ಕೇರಳದಲ್ಲಿ ಓಣಂಗೆ ಮಾರಾಟವಾದ ಮದ್ಯ ಎಷ್ಟು ಗೊತ್ತಾ?
ತಿರುವನಂತಪುರಂ, ಸೆಪ್ಟೆಂಬರ್ 11: ಓಣಂ 2022ರ ಮೊದಲ ದಿನದಂದು ಕೇರಳದಲ್ಲಿ 624 ಕೋಟಿ ರೂಪಾಯಿಗಳ ದಾಖಲೆಯ ಮದ್ಯ ಮಾರಾಟವಾಗಿದ್ದು, ಇದು 2021ರಲ್ಲಿ ಮಾರಾಟವಾದ 529 ಕೋಟಿ ರೂಪಾಯಿಗಳಿಂದ ಹೆಚ್ಚಾಗಿದೆ.
ರಾಜ್ಯದಲ್ಲಿ ಮದ್ಯದ ಏಕೈಕ ಸಗಟು ಮಾರಾಟಗಾರ ಕೇರಳ ರಾಜ್ಯ ಪಾನೀಯಗಳ ನಿಗಮ (ಬೆವ್ಕೋ) ), ಶುಕ್ರವಾರ, ಸೆಪ್ಟೆಂಬರ್ 9 ರಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಒಂದು ವಾರದ ಮಾರಾಟದ ವಹಿವಾಟನ್ನು ತೋರಿಸಿದೆ.
ಕೇರಳ ರಾಜ್ಯ ಪಾನೀಯಗಳ ನಿಗಮಕ್ಕೆ ಸೇರಿದ ಕೊಲ್ಲಂ, ಇರಿಂಜಲಕುಡ, ಚೆರ್ಟಾಲೈ ಮತ್ತು ಪಯ್ಯನ್ನೂರ್ನಲ್ಲಿರುವ ನಾಲ್ಕು ರಿಟೆಲ್ ಮಳಿಗೆಗಳು 1 ಕೋಟಿ ರೂ.ಗಿಂತ ಹೆಚ್ಚಿನ ಮಾರಾಟವನ್ನು ಮಾಡಿವೆ. ಕೊಲ್ಲಂ ಘಟಕವು 1.06 ಕೋಟಿ ರೂಪಾಯಿಗಳ ಮಾರಾಟದೊಂದಿಗೆ ಮೊದಲ ಸ್ಥಾನದಲ್ಲಿದೆ.

ಕೇರಳದಲ್ಲಿ ಮದ್ಯ ಸೇವನೆಯ ಕುರಿತಾದ ಅಧ್ಯಯನಗಳು ರಾಜ್ಯದ 3.34 ಕೋಟಿ ಜನಸಂಖ್ಯೆಯಲ್ಲಿ ಸುಮಾರು 32.9 ಲಕ್ಷ ಜನರು ಮದ್ಯ ಸೇವಿಸುತ್ತಾರೆ. ಇದರಲ್ಲಿ 29.8 ಲಕ್ಷ ಪುರುಷರು ಮತ್ತು 3.1 ಲಕ್ಷ ಮಹಿಳೆಯರು ಸೇರಿದ್ದಾರೆ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಮತ್ತು ಸಂಬಂಧಿತ ನಿರ್ಬಂಧಗಳಿಂದಾಗಿ ಓಣಂ ಅನ್ನು ಕಳೆದ ಎರಡು ವರ್ಷಗಳ ಬಳಿಕ ಸೆಪ್ಟೆಂಬರ್ 8 ರಂದು ಗುರುವಾರ ಕೇರಳದಲ್ಲಿ ವಿಜೃಂಭಣೆಯಿಂದ ಮತ್ತು ಸಂಭ್ರಮದಿಂದ ಆಚರಿಸಲಾಯಿತು. 2018 ಮತ್ತು 2019 ರಲ್ಲಿಯೂ ಸಹ ರಾಜ್ಯದ ಭಾಗಗಳಲ್ಲಿ ಭಾರೀ ಪ್ರವಾಹದಿಂದ ಓಣಂ ಆಚರಣೆಗಳು ಸಂಭ್ರಮ ಕಳೆದುಕೊಂಡಿದ್ದವು.

ಹಬ್ಬಕ್ಕೆ ಮನೆಗಳನ್ನು ವಿವಿಧ ವಿನ್ಯಾಸಗಳು ಮತ್ತು ಬಣ್ಣಗಳ 'ಪೂಕ್ಕೋಲಂ' ಎಂಬ ಸುಂದರವಾದ ಹೂವಿನ ಕಾರ್ಪೆಟ್ಗಳಿಂದ ಅಲಂಕರಿಸಲಾಗಿತ್ತು. ಕುಟುಂಬ ಸದಸ್ಯರು ಪರಸ್ಪರ 'ಒಣಕ್ಕೋಡಿ' (ಹೊಸ ಉಡುಪುಗಳು) ಉಡುಗೊರೆಯಾಗಿ ವಿನಿಮಯ ಮಾಡಿಕೊಂಡರು.
ಕೇರಳ ಪ್ರಸಿದ್ಧವಾದ ಬಾಳೆಹಣ್ಣು ಚಿಪ್ಸ್ಗಳನ್ನು ಮನೆಗಳಲ್ಲಿ ಹಬ್ಬಕ್ಕೆ ಸಿದ್ಧಪಡಿಸಲಾಯಿತು. ದಕ್ಷಿಣ ರಾಜ್ಯವಾದ ಕೇರಳಾದ್ಯಂತ ಹಳ್ಳಿಗಳಲ್ಲಿ, ಜನರು ತಮ್ಮ ಮನೆಗಳ ಅಂಗಳದಲ್ಲಿ ಎತ್ತರದ ಉಯ್ಯಾಲೆ ಅಥವಾ 'ಊಂಜಲ್' ಅನ್ನು ಹಾಕಿದ್ದರು.
ಓಣಂ ಎಂಬುದು ಅಸುರ (ರಾಕ್ಷಸ) ರಾಜ ಮಹಾಬಲಿಯ ಪುನರಾಗಮನನಕ್ಕೆ ಸಂಬಂಧಿಸಿದ ಹಬ್ಬವಾಗಿದೆ. ಮಹಾಬಲಿಯ ಆಳ್ವಿಕೆಯಲ್ಲಿ ಎಲ್ಲರೂ ಸಂತೋಷ ಮತ್ತು ಸಮಾನತೆಯಿಂದ ವಾಸಿಸುತ್ತಿದ್ದರು. ಜಾನಪದದ ಪ್ರಕಾರ, ಅವನ ಜನಪ್ರಿಯತೆಯ ಬಗ್ಗೆ ಅಸೂಯೆಪಟ್ಟ ದೇವತೆಗಳು (ದೇವರುಗಳು) ವಿಷ್ಣುವನ್ನು ಭೂಗತ ಲೋಕಕ್ಕೆ ಗಡಿಪಾರು ಮಾಡಲು ಸಹಾಯವನ್ನು ಕೋರಿದರು. ಆದರೆ ಕೆಳಗೆ ಹೋಗುವ ಮೊದಲು ಮಹಾಬಲಿಯು ಪ್ರತಿ ವರ್ಷ ತಿರುವೋಣಂ ದಿನದಂದು ತನ್ನ ಪ್ರಜೆಗಳನ್ನು ಭೇಟಿ ಮಾಡಲು ವಿಷ್ಣುವಿನಿಂದ ವರವನ್ನು ಪಡೆದುಕೊಂಡನು ಎಂಬುದು ಐತಿಹ್ಯ. ಈ ಹಬ್ಬವು ವರ್ಷ ಸೆಪ್ಟೆಂಬರ್ 8 ರಂದು ಬಂದಿತು.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications