ಆಡು ಮಾರಿ ಸಿಎಂ ನಿಧಿಗೆ ದೇಣಿಗೆ ನೀಡಿದ್ದ ಸುಬೈದಾ ಕೇರಳ ಪ್ರಮಾಣವಚನ ಸಮಾರಂಭದಲ್ಲಿ ವಿಶೇಷ ಅತಿಥಿ
ಕೊಲ್ಲಂ, ಮೇ 20: ತನ್ನ ಜೀವನೋಪಾಯದ ಮಾರ್ಗವಾಗಿದ್ದ ತನ್ನ ಆಡು, ಕುರಿಗಳನ್ನು ಎರಡು ಬಾರಿ ಮಾರಿ, ಮುಖ್ಯಮಂತ್ರಿಯ ಪರಿಹಾರ ನಿಧಿಗೆ ಹಣವನ್ನು ದೇಣಿಗೆ ನೀಡಿದ ಸುಬೈದಾ ಉಮ್ಮಾ, ಪಿಣರಾಯಿ ನೇತೃತ್ವದ 2.0 ಸರ್ಕಾರದ ಪ್ರಮಾಣವಚನ ಸಮಾರಂಭದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ನಿನ್ನೆಯಷ್ಟೇ ಅವರಿಗೆ ಕಲೆಕ್ಟರ್ ವಿವಿಐಪಿ ಪಾಸ್ ನೀಡಿದ್ದಾರೆ.
ಕೊರೊನಾ ಮೊದಲನೇ ಅಲೆಯ ಸಂದರ್ಭದಲ್ಲಿ ಸಿಎಂ ಪಿಣರಾಯಿ ವಿಜಯನ್ ನಡೆಸುತ್ತಿದ್ದ ಎಲ್ಲಾ ಪತ್ರಿಕಾಗೋಷ್ಠಿ ಟಿವಿ ಮೂಲಕ ನೋಡುತ್ತಿದ್ದ ಸುಬೈದಾ, ಕೆಲವು ಮಕ್ಕಳು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡುವುದನ್ನು ನೋಡಿದ್ದರು. ಈ ಮಕ್ಕಳಂತೆ ತಾನು ಕೂಡಾ ಏನಾದರೂ ಸಹಾಯ ಮಾಡಬೇಕು ಎಂದು ನಿರ್ಧರಿಸಿದ ಸುಬೈದಾ, ನಾಲ್ಕು ಆಡುಗಳನ್ನು 12,000 ರೂ. ಗಳಿಗೆ ಮಾರಾಟ ಮಾಡಿ, ಈ ಪೈಕಿ 5,000 ರೂಗಳನ್ನು ಕಲೆಕ್ಟರ್ಗೆ ಹಸ್ತಾಂತರಿಸಿ, ಉಳಿದ ಹಣದಲ್ಲಿ ಬಡವರಿಗೆ ಆಹಾರ ಪೂರೈಸಿದ್ದಾರೆ.
ಇತ್ತೀಚೆಗೆ, ಕೋವಿಡ್ ಲಸಿಕೆ ಉಚಿತವಾಗಿ ಲಭ್ಯವಾಗುವುದಿಲ್ಲ ಎಂಬ ಸುದ್ದಿಯನ್ನು ಕೇಳಿ ಸುಬೈದಾ ಮತ್ತೆ ದೇಣಿಗೆ ನೀಡಲು ನಿರ್ಧರಿಸಿದ್ದು, ಎರಡು ಕುರಿಮರಿ ಮತ್ತು ಎರಡು ದೊಡ್ಡ ಆಡುಗಳನ್ನು ಮತ್ತೆ 16,000 ರೂ.ಗೆ ಮಾರಾಟ ಮಾಡಿ ಇದರಲ್ಲಿ 5,000 ರೂಗಳನ್ನು ಕಲೆಕ್ಟರ್ಗೆ ಹಸ್ತಾಂತರಿಸಿ, ಉಳಿದ ಹಣದಲ್ಲಿ ಬಡವರಿಗೆ ಆಹಾರ ಪೂರೈಸಲು ವ್ಯಯಿಸಿದ್ದಾರೆ.

ಸುಬೈದಾ ಉಮ್ಮಾ ಮತ್ತು ಆಕೆಯ ಕುಟುಂಬವು ಪಲ್ಲಿತೋತ್ತಂ ಪೊಲೀಸ್ ಠಾಣೆ ಎದುರಿನ ಸಂಗಮಂ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದಾರೆ. ಸುಬೈದಾ ಮತ್ತು ಆಕೆಯ ಪತಿ ಅಬ್ದುಲ್ ಸಲಾಮ್ ತಮ್ಮ ಮನೆಯ ಬಳಿ ಚಹಾ ಅಂಗಡಿಯೊಂದನ್ನು ತೆರೆದಿದ್ದು ಆದರೆ ಅದರಲ್ಲಿ ಸಾಕಷ್ಟು ಆದಾಯವಿಲ್ಲದ ಹಿನ್ನೆಲೆ ಆಡುಗಳನ್ನು ಸಾಕುತ್ತಿದ್ದಾರೆ. ನಿಶಾ, ಶೀಜಾ ಮತ್ತು ಕುಂಜುಮೊನ್ ಎಂಬ ಮೂವರು ಮಕ್ಕಳಿದ್ದಾರೆ. ಮೂವರು ವಿವಾಹಿತರು.
ಕೇರಳದ ಪಿಣರಾಯ್ ವಿಜಯನ್ ನೇತೃತ್ವದ 2.0 ಸರ್ಕಾರದ ನೂತನ ಸಚಿವರುಗಳು ಗುರುವಾರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಹೊಸಬರಿಗೆ ಈ ಸಂಪುಟದಲ್ಲಿ ಅವಕಾಶ ನೀಡಿರುವುದು ಮಾದರಿ ನಡೆ ಎಂದು ಶ್ಲಾಘಿಸಲಾಗಿದ್ದರೂ ಆರೋಗ್ಯ ಸಚಿವೆಯಾಗಿದ್ದ ಕೆ.ಕೆ. ಶೈಲಜಾಗೆ ಅವಕಾಶ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.
Courtesy: thenewsminute
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications