ಕುದುರೆ ವ್ಯಾಪಾರದ ಸಾಕ್ಷಿ ನೀಡಿ: ಬಿಜೆಪಿಗೆ ಓಮರ್ ಅಬ್ದುಲ್ಲಾ ಸವಾಲು
ಶ್ರೀನಗರ, ನವೆಂಬರ್ 22: ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆಯನ್ನು ವಿಸರ್ಜಿಸುವ ನಿರ್ಧಾರವನ್ನು ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ತೆಗೆದುಕೊಂಡಿದ್ದು ಸಾಕಷ್ಟು ವಿವಾದ ಸೃಷ್ಟಿಸಿದೆ.
ಸರ್ಕಾರ ರಚಿಸಲು ಕುದುರೆ ವ್ಯಾಪಾರ ನಡೆಸಲಾಗುತ್ತಿತ್ತು ಎಂದಿರುವ ಬಿಜೆಪಿ ಹೇಳಿಕೆಯನ್ನು ಕಟು ಶಬ್ದಳಿಂದ ಟೀಕಿಸಿರುವ ನ್ಯಾಶನಲ್ ಕಾನ್ಫಿರೆನ್ಸ್ ಪಕ್ಷದ ಮುಖಂಡ ಓಮರ್ ಅಬ್ದುಲ್ಲಾ, "ಕುದುರೆ ವ್ಯಾಪಾರ ನಡೆದಿದೆ ಎಂದಾದರೆ ಮೊದಲು ಸಾಕ್ಷಿ ನೀಡಿ" ಎಂಡು ಬಿಜೆಪಿಗೆ ಸವಾಲೆಸೆದಿದ್ದಾರೆ.
"ವಿಧಾನಸಭೆಯನ್ನು ವಿಸರ್ಜಿಸುವುದಾದರೆ, ಕಳೆದ ಜೂನ್ ನಲ್ಲೇ ಸರ್ಕಾರ ಬಿದ್ದಿತ್ತು. ಆಗಲೇ ಮಾಡಬಹುದಿತ್ತು. ಇದೀಗ ಡಿಸೆಂಬರ್ 19 ರವರೆಗೂ ಸಮಯವಿದ್ದರೂ ರಾಜ್ಯಪಾಲರು ಅವಸರದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿದ್ದು ಏಕೆ?" ಎಂದು ಅವರು ಪ್ರಶ್ನಿಸಿದರು.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ಮುರಿದುಬಿದ್ದ ನಂತರ, ರಾಜ್ಯಪಾಲರ ಆಳ್ವಿಕೆಯನ್ನು ಹೇರಲಾಗಿತ್ತು. ಆದರೆ ಹೊಸ ಬೆಳವಣಿಗೆಯಲ್ಲಿ ಪಿಡಿಪಿ, ನ್ಯಾಶನಲ್ ಕಾನ್ಫಿರೆನ್ಸ್ ಮತ್ತು ಕಾಂಗ್ರೆಸ್ ಪಕ್ಷಗಳು ಒಂದಾಗಿ ಸರ್ಕಾರ ರಚಿಸಲು ಮುಂದಾದ ಹಿನ್ನೆಲೆಯಲ್ಲಿ ಬಿಜೆಪಿಯೇ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಈ ಕೆಲಸ ಮಾಡಿದೆ ಎಂಬ ದೂರು ಕೇಳಿಬರುತ್ತಿದೆ.












Click it and Unblock the Notifications