಲ್ಲಿದ್ದಾರೆ. 2004 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು ಬಳಿಕ ಜಾತ್ಯಾತೀತ ಜನತಾದಳ ಸೇರಿ ಮೂರು ಬಾರಿ ಪಕ್ಷದಿಂದ ಸ್ಪರ್ಧೆ ಮಾಡಿ ಇದನ್ನು ಜೆಡಿಎಸ್ ಭದ್ರಕೋಟೆಯನ್ನಾಗಿದ್ದಾರೆ. ಆದರೆ, ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ವಿಪ್‌ಗೆ ಎಸ್ ಆರ್ ಶ್ರೀನಿವಾಸ್ ಸೆಡ್ಡು ಹೊಡೆದು ಕಾಂಗ್ರೆಸ್‌ಗೆ ಬೆಂಬಲ ನೀಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ.

ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್ (ವಾಸಣ್ಣ) ಅವರ ಉಚ್ಛಾಟನೆಯಿಂದ ಕ್ಷೇತ್ರದ ರಾಜಕೀಯ ಚಿತ್ರಣವೇ ಬದಲಾಗಿದೆ. 2004ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಇವರು ಗುಬ್ಬಿಯ ಸೋಲಿಲ್ಲದ ಸರದಾರ. 2008, 2013, 2018 ರಲ್ಲಿ ಜಾತ್ಯಾತೀತ ಜನರಾದಳದಿಂದ ಸ್ಪರ್ಧಿಸಿ ಗೆದ್ದರು. ಸತತ 4 ಗೆಲುವು ಕಂಡಿರುವ ಶ್ರೀನಿವಾಸ್‌ಗೆ ಕಾಂಗ್ರೆಸ್ ಟಿಕೆಟ್ ಸಿಗಲಿದೆಯಾ ಎಂಬುದೇ ದೊಡ್ಡ ಪ್ರಶ್ನೆ. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಪಕ್ಷಕ್ಕೆ ಸೆಡ್ಡು ಹೊಡೆದ ಎಸ್‌.ಆರ್‌. ಶ್ರೀನಿವಾಸ್‌ಗೆ ಬುದ್ಧಿ ಕಲಿಸಲು ಜೆಡಿಎಸ್ ಈಗಾಗಲೇ ಇಲ್ಲಿ ಬಿ.ಎಸ್‌. ನಾಗರಾಜು ಎಂಬ ಅಭ್ಯರ್ಥಿಯನ್ನು ಘೋಷಿಸಿ ಬೃಹತ್‌ ಸಮಾವೇಶವನ್ನೂ ನಡೆಸಿದೆ. ಇದರ ಜೊತೆಗೆ ಇತ್ತೀಚೆಗೆ ಜೆಡಿಎಸ್‌ನ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ ಮಾಜಿ ಸಚಿವ ಎಸ್. ಆರ್.‌ ಶ್ರೀನಿವಾಸ್‌ಗೆ ಪಕ್ಷಕ್ಕೆ ಮರಳಿ ಬನ್ನಿ ಎಂದು ಆಹ್ವಾನ ನೀಡಿದ್ದಾರೆ. "ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಎಸ್. ಆರ್.‌ ಶ್ರೀನಿವಾಸ್ ಮೇಲೆ ಗೌರವವಿದೆ. ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ನಮಗೆ ಯಾರ ಬಗ್ಗೆಯೂ ದ್ವೇಷವಿಲ್ಲ. ಎಲ್ಲರಿಗೂ ಕೈ ಮುಗಿದು ಒಳಗೆ ಬಾ ಯಾತ್ರಿಕನೇ" ಎಂದಿದ್ದಾರೆ.

Karnataka Assembly Elections 2023: Gubbi Assembly Constituency Analysis

ಇತ್ತ ಕಾಂಗ್ರೆಸ್‌ನಲ್ಲಿ ಟಿಕೆಟ್ ಹಂಚಿಕೆಯೇ ದೊಡ್ಡ ತಲೆನೋವಾಗಿದೆ. ತಮ್ಮ ಪಕ್ಷಕ್ಕೆ ಬೆಂಬಲ ನೀಡಿ ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿರುವ ಹಾಲಿ ಶಾಸಕ ಎಸ್. ಆರ್.‌ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವುದೋ ಅಥವಾ ಬೇರೊಬ್ಬರಿಗೆ ಟಿಕೆಟ್ ನೀಡಬೇಕೋ ಎಂಬ ಗೊಂದಲದಲ್ಲಿದೆ. ಎಸ್. ಆರ್.‌ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ನಾಯಕರಾದ ಹೊನ್ನಗಿರಿ ಗೌಡ, ಜಿ.ಎಸ್‌.ಪ್ರಸನ್ನಕುಮಾರ್‌ ಕೂಡ ಕಾಂಗ್ರೆಸ್‌ ಟಿಕೆಟ್ ಬಯಸಿದ್ದಾರೆ. ಪ್ರಸನ್ನಕುಮಾರ್ ತಮ್ಮ ಲಿಂಗಾಯತ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಪಡೆದುಕೊಂಡರೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಟಿಕೆಟ್ ಪಡೇಯಲೇಬೇಕು ಎಂಬ ಹಠದಲ್ಲಿದ್ದಾರೆ.

ಇನ್ನೂ ಬಿಜೆಪಿ ಸ್ಥಿತಿ ಕೂಡ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತೇನಿಲ್ಲ. ಜಿ.ಎನ್‌.ಬೆಟ್ಟಸ್ವಾಮಿ ಒಮ್ಮೆ ಬಿಜೆಪಿ ಮತ್ತು ಒಮ್ಮೆ ಕೆಜೆಪಿಯಿಂದ ಹಾಲಿ ಶಾಸಕ ಎಸ್. ಆರ್.‌ ಶ್ರೀನಿವಾಸ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದಾರೆ. ಈ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರ ಜೊತೆಗೆ ಎಸ್‌.ಡಿ. ದಿಲೀಪ್‌ ಕುಮಾರ್‌ ಕೂಡ ಪಕ್ಷ್ ಟಿಕೆಟ್‌ಗಾಗಿ ಪೈಪೋಟಿಯಲ್ಲಿದ್ದಾರೆ. ಇವರುಗಳ ಜೊತೆಗೆ ಜಿಲ್ಲಾ ಪಂಚಾಯತ್ ಮಾಜಿ ಸಚಿವ ಪಿ.ಬಿ. ಚಂದ್ರಶೇಖರ ಬಾಬು ಕೂಡ ಟಿಕೆಟ್ ಆಕಾಂಕ್ಷಿಗಳ ಸಾಲಿನಲ್ಲಿದ್ದಾರೆ.

*ಜಾತಿ ಲೆಕ್ಕಾಚಾರ*

ಗುಬ್ಬಿ ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಪ್ರಾಬಲ್ಯವಿದೆ. ನಂತರದ ಸ್ಥಾನದಲ್ಲಿಒಕ್ಕಲಿಗರು, ಗೊಲ್ಲ, ತಿಗಳ ಸಮುದಾಯದವರಿದ್ದಾರೆ. ಇಲ್ಲಿಯವರೆಗೂ ಇಲ್ಲಿ ಒಕ್ಕಲಿಗ ಅಥವಾ ಲಿಂಗಾಯಿತ ಸಮುದಾಯದವರೇ ಶಾಸಕರಾಗಿ ಆಯ್ಕೆಯಾಗುತ್ತಿದ್ದಾರೆ. ಹಾಲಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಒಕ್ಕಲಿಗರು. ಈ ವರ್ಷ ಜೆಡಿಎಸ್ ಅಭ್ಯರ್ಥಿ ಬಿ.ಎಸ್‌. ನಾಗರಾಜು ಒಕ್ಕಲಿಗರು. ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಲ್ಲಿ ಜಿ.ಎನ್‌. ಬೆಟ್ಟಸ್ವಾಮಿ ಗೊಲ್ಲಸಮುದಾಯ, ಚಂದ್ರಶೇಖರ ಬಾಬು ಮತ್ತು ಎಸ್‌.ಡಿ. ದಿಲೀಪ್‌ ಕುಮಾರ್‌ ಲಿಂಗಾಯತ ಮುಖಂಡರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಪ್ರಸನ್ನಕುಮಾರ್ ಲಿಂಗಾಯತ ಸಮುದಾಯದವರು.

Karnataka Assembly Elections 2023: Gubbi Assembly Constituency Analysis

ಕಳೆದ ನಾಲ್ಕು ಬಾರಿಯಿಂದ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಗೆಲುವು ಕಂಡಿದ್ದರೂ ಕೂಡ ಇಲ್ಲಿಯವರೆಗೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಇಂದಿಗೂ ಗುಬ್ಬಿಯಲ್ಲಿ ಸರಿಯಾದ ರಸ್ತೆಗಳಿಲ್ಲ. ಹದಗೆಟ್ಟ ರಸ್ತೆಗಳು ಇಲ್ಲಿನ ಅಭಿವೃದ್ಧಿಗೆ ಹಿಡಿದ ಕನ್ನಡಿ. ತಾಲೂಕಿನ ಮಧ್ಯಭಾಗದಲ್ಲಿರುವ ಬಸ್‌ ನಿಲ್ದಾಣಗಳ ಅವ್ಯವಸ್ಥೆ ನೋಡಿದ ತಕ್ಷಣ ತಿಳಿಯುತ್ತದೆ. ಇವುಗಳ ಭಯದಿಂದಲೇ ಕ್ಷೇತ್ರದಲ್ಲಿ ಮತ್ತೆ ಎಸ್‌.ಆರ್‌.ಶ್ರೀನಿವಾಸ್‌ ಗೆಲುವು ಕಾಣಬೇಕು ಎಂದು ಶಾಸಕರ ಪತ್ನಿ ಮತ್ತು ಪುತ್ರ ಕುಕ್ಕರ್ ಹಂಚುತ್ತಿದ್ದಾರೆ ಎಂಬ ಆರೋಪಗಳಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+