Get Updates
Get notified of breaking news, exclusive insights, and must-see stories!

ಕೇರಳದ ಫೇಸ್ ಬುಕ್ ಪುಟದಲ್ಲಿ ಕನ್ನಡ ಸಾಲು ನೋಡೋಕೇ ಚೆಂದ

ತಿರುವನಂತಪುರಂ, ಜೂನ್ 14: ಕೇರಳ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಫೇಸ್ ಬುಕ್ ಪುಟದಲ್ಲಿ ಕನ್ನಡ ಪೋಸ್ಟ್ ಗಳು ರಾರಾಜಿಸುತ್ತಿದ್ದು, ಇದನ್ನು ಕನ್ನಡಿಗರು ಸ್ವಾಗತಿಸಿದ್ದಾರೆ.

ಕಳೆದ ವರ್ಷ ಕೇರಳದಲ್ಲಿ ಉಂಟಾದ ಪ್ರವಾಹದಿಂದಾಗಿ ಕೇರಳದಲ್ಲಿ ಪ್ರವಾಸೋದ್ಯಮ ಕುಂಠಿತವಾಗಿದ್ದು, ಜನರು ಕೇರಳದತ್ತ ಮುಖ ಮಾಡುವುದಕ್ಕೇ ಭಯ ಪಡುತ್ತಿದ್ದಾರೆ. ಅದರೊಟ್ಟಿಗೆ ಇದೀಗ ನಿಪಾಹ್ ವೈರಸ್ ಭೀತಿಯೂ ಆವರಿಸಿರುವದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ಸಿಕ್ಕುತ್ತಿಲ್ಲ. ಇದರಿಂದಾಗಿ ಪ್ರವಾಸೋದ್ಯಮ ಇಲಾಖೆ ನಷ್ಟದಲ್ಲಿದ್ದು, ಅದನ್ನು ಮೇಲೆತ್ತುವ ಎಲ್ಲಾ ಪ್ರಯತ್ನವನ್ನೂ ಇಲ್ಲಿಸ ಸರ್ಕಾರ ಮಾಡುತ್ತಿದೆ.

ಸಮೃದ್ಧ ನೈಸರ್ಗಿಕ ಸಂಪತ್ತನ್ನು ಹೊಂದಿರುವ ಕೇರಳ ದೇವರ ಸ್ವಂತ ನಾಡು ಎಂಬ ಖ್ಯಾತಿ ಗಳಿಸಿದ್ದೇ ಅದರ ಸುಂದರ ತಾಣಗಳ ಮೂಲಕ. ಕೇರಳ ಸರ್ಕಾರಕ್ಕೆ ಪ್ರಮುಖ ಆದಾಯದ ಮೂಲವಾಗಿದ್ದೇ ಪ್ರವಾಸೋದ್ಯಮ. ಆದರೆ ಇದೀಗ ಪ್ರವಾಸೋದ್ಯಮಕ್ಕೇ ಕುತ್ತು ಉಂಟಾಗುತ್ತಿದ್ದು, ಇದು ಸರ್ಕಾರಕ್ಕೆ ಆತಂಕವನ್ನುಂಟು ಮಾಡಿದೆ.

Kannada posts in Kerala government tourism departments official facebook page

ದೇಶದಾದ್ಯಂತ ಹಲವೆಡೆ ಇರುವ ಮತ್ತು ಕರ್ನಾಟಕದಾದ್ಯಂತ ಇರುವ ಕನ್ನಡಿಗರನ್ನು ಸೆಳೆಯುವ ಉದ್ದೇಶದಿಂದ ಕೇರಳ ಪ್ರವಾಸೋದ್ಯಮ ಇಲಾಖೆ ಈ ಉಪಾಯ ಮಾಡಿದೆ.

Kannada posts in Kerala government tourism departments official facebook page

ಕೇರಳದ ಪ್ರಸಿದ್ಧ ಪ್ರವಾಸೋದ್ಯಮ ತಾಣವಾದ ವರ್ಕಾಲ, ಮುನ್ನಾರ್, ಕೊಚ್ಚಿ ಸೇರಿದಂತೆ ಹಲವು ಸ್ಥಳಗಳ ಬಗ್ಗೆ ಕನ್ನಡದಲ್ಲೇ ಪೋಸ್ಟ್ ಮಾಡಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+