ಕೇರಳದಲ್ಲಿ ಬಂಧಿತ ಉಗ್ರ ರಿಯಾಜ್ ಬಾಯ್ಬಿಟ್ಟ ಭಯಾನಕ ಸಂಗತಿಗಳು
ತಿರುವನಂತಪುರಂ,ಏಪ್ರಿಲ್ 30: ದೇವರನಾಡು ಕೇರಳದಲ್ಲೂ ಲಂಕಾ ಮಾದರಿಯಲ್ಲಿ ಆತ್ಮಾಹುತಿ ದಾಳಿಯನ್ನು ನಡೆಸಲು ಐಎಸ್ಐಎಸ್ ಸಂಚು ನಡೆಸಿರುವುದು ಈಗ ಬಯಲಾಗಿದೆ.
ಐಎಸ್ಐಎಸ್ ಜೊತೆ ನಂಟು ಹೊಂದಿರುವ ರಿಯಾಜ್ ಎನ್ನುವ ವ್ಯಕ್ತಿಯನ್ನು ರಾಷ್ಟ್ರೀಯ ತನಿಖಾ ದಳ ಎನ್ಐಎ ಸೋಮವಾರವಾರ ಬಂಧಿಸಿದ್ದು ವಿಚಾರಣೆ ವೇಳೆ ಈ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ಮುಸ್ಲಿಂ ಧರ್ಮ ಪ್ರಚಾರಕ ಝಾಕಿರ್ ನಾಯಕ್ ಹಾಗೂ ಶ್ರೀಲಂಕಾ ಉಗ್ರ ದಾಳಿಯ ಸಂಚುಕೋರ ಜೆಹ್ರನ್ ಹಶೀಮ್ ಭಾಷಣದಿಂದ ಪ್ರೇರಿತನಾಗಿದ್ದ ರಿಯಾಜ್ ಕೇರಳದಲ್ಲೂ ಅದೇ ಮಾದರಿಯ ದಾಳಿಯನ್ನು ನಡೆಸಲು ಹೊಂಚು ಹಾಕುತ್ತಿದ್ದ.

ಅಷ್ಟೇ ಅಲ್ಲದೆ ಈ ದಾಳಿ ಹಾಗೂ ಭಾರತದಲ್ಲಿ ಐಎಸ್ಐಎಸ್ ಕಾರ್ಯಾಚರಣೆ ಕುರಿತಂತೆ ಸಿರಿಯಾದಲ್ಲಿರುವ ಉಗ್ರರಾದ ಅಬ್ದುಲ್ ಖಯೂಮ್ ಜೊತೆಗೂ ಈತ ಮಾತುಕತೆ ನಡೆಸಿದ್ದ ಎನ್ನು ಮಾಹಿತಿ ಲಭ್ಯವಾಗಿದೆ.
ಹಶೀಮ್ ಶ್ರೀಲಂಕಾದಲ್ಲಿ ಈಸ್ಟರ್ ಸಂಡೇ ನಡೆದ ಆತ್ಮಾಹುತಿ ಬಾಂಬ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ರಿಯಾಜ್ ಬಳಿ ಅಬ್ದುಲ್ಲಾ ಆಡಿಯೋ ಕ್ಲಿಪ್ ಕೂಡ ಲಭ್ಯವಾಗಿದೆ. ರಿಯಾಜ್ ಅಬ್ದುಲ್ಲಾ ಜೊತೆ ಆನ್ಲೈನ್ ಚಾಟ್ ನಡೆಸುತ್ತಿದ್ದ.












Click it and Unblock the Notifications