Virat Kohli: ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ರಾಜನಿಗೆ ಕ್ರಿಕೆಟ್ ದೇವರಿಂದ ವಿಶೇಷ ಸಂದೇಶ
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡುವ ಮುನ್ನವೇ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ವಿರಾಟ್ ಕೊಹ್ಲಿ ನಿರ್ಧಾರಕ್ಕೆ ಇಡೀ ಕ್ರಿಕೆಟ್ ಜಗತ್ತೇ ಶಾಕ್ ಆಗಿದೆ. ಅಭಿಮಾನಿಗಳಿಗೂ ಇದು ದೊಡ್ಡ ಶಾಕ್ ಆಗಿದೆ. ಎಲ್ಲಾ ಮಾದರಿಗಿಂತ ಕೊಹ್ಲಿಗೆ ಟೆಸ್ಟ್ ಮಾದರಿ ತುಂಬಾ ಇಷ್ಟ. ಆದರೂ ಅವರು ಆತುರದಲ್ಲಿ ನಿರ್ಧಾರ ಯಾಕೆ ಮಾಡಿದರು ಎನ್ನುವ ಪ್ರಶ್ನೆ ಕಾಡುತ್ತಿದೆ.
ಆದರೂ ಅವರು ನಿವೃತ್ತಿಯಾಗಿರುವುದಂತೂ ಸತ್ಯ, ಟೆಸ್ಟ್ ಕ್ರಿಕೆಟ್ನಲ್ಲಿ ನಾವಿನ್ನು ಕೊಹ್ಲಿಯನ್ನು ನೋಡಲು ಸಾಧ್ಯವಿಲ್ಲ ಎನ್ನುವುದೇ ಅಭಿಮಾನಿಗಳಿಗೆ ದೊಡ್ಡ ಆಘಾತ. ಕೊಹ್ಲಿ ನಿರ್ಧಾರಕ್ಕೆ ಹಲವು ಮಾಜಿ ಆಟಗಾರರು ಕೂಡ ಶಾಕ್ ಆಗಿದ್ದಾರೆ. ಕೊಹ್ಲಿ ಇನ್ನೂ 2-3 ವರ್ಷ ಕ್ರಿಕೆಟ್ ಆಡಬೇಕಿತ್ತು ಎಂದು ಹೇಳಿದ್ದಾರೆ.

ಕ್ರಿಕೆಟ್ ದೇವರ ಸಂದೇಶ
ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿಗೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಂದ ವಿಶೇಷ ಸಂದೇಶ ಸಿಕ್ಕಿದೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೊಹ್ಲಿ ಕುರಿತು ಸಚಿನ್ ವಿಶೇಷ ಸಂದೇಶ ಹಂಚಿಕೊಟ್ಟಿದ್ದಾರೆ.
"ನೀವು ಟೆಸ್ಟ್ನಿಂದ ನಿವೃತ್ತರಾಗುತ್ತಿರುವಾಗ, 12 ವರ್ಷಗಳ ಹಿಂದೆ, ನನ್ನ ಕೊನೆಯ ಟೆಸ್ಟ್ ಪಂದ್ಯದ ಸಮಯದಲ್ಲಿ ನೀವು ನಡೆದುಕೊಂಡ ರೀತಿಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಿಮ್ಮ ದಿವಂಗತ ತಂದೆಯಿಂದ ಸ್ವೀಕರಿಸಿದ ಒಂದು ದಾರವನ್ನು ಉಡುಗೊರೆಯಾಗಿ ನೀಡಲು ನೀವು ಮುಂದಾದಿರಿ. ಅದು ನನಗೆ ಸ್ವೀಕರಿಸಲು ತುಂಬಾ ವೈಯಕ್ತಿಕ ವಿಷಯವಾಗಿತ್ತು, ಆದರೆ ನಿಮ್ಮ ವರ್ತನೆ ಹೃದಯಸ್ಪರ್ಶಿಯಾಗಿತ್ತು ಮತ್ತು ಅಂದಿನಿಂದ ನನ್ನೊಂದಿಗೆ ಉಳಿದಿದೆ. ಪ್ರತಿಯಾಗಿ ನೀಡಲು ನನ್ನ ಬಳಿ ಯಾವುದೇ ದಾರ ಇಲ್ಲದಿದ್ದರೂ, ನೀವು ನನ್ನ ಅಪಾರವಾದ ಮೆಚ್ಚುಗೆ ಮತ್ತು ಶುಭಾಶಯಗಳನ್ನು ಹೊಂದಿದ್ದೀರಿ ಎಂಬುದನ್ನು ದಯವಿಟ್ಟು ತಿಳಿದುಕೊಳ್ಳಿ. ವಿರಾಟ್, ನಿಮ್ಮ ನಿಜವಾದ ಪರಂಪರೆ, ಕ್ರೀಡೆಯನ್ನು ಎತ್ತಿಕೊಳ್ಳಲು ಅಸಂಖ್ಯಾತ ಯುವ ಕ್ರಿಕೆಟಿಗರನ್ನು ಪ್ರೇರೇಪಿಸುತ್ತದೆ.
ನೀವು ಎಂತಹ ಅದ್ಭುತ ಟೆಸ್ಟ್ ವೃತ್ತಿಜೀವನವನ್ನು ಹೊಂದಿದ್ದೀರಿ! ನೀವು ಭಾರತೀಯ ಕ್ರಿಕೆಟ್ಗೆ ಕೇವಲ ರನ್ ಮಾತ್ರವಲ್ಲ ಅದಕ್ಕಿಂತ ಹೆಚ್ಚಿನದನ್ನು ನೀಡಿದ್ದೀರಿ. ಅದಕ್ಕಾಗಿಯೇ ನೀವು ಹೊಸ ಪೀಳಿಗೆಯ ಉತ್ಸಾಹಭರಿತ ಅಭಿಮಾನಿಗಳು ಮತ್ತು ಆಟಗಾರರನ್ನು ನೀಡಿದ್ದೀರಿ. ಬಹಳ ವಿಶೇಷವಾದ ಟೆಸ್ಟ್ ವೃತ್ತಿಜೀವನಕ್ಕೆ ಅಭಿನಂದನೆಗಳು ಎಂದಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications