ಭಗತ್ ಸಿಂಗ್ ರನ್ನು ಉಗ್ರ ಎಂದ ಪ್ರಾಧ್ಯಾಪಕನಿಗೆ ಅಮಾನತು ಶಿಕ್ಷೆ
ಶ್ರೀನಗರ, ನವೆಂಬರ್ 30: ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ರನ್ನು 'ಭಯೋತ್ಪಾದಕ' ಎಂದು ಸಂಬೋಧಿಸಿದ ಜಮ್ಮು ವಿಶ್ವವಿದ್ಯಾಲಯದ ಪ್ರೊಫೆಸರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
ಜಮ್ಮು ವಿವಿಯಲ್ಲಿ ರಾಜ್ಯಶಾಸ್ತ್ರದ ಪ್ರಾಧ್ಯಾಪಕರಾಗಿರುವ ಮೊಹಮ್ಮದ್ ತಾಜುದ್ದಿನ್ ಅವರು ಪಾಠ ಮಾಡುವ ಸಮಯದಲ್ಲಿ, 'ಭಗತ್ ಸಿಂಗ್ ಒಬ್ಬ ಉಗ್ರ' ಎಂದಿದ್ದರು. ಅವರು ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ರನ್ನು ಭಯೋತ್ಪಾದಕ ಎಂದು ಸಂಬೋಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಅವರನ್ನು ವಿವಿ ಆಡಳಿತ ಮಂಡಳಿ ಅಮಾನತುಗೊಳಿಸಿದೆ.
"ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಸದಸ್ಯರ ಸಮಿತಿಯೊಂನ್ನು ರಚಿಸಿದ್ದು, ಸಮಿತಿಯು ಕೂಲಂಕಷವಾಗಿ ತನಿಖೆ ನಡೆಸಿದ ನಂತರ ಪ್ರಾಧ್ಯಾಪಕರ ಮೇಲೆ ಕ್ರಮ ಕೈಗೊಳ್ಳುತ್ತೇವೆ" ಎಂದು ಜಮ್ಮು ವಿವಿಯ ಉಪ ಕುಲಪತಿ ಪ್ರೊ.ಮನೋಜ್ ಕೆ ಧಾರ್ ಹೇಳಿದ್ದಾರೆ.

"ನಾನು ಲೆನಿನ್ ಬಗ್ಗೆ ಮಾತನಾಡುತ್ತಿದ್ದ ಸಮಯದಲ್ಲಿ ಭಗತ್ ಸಿಂಗ್ ಎಂದು ಅಚಾನಕ್ಕಾಗಿ ಬಳಸಿದೆ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ" ಎಂದು ತಾಜುದ್ದಿನ್ ಹೇಳಿದ್ದಾರೆ.












Click it and Unblock the Notifications