MS Dhoni: ಬಿಜೆಪಿ ಸೇರ್ತಾರ ಎಂಎಸ್ ಧೋನಿ? ಕುತೂಹಲ ಹೆಚ್ಚಿಸಿದ ನಾಯಕರ ಭೇಟಿ
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತು ಜಾರ್ಖಂಡ್ನ ಕೆಲವು ಪ್ರಮುಖ ಬಿಜೆಪಿ ನಾಯಕರ ಭೇಟಿಯ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಹಲವು ರೀತಿಯ ಚರ್ಚೆಗಳು, ಊಹಾಪೋಹಗಳು ಶುರುವಾಗಿವೆ.
ಇದು ಸಾಮಾನ್ಯ ಭೇಟಿಯೇ ಅಥವಾ ಇದಕ್ಕೆ ರಾಜಕೀಯ ಮಹತ್ವವಿದೆಯೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಾಸ್ತವವಾಗಿ, ಮಹೇಂದ್ರ ಸಿಂಗ್ ಧೋನಿ ಗುರುವಾರ ಸಂಜೆ ಮುಂಬೈಗೆ ಪ್ರಮಾಣಿಸಲು ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿದ್ದರು. ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಂಚಿ ತಲುಪಲಿದ್ದು, ಅವರನ್ನು ಸ್ವಾಗತಿಸಲು ಜಾರ್ಖಂಡ್ನ ಹಲವು ಹಿರಿಯ ಬಿಜೆಪಿ ನಾಯಕರು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಬಿಜೆಪಿ ರಾಜ್ಯಸಭಾ ಸಂಸದ ಹಾಗೂ ಪಕ್ಷದ ಮಾಜಿ ರಾಜ್ಯಾಧ್ಯಕ್ಷ ದೀಪಕ್ ಪ್ರಕಾಶ್, ರಾಂಚಿ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿಪಿ ಸಿಂಗ್ ಮತ್ತು ಕಾಂಕೆ ಪ್ರದೇಶದ ಬಿಜೆಪಿ ಶಾಸಕ ಸಮ್ರಿ ಲಾಲ್ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ಭೇಟಿ ಮಾಡಿದರು. ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಆದ ಕೆಲವು ಗಂಟೆಗಳಲ್ಲೇ ಭಾರಿ ವೈರಲ್ ಆಗಿವೆ.
ಇಂಡಿಯಾ ಟುಡೆ ಪತ್ರಕರ್ತೆ ನಬಿಲಾ ಜಮಾಲ್ ಧೋನಿ ಬಿಜೆಪಇ ನಾಯಕರೊಂದಿಗೆ ಇರುವ ಚಿತ್ರವನ್ನು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಜಕೀಯಕ್ಕೆ ಬರ್ತಾರ ಧೋನಿ?
ಈ ಚಿತ್ರಗಳನ್ನು ಧೋನಿ ರಾಜಕೀಯಕ್ಕೆ ಪ್ರವೇಶಿಸುವ ಸಾಧ್ಯತೆ ಬಗ್ಗೆ ಜನರು ಚರ್ಚಿಸಲು ಕಾರಣವಾಗಿದೆ. ರಾಜ್ಯಸಭಾ ಸಂಸದ ದೀಪಕ್ ಪ್ರಕಾಶ್ ಕೂಡ ಭೇಟಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ವೈರಲ್ ಆಗುತ್ತಿರುವ ಎರಡನೇ ಚಿತ್ರದಲ್ಲಿ, ದೀಪಕ್ ಪ್ರಕಾಶ್, ರಾಂಚಿಯ ಬಿಜೆಪಿ ಶಾಸಕ ಸಿಪಿ ಸಿಂಗ್ ಮತ್ತು ಕಾಂಕೆ ಶಾಸಕ ಸಮ್ರಿಲಾಲ್ ಧೋನಿ ಅವರೊಂದಿಗೆ ನಿಂತಿದ್ದಾರೆ.
ಧೋನಿಗೆ ಆಸಕ್ತಿ ಇಲ್ಲ!
ಎಂಎಸ್ ಧೋನಿ ಆಪ್ತ ಮೂಲಗಳು ಈ ಸಭೆಯನ್ನು ಕೇವಲ ಕಾಕತಾಳೀಯ ಎಂದು ಕರೆಯುತ್ತಿವೆ. ರಾಂಚಿಯಲ್ಲಿ ಬೆಳೆದ ಧೋನಿ ಅಲ್ಲಿ ಅನೇಕ ಜನರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಅವರಲ್ಲಿ ರಾಜಕೀಯ ಪಕ್ಷದ ನಾಯಕರೂ ಇದ್ದಾರೆ, ಅವರು ಎಜೆಎಸ್ಯು ಪಕ್ಷದ ಮುಖ್ಯಸ್ಥ ಸುದೇಶ್ ಮಹತೋ ಅವರೊಂದಿಗೆ ಉತ್ತಮ ಮತ್ತು ಹಳೆಯ ಸ್ನೇಹವನ್ನು ಹೊಂದಿದ್ದಾರೆ, ಆದರೆ ಧೋನಿ ಯಾವಾಗಲೂ ಅಂತಹ ಸಂಬಂಧಗಳನ್ನು ವೈಯಕ್ತಿಕವಾಗಿ ಇಟ್ಟುಕೊಂಡಿದ್ದರು. ಇಲ್ಲಿಯವರೆಗೆ ಅವರು ಯಾವುದೇ ರಾಜಕೀಯ ಒಲವನ್ನು ತೋರಿಸಿಲ್ಲ ಎಂದು ಹೇಳಲಾಗಿದೆ.
ಒಂದು ವೇಳೆ ಧೋನಿ ಎಂದಾದರೂ ರಾಜಕೀಯಕ್ಕೆ ಬರಲು ನಿರ್ಧರಿಸಿದರೆ, ಅವರು ಯಾವುದೇ ರಾಜಕೀಯ ಪಕ್ಷದ ಉನ್ನತ ನಾಯಕತ್ವದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತಾರೆ ಎಂದು ಹೇಳಲಾಗಿದೆ. ವ್ಯಕ್ತಿತ್ವ ಮತ್ತು ಜನಪ್ರಿಯತೆ ನೋಡಿದಾಗ ರಾಜಕೀಯಕ್ಕೆ ಬರಲು ಅವರಿಗೆ ಸಾಮಾನ್ಯ ಮಟ್ಟದ ನಾಯಕರ ಸಂಪರ್ಕದ ಅಗತ್ಯವಿಲ್ಲ ಎನ್ನಲಾಗಿದೆ.












Click it and Unblock the Notifications