ಯಾದಗಿರಿ: ಅಪಘಾತದಲ್ಲಿ 3 ಯುವಕರ ಸಾವು, ವಾಹನ ಚಾಲಕ ಪರಾರಿ

ಯಾದಗಿರಿ, ಜುಲೈ 28: ಖಗ್ರಾಸ ಚಂದ್ರಗ್ರಹಣದ ಮರುದಿನವೇ ಯಾದಗಿರಿ ತಾಲೂಕಿನ ಮುಂಡರಗಿ ಗ್ರಾಮದ ಬಳಿ ಬೈಕ್, ಬುಲೆರೋ ವಾಹನದ ನಡುವೆ ಅಪಘಾತ ಸಂಭವಿಸಿ ಮೂವರು ದುರ್ಮರಣ ಅಪ್ಪಿದ್ದಾರೆ.

ಯಾದಗಿರಿ-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಮುಂಡರಗಿ ಬಳಿ ಈ ಅಪಘಾತ ಸಂಭವಿಸಿದ್ದು ಮೃತರನ್ನು ಅಂಬರೀಶ್(23), ರವಿ(21) ಅಯ್ಯಪ್ಪ(24)ಎಂದು ಗುರುತಿಸಲಾಗಿದೆ.

ಮೂವರೂ ಯುವಕರು ಬೈಕ್ ನಲ್ಲಿ ತೆರಳುತ್ತಿದ್ದಾಗ ಎದುರು ಬಂದ ಬುಲೆರೋ ವಾಹನದ ನಡುವೆಕ್ಕೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ. ಅಪಘಾತದ ಬಳಿಕ ಬುಲೆರೊ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Three young men died in accident near Yadagiri

ಅಪಘಾತಗಳ ಹೆದ್ದಾರಿ
ಯಾದಗಿರಿ, ಹೈದರಾಬಾದ್, ವಿಜಯಪುರ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಆದರೂ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ.

ಹೆದ್ದಾರಿಯ ಯಾವುದೇ ಭಾಗದಲ್ಲೂ ಸೂಚನಾ ಫಲಕಗಳು ಇಲ್ಲ. ಇದು ಕೂಡ ಅಪಘಾತಗಳಿಗೆ ದಾರಿ ಮಾಡಿಕೊಡುತ್ತಿದೆ. ಅಂತರಾಜ್ಯ ಕಲ್ಪಿಸುವ ರಸ್ತೆಯಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ.

ವರ್ಷದ ಹಿಂದೆ ಕೂಡ ಇದೇ ರಸ್ತೆಯಲ್ಲಿ ಬೂದಿ ಸಾಗಿಸುವ ಕ್ಯಾಂಟರ್, ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯಾಗಿ ಗಣಪುರ ಗ್ರಾಮದ ಸ್ಥಳದಲ್ಲೇ ಎಂಟು ಜನ ಮೃತಪಟ್ಟಿದ್ದರು. ಆದರೂ ಕೂಡ ಅಧಿಕಾರಿಗಳು ಅಪಘಾತ ಕಡಿಮೆಯಾಗಲು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸಾರ್ವಜನಿಕ ಆಕ್ರೋಶ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+