ಶ್ರೀನಗರ, ಮಾರ್ಚ್ 01 : ಪಾಕಿಸ್ತಾನದ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಇಂದು ಬಿಡುಗಡೆ ಮಾಡಿದ್ದು, ವಾಘಾ ಗಡಿಯ ಮೂಲಕ ಅವರು ಮತ್ತೆ ತಾಯ್ನೆಲ ಪ್ರವೇಶಿಸಿದ್ದಾರೆ. ರಾತ್ರಿ 9:25ಕ್ಕೆ ಸರಿಯಾಗಿ ವಾಘಾ ಗಡಿ ಮೂಲಕ ಅವರು ಭಾರತ ಪ್ರವೇಶಿಸುತ್ತಿದ್ದಂತೆಯೇ ನೆರೆದಿದ್ದ ಸಹಸ್ರಾರು ಜನ ಜಯಘೋಷ ಕೂಗಿದರು.
ಅಭಿನಂದನ್ ಅವರನ್ನು ಸ್ವಾಗತಿಸಲು ಅವರ ಪೋಷಕರು, ವಾಯು, ಭೂ, ನೌಕಾಸೇನೆಯ ಮುಖ್ಯಸ್ಥರು, ವಾಯುಸೇನೆಯ ಸಿಬ್ಬಂದಿ ಸೇರಿದಂದೆ ಸಾವಿರಾರು ಜನ ವಾಘಾ ಗಡಿಯಲ್ಲಿ ಜಮಾಯಿಸಿದ್ದರು.
ಮಿಗ್ 21 ಬೈಸನ್ ಯುದ್ಧ ವಿಮಾನದ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಫೆಬ್ರವರಿ 27ರಂದು ಪಾಕ್ ಸೇನೆಯ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಲ್ಲದೆ, ಇತರ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಪಾಕ್ ಸೇನೆಯ ವಶಕ್ಕೆ ಸಿಕ್ಕಿದ್ದರು.
Newest FirstOldest First
12:06 AM, 2 Mar
ಅಮೃತಸರದಲ್ಲಿ ವೈದ್ಯಕೀಯ ಚಿಕಿತ್ಸೆ ಬಳಿಕ ಅಭಿನಂದನ್ ಅವರನ್ನು ದೆಹಲಿಗೆ ಇಂದೇ ಕರೆದುಕೊಂಡು ಹೋಗಲಾಗುತ್ತದೆ. ಮತ್ತು ಅವರು ನಾಳೆ ಸೇನೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಆಗಿ ಮಾತುಕತೆ ನಡೆಸಲಿದ್ದಾರೆ. ಅವರಿಗೆ ನಾಳೆಯೂ ದೆಹಲಿಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಯಲಿವೆ.
10:11 PM, 1 Mar
ಪ್ರಾಥಮಿಕ ಆರೋಗ್ಯ ಪರೀಕ್ಷೆ, ಚಿಕಿತ್ಸೆ ಬಳಿಕ ಅಮೃತಸರದಿಂದ ದೆಹಲಿಗೆ ಅಭಿನಂದನ್ ಅವರು ವಿಶೇಷ ವಿಮಾನದಲ್ಲಿ ತೆರಳಲಿದ್ದಾರೆ. ಅಲ್ಲಿ ವಾಯುಸೇನೆಯ ಹಿರಿಯ ಅಧಿಕಾರಿಗಳನ್ನು ಅಭಿನಂದನ್ ಅವರು ಎದುರುಗೊಳ್ಳಲಿದ್ದಾರೆ.
9:36 PM, 1 Mar
ಅಮೃತಸರದಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಒಳಗಾಗಲಿರುವ ಅಭಿನಂದನ್. ಅಲ್ಲಿಂದ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಲಾಗುತ್ತದೆ.
9:32 PM, 1 Mar
ಸೇನಾ ವಾಹನದಲ್ಲಿ ಅಭಿನಂದನ್ ಅವರನ್ನು ಅಮೃತಸರದ ಕಡೆಗೆ ಭಾರತೀಯ ಸೇನೆಯು ಕರೆದುಕೊಂಡು ಹೋಯಿತು. ಗಡಿಯಲ್ಲಿ ಜೈ ಹಿಂದ್ ಮತ್ತು ಭಾರತ ಮಾತಾ ಕೀ ಜೈ ಘೊಷಣೆಗಳು ಮೊಳಗಿದವು.
9:25 PM, 1 Mar
ಬಿಎಸ್ಎಫ್ ಅಧಿಕಾರಿಗಳು ಅಭಿನಂದನ್ ಅವರನ್ನು ಬರಮಾಡಿಕೊಂಡರು. ಬಿಎಸ್ಎಫ್ ಅಧಿಕಾರಿಗಳು ಅಭಿನಂದನ್ ಅವರನ್ನು ಅಪ್ಪಿಕೊಂಡು ಮರಳಿ ದೇಶಕ್ಕೆ ಸ್ವಾಗತಿಸಿದರು.
9:22 PM, 1 Mar
ಪಾಕಿಸ್ತಾನದ ಸೈನಿಕರ ಕಾವಲು ಹಾಗೂ ಸೈನ್ಯಾಧಿಕಾರಿ ಅವರೊಂದಿಗೆ ವಾಘಾ ಗಡಿಯಲ್ಲಿ ಅಭಿನಂದನ್ ಅವರು ಭಾರತ ಪ್ರವೇಶಿಸಲು ಕಾಯುತ್ತಿದ್ದಾರೆ.
9:18 PM, 1 Mar
ಹಸ್ತಾಂತರಕ್ಕೆ ಮುನ್ನಾ ಅಭಿನಂದನ್ ಅವರ ಕಡೆಯಿಂದ ಪಾಕಿಸ್ತಾನದ ಸೇನೆಯ ಕುರಿತು 90 ಸೆಕೆಂಡ್ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಪಾಕಿಸ್ತಾನ.
9:14 PM, 1 Mar
ಅಭಿನಂದನ್ ಅವರ ಹಸ್ತಾಂತರಕ್ಕೆ ಚಾಲನೆ ಗೌರವದೊಂದಿಗೆ ಪಾಕ್ ಬೀಳ್ಕೊಡುಗೆ.
8:56 PM, 1 Mar
ಅಭಿನಂದನ್ ಹಸ್ತಾಂತರ ವಿಳಂಬ.
6:04 PM, 1 Mar
ಪಾಕಿಸ್ತಾನದ ಬೀಟಿಂಗ್ ದಿ ರಿಟ್ರೀಟ್ ಮಕ್ತಾಯವಾಗಿದ್ದು, ಯಾವುದೇ ಕ್ಷಣದಲ್ಲಿ ಅಭಿನಂದನ್ ವರ್ಧಮಾನ್ ಅವರು ಭಾರತವನ್ನು ಪ್ರವೇಶಿಸಲಿದ್ದಾರೆ.
5:29 PM, 1 Mar
ಭಾರತದ ವಲಸೆ ಕಚೇರಿ ತಲುಪಿದ ಪೈಲಟ್ ಅಭಿನಂದನ್
5:22 PM, 1 Mar
ಬೀಟಿಂಗ್ ರೀಟ್ರೀಟ್ ಪಾಕಿಸ್ತಾನದಲ್ಲಿ ಆರಂಭವಾಗಿದ್ದು, ಬಳಿಕ ಭಾರತಕ್ಕೆ ಅಭಿನಂದನ್ ಹಸ್ತಾಂತರ
5:04 PM, 1 Mar
ಮೊದಲು ಬಿಎಸ್ಎಫ್ಗೆ ಅಭಿನಂದನ್ ಅವರನ್ನು ಹಸ್ತಾಂತರಿಸಲಿರುವ ಪಾಕ್
5:00 PM, 1 Mar
ವಾಘಾ ಗಡಿಯಲ್ಲಿ ಅಭಿನಂದನ್ಗೆ ಜೈಕಾರ, ಭಾರತ ಬಾವುಟ ಹಿಡಿದು ಕಾತುರದಿಂದ ಕಾಯುತ್ತಿರುವ ಭಾರತೀಯರು
4:53 PM, 1 Mar
ವಾಘಾ ಗಡಿಯಲ್ಲಿ ಅಭಿನಂದನ್ ವರ್ಧಮಾನ್ಗೆ ವೈದ್ಯಕೀಯ ಪರೀಕ್ಷೆ
4:38 PM, 1 Mar
ಪಾಕ್ನಿಂದ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಮುಕ್ತಾಯ
4:34 PM, 1 Mar
ಮೊದಲಿಗೆ ಪಾಕ್ ರೇಂಜರ್ಸ್ಗಳಿಗೆ ಅಭಿನಂದನ್ ಹಸ್ತಾಂತರ, ಬಳಿಕ ನೇರವಾಗಿ ಅಮೃತಸರಕ್ಕೆ ತೆರಳಲಿರುವ ಅಭಿನಂದನ್
4:32 PM, 1 Mar
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸ್ವಾಗತಕ್ಕೆ ಐಎಎಫ್ ಹಾಗೂ ಸೇನಾಧಿಕಾರಿಗಳು ಸಜ್ಜು
4:30 PM, 1 Mar
ಕೆಲವೇ ಕ್ಷಣಗಳಲ್ಲಿ ಅಟಾರಿ ಗಡಿ ತಲುಪಲಿರುವ ಅಭಿನಂದನ್
4:19 PM, 1 Mar
ಸಾವಿರಾರು ಭಾರತೀಯರ ಹಾರೈಕೆಗೆ ಫಲ. ಕೊನೆಗೂ ತಾಯ್ನಾಡು ತಲುಪಿದ ವಿಂಗ್ ಕಮಾಂಡರ್ ಅಭಿನಂದನ್
4:18 PM, 1 Mar
ವಾಘಾ ಗಡಿಗೆ ಆಗಮಿಸಿದ ಹೆಮ್ಮೆಯ ಹೀರೋ ಅಭಿನಂದನ್ ವರ್ಧಮಾನ್
4:11 PM, 1 Mar
ಯಾವುದೇ ಕ್ಷಣದಲ್ಲಿ ಅಭಿನಂದನ್ ಆಗಮಿಸಲಿದ್ದು, ವಾಘಾ ಗಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ
ಮೂರೂ ಸೇನಾ ಮುಖಂಡರೊಂದಿಗೆ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಳ್ ಅವರೊಂದಿಗೆ ಭದ್ರತೆಯ ಕುರಿತು ಪರಿಶೀಲನೆ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
3:31 PM, 1 Mar
ರೆಡ್ ಕ್ರಾಸ್ ಒಂದು ತಟಸ್ಥ ಸಂಸ್ಥೆ. ಅದು ಇಡಿ ವಿಶ್ವದ ಶಾಂತಿ ಬಯಸುವ ಸಂಸ್ಥೆ. ಆದ್ದರಿಂದ ಇಂಡಿಯನ್ ರೆಡ್ ಕ್ರಾಸ್ ಮೂಲಕ ಅಭಿನಂದನ್ ಅವರನ್ನು ಹಸ್ತಾಂತರಿಸಲಾಗುತ್ತಿದೆ.
3:26 PM, 1 Mar
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಒಮ್ಮೆ ವಾಘಾ ಗಡಿ ಬಳಿ ಮತ್ತು ಮುಂದೆ ದೆಹಲಿಯಲ್ಲೂ ಅಭಿನಂದನ್ ಅವರನ್ನು ಸಂಪೂರ್ಣವಾಗಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗುತ್ತದೆ.
3:08 PM, 1 Mar
ಅಭಿನಂದನ್ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಾಧ್ಯಮಗಳಿಗಾಗಲೀ, ಸಾರ್ವಜನಿಕರಿಗಾಗಲೀ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ.
3:06 PM, 1 Mar
ವಾಘಾ ಗಡಿಗೆ ಆಗಮಿಸುತ್ತಿದ್ದಂತೆಯೇ ಅಭಿನಂದನ್ ಅವರನ್ನು ಅಭಿನಂದಿಸುವ ಸೇನಾಧಿಕಾರಿಗಳು ಅವರ ಬಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪಾಕಿಸ್ತಾನದಲ್ಲಿ ಏನೆಲ್ಲ ಆಯಿತು ಎಂಬ ಬಗ್ಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನು ಸೇನಾ ಭಾಷೆಯಲ್ಲಿ ಡಿ ಬ್ರೀಫಿಂಗ್ ಎಂದು ಕರೆಯಲಾಗುತ್ತದೆ.
3:04 PM, 1 Mar
ವಾಘಾ ಗಡಿಗೆ ಆಗಮಿಸಿದ ನಂತರ ಅಮೃತಸರ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅಭಿನಂದನ್. ಸಂಜೆಯೊಳಗೆ ಅಲ್ಲಿಂದ ದೆಹಲಿಗೆ ತೆರಳಲಿರುವ ವಿಂಗ್ ಕಮಾಂಡರ್
3:02 PM, 1 Mar
ಇನ್ನು ಅರ್ಧಗಂಟೆಯೊಳಗೆ ಭಾರತಕ್ಕೆ ಆಗಮಿಸಲಿರುವ ವಿಂಗ್ ಕಮಾಂಡರ್ ಅಭಿನಂದನ್
READ MORE
9:20 AM, 1 Mar
ಇಂದು ಮಧ್ಯಾಹ್ನ ಸುಮಾರು 12 ರಿಂದ 02 ಗಂಟೆ ಅವಧಿಯಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಅಭಿನಂದನ್ ಬಿಡುಗಡೆಯ ನಿಮಿತ್ತ ಈಗಾಗಲೇ ವಾಘಾ ಗಡಿಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿದ್ದು, ಅವರನ್ನು ಸ್ವಾಗತಿಸಲು ಭಾರತೀಯ ವಾಯುಸೇನೆ ಸಿದ್ಧವಾಗಿದೆ.
9:26 AM, 1 Mar
ಶುಕ್ರವಾರ ಸಹ ಪಾಕಿಸ್ತಾನ ಸೇನೆ ಕದನವಿರಾಮ ಉಲ್ಲಂಘಿಸಿ, ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ
9:28 AM, 1 Mar
ಇಂದು ಬೆಳಗ್ಗಿನಿಂದಲೇ ಭಯೋತ್ಪಾದಕರ ವಿರುದ್ಧ ಭಾರತೀಯ ಸೇನೆ ಎನ್ ಕೌಂಟರ್ ದಾಳಿ ನಡೆಸುತ್ತಿದ್ದು ಮೂವರು ಉಗ್ರರನ್ನು ಸದೆಬಡಿಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
9:30 AM, 1 Mar
ಅಭಿನಂದನ್ ಅವರನ್ನು ಬಿಡುಗಡೆ ಮಾಡುವ ಪಾಕಿಸ್ತಾನದ ನಿರ್ಧಾರವನ್ನು ಅಮೆರಿಕವೂ ಸ್ವಾಗತಿಸಿದೆ.
9:41 AM, 1 Mar
ಪುಲ್ವಾಮಾ ದಾಳಿಯ ಸಂಚುಕೋರ, ಜೆಇಎಂ ಮುಖಂಡ ಮಸೂದ್ ಅಝರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಒಪ್ಪಿಕೊಂಡಿದ್ದಾರೆ.
9:58 AM, 1 Mar
ಶುಕ್ರವಾರ ಬೆಳಿಗ್ಗೆ ಜಮ್ಮು-ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ನಡೆದ ಉಗ್ರದಾಳಿಯಲ್ಲಿ ಇಬ್ಬರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ
10:34 AM, 1 Mar
ಪಂಜಾಬಿನ ಅಮೃತಸರ ವಿಮಾನನಿಲ್ದಾಣದಲ್ಲಿ ಅಭಿನಂದನ್ ಅವರ ತಂದೆ-ತಾಯಿಗೆ ಅದ್ಧೂರಿ ಸ್ವಾಗತ
11:41 AM, 1 Mar
ಅಭಿನಂದನ್ ಬಿಡುಗಡೆ ಕುರಿತಂತೆ ಔಪಚಾರಿಕ ಪ್ರಕ್ರಿಯೆಗಳನ್ನು ಮುಗಿಸಿದ ಪಾಕಿಸ್ತಾನ
12:22 PM, 1 Mar
ವಿಂಗ್ ಕಮಾಂಡರ್ ಅಭಿನಂದನ್ ಅವರು ಸುಮಾರು 4 ಗಂಟೆ ವೇಳೆಗೆ ವಾಗಾ ಗಡಿಯ ಮೂಲಕ ಭಾರತಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
12:34 PM, 1 Mar
Tamil Nadu: A special thanks giving prayer was organised today by state Home Guards at Kalikambal Temple in Chennai ahead of Wing Commander #AbhinandanVarthaman's release by Pakistan. pic.twitter.com/Dz3F24vaxn
ಅಲ್ಲಾನ 99 ಹೆಸರುಗಳಲ್ಲಿ ಯಾವುದರಲ್ಲೂ ಹಿಂಸೆ ಇಲ್ಲ. ಇಸ್ಲಾಂ ಎಂದರೇ ಶಾಂತಿ. ಭಯೋತ್ಪಾದನೆಯ ವಿರುದ್ಧ ಹೋರಾಡುವುದು ಎಂದರೆ ಯಾವುದೇ ಧರ್ಮದ ವಿರುದ್ಧ ಹೋರಾಡುವುದು ಎಂದಲ್ಲ- ಸುಷ್ಮಾ ಸ್ವರಾಜ್
1:51 PM, 1 Mar
ವಿಂಗ್ ಕಮಾಂಡರ್ ಅವರು ಇಸ್ಲಾಮಾಬಾದ್ ನಿಂದ ಲಾಹೋರ್ ತಲುಪಿದ್ದು. ಇನ್ನು ಕೆಲವೇ ನಿಮಿಷಗಳಲ್ಲಿ ಅವರು ವಾಘಾ ಬಾರ್ಡರ್ ತಲುಪಲಿದ್ದಾರೆ. ಅಲ್ಲಿಂದ ವಾಘಾ ಬಾರ್ಡರ್ 22 ಕಿ.ಮೀ. ದೂರದಲ್ಲಿದೆ.
1:59 PM, 1 Mar
Indian Air Force pilot #AbhinandanVarthaman will be returned by Pakistan at Wagah border on Friday, two days after he was captured across the Line of Control. https://t.co/L76AMoL9tE
— Twitter Moments India (@MomentsIndia) March 1, 2019
ಬಂಧಿತನಾಗಿ ಎರಡು ದಿನಗಳ ನಂತರ ಭಾರತಕ್ಕೆ ವಾಪಸ್ ಬರುತ್ತಿರುವ 'ಸಿಂಗಂ' ಅಭಿನಂದನ್ ಅವರಿಗೆ ಕಡಲತೀರದಲ್ಲಿ ಮರಳಿನಲ್ಲಿ ಈ ರೀತಿ ಗೌರವ ಸಲ್ಲಿಸಲಾಗಿದೆ.
2:03 PM, 1 Mar
ಅಭಿನಂದನ್ ಬಿಡುಗಡೆಗೆ ತಡೆಕೋರಿ ಇಸ್ಲಾಮಾಬಾದ್ ಹೈಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಜಾ
2:05 PM, 1 Mar
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಸ್ವಾಗತಿಸಲು ವಾಗಾ ಗಡಿ ಬಳಿಯ ಅಟ್ಟಾರಿ ಎಂಬ ಹಳ್ಳಿಗೆ ಬಂದಿಳಿದ ಭಾರತೀಯ ವಾಯುಸೇನೆ ಅಧಿಕಾರಿಗಳು.
2:06 PM, 1 Mar
ಭಾರತಕ್ಕೆ ಬಂದ ಕೂಡಲೆ ದೆಹಲಿಗೆ ತೆರಳಲಿರುವ ಅಭಿನಂದನ್
2:07 PM, 1 Mar
ಅಭಿನಂದನ್ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಾಘಾ ಗಡಿಯಲ್ಲಿ ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮ ರದ್ದು.
2:35 PM, 1 Mar
ಭಾರತದ ಮೂರೂ ಸೇನೆಯ ಮುಖ್ಯಸ್ಥರಿಗೂ ಝೆಡ್ ಪ್ಲಸ್ ಭದ್ರತೆ ನೀಡಲಾಗಿದೆ.
2:42 PM, 1 Mar
ನನಗೂ ಅಭಿನಂದನ್ ಅವರನ್ನು ಸ್ವಾಗತಿಸಲು ಹೋಗುವ ಆಸೆ ಇತ್ತು. ಆದರೆ ಕೆಲವು ಶಿಷ್ಟಾಚಾರಗಳಿರುವುದರಿಂದ ನನಗೆ ಹೋಗಲು ಸಾಧ್ಯವಾಗುತ್ತಿಲ್ಲ. 65, 71 ರ ಯುದ್ಧದ ನಂತರ ವಾಪಸ್ಸಾದ ಯುದ್ಧ ಖೈದಿಗಳನ್ನು ಮೊದಲಿಗೆ ವೈದ್ಯಕೀಯ ಪರೀಕ್ಷೆ ಮಾಡಿ ನಂತರ ಅವರನ್ನು ಸಾರ್ವಜನಿಕವಾಗಿ ಮಾತನಾಡಲು ಬಿಡಲಾಗಿತ್ತು. ಇಲ್ಲಿಯೂ ಅದೇ ವಿಧಾನ ಬಳಸಬಹುದು- ಅಮರೀಂದರ್ ಸಿಂಗ್, ಪಂಜಾಬ್ ಮುಖ್ಯಮಂತ್ರಿ
2:51 PM, 1 Mar
ವಾಘಾ-ಅಟ್ಟಾರಿ ಗಡಿಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿಷೇಧ
3:02 PM, 1 Mar
ಇನ್ನು ಅರ್ಧಗಂಟೆಯೊಳಗೆ ಭಾರತಕ್ಕೆ ಆಗಮಿಸಲಿರುವ ವಿಂಗ್ ಕಮಾಂಡರ್ ಅಭಿನಂದನ್
3:04 PM, 1 Mar
ವಾಘಾ ಗಡಿಗೆ ಆಗಮಿಸಿದ ನಂತರ ಅಮೃತಸರ ವಿಮಾನ ನಿಲ್ದಾಣಕ್ಕೆ ತೆರಳಲಿರುವ ಅಭಿನಂದನ್. ಸಂಜೆಯೊಳಗೆ ಅಲ್ಲಿಂದ ದೆಹಲಿಗೆ ತೆರಳಲಿರುವ ವಿಂಗ್ ಕಮಾಂಡರ್
3:06 PM, 1 Mar
ವಾಘಾ ಗಡಿಗೆ ಆಗಮಿಸುತ್ತಿದ್ದಂತೆಯೇ ಅಭಿನಂದನ್ ಅವರನ್ನು ಅಭಿನಂದಿಸುವ ಸೇನಾಧಿಕಾರಿಗಳು ಅವರ ಬಳಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪಾಕಿಸ್ತಾನದಲ್ಲಿ ಏನೆಲ್ಲ ಆಯಿತು ಎಂಬ ಬಗ್ಗೆ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆ. ಇದನ್ನು ಸೇನಾ ಭಾಷೆಯಲ್ಲಿ ಡಿ ಬ್ರೀಫಿಂಗ್ ಎಂದು ಕರೆಯಲಾಗುತ್ತದೆ.
3:08 PM, 1 Mar
ಅಭಿನಂದನ್ ಭಾರತಕ್ಕೆ ವಾಪಸ್ಸಾಗುತ್ತಿದ್ದಂತೆಯೇ ಮಾಧ್ಯಮಗಳಿಗಾಗಲೀ, ಸಾರ್ವಜನಿಕರಿಗಾಗಲೀ ಯಾವುದೇ ಪ್ರತಿಕ್ರಿಯೆ ನೀಡುವಂತಿಲ್ಲ.