Rishabh Pant: ಗಾಯಗೊಂಡಿದ್ದೇನೆ ಎಂದು ನಾಟಕವಾಡಿದ್ದೆ! ಟಿ20 ವಿಶ್ವಕಪ್ ಫೈನಲ್ ಬಗ್ಗೆ ಪಂತ್ ಅಚ್ಚರಿಯ ಹೇಳಿಕೆ
ಟಿ20 ವಿಶ್ವಕಪ್ 2024ರ ಫೈನಲ್ ಪಂದ್ಯದಲ್ಲಿ ಭಾರತ ಸೋಲುವ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ಒಂದು ಹಂತದಲ್ಲಿ ಸೋತೇ ಬಿಡುವ ಹಂತದಲ್ಲಿದ್ದ ಭಾರತ ಬಳಿಕ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿ ಗೆದ್ದು ಸಂಭ್ರಮಿಸಿತ್ತು. ಸೂರ್ಯಕುಮಾರ್ ಯಾದವ್ರ ಕ್ಯಾಚ್, ಬುಮ್ರಾ ಬೌಲಿಂಗ್ ಕ್ರಿಕೆಟ್ ಅಭಿಮಾನಿಗಳಿಗೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇನ್ನು ಈ ಪಂದ್ಯದಲ್ಲಿ ರಿಷಬ್ ಪಂತ್ ತಾವು ಆಡಿದ ನಾಟಕದ ಬಗ್ಗೆ ಮಾತನಾಡಿದ್ದಾರೆ.
ಗೆಲುವಿನತ್ತ ಮುನ್ನುಗ್ಗುತ್ತಿದ್ದ ದಕ್ಷಿಣ ಆಫ್ರಿಕಾ ಬ್ಯಾಟರ್ ಗಳ ಲಯವನ್ನು ಹಾಳು ಮಾಡಲು ವಿಕೆಟ್ ಕೀಪರ್ ರಿಷಬ್ ಪಂತ್ ಗಾಯಗೊಂಡಂತೆ ನಾಟಕವಾಡಿದ್ದರು ಎಂದು ನಾಯಕ ರೋಹಿತ್ ಶರ್ಮಾ ಬಹಿರಂಗಪಡಿಸಿದ್ದರು. ದಕ್ಷಿಣ ಆಫ್ರಿಕಾ 30 ಎಸೆತಗಳಲ್ಲಿ ರನ್ ಅಗತ್ಯವಿದ್ದಾಗ, ಭಾರತ ಗೆಲ್ಲಲು ಏನಾದರೂ ವಿಶೇಷವಾದದ್ದನ್ನೇ ಮಾಡಬೇಕಿತ್ತು, ಆಗಲೇ ರಿಷಬ್ ಪಂತ್ ಕೆಲ ಸಮಯ ಆಟವನ್ನು ನಿಲ್ಲುವಂತೆ ಮಾಡಿದ್ದರು.

ಮೊಣಕಾಲಿಗೆ ನೋವಾಗಿದೆ ಎಂದು ಕೆಳಗೆ ಬಿದ್ದರು, ತಕ್ಷಣವೇ ಫಿಸಿಯೋ ರಿಷಬ್ ಪಂತ್ರನ್ನು ಪರಿಶೀಲನೆ ಮಾಡಲು ಮೈದಾನದೊಳಗೆ ಓಡಿ ಬಂದರು. ಕೆಲ ಸಮಯ ಪಂದ್ಯ ನಿಂತ ಬಳಿಕ ಆರಂಭವಾಯಿತು, ಬಳಿಕ ನಡೆದಿದ್ದು ಈಗ ಇತಿಹಾಸ. ಭಾರತ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತು.
ಗುಟ್ಟು ಬಿಚ್ಚಿಟ್ಟ ರಿಷಬ್ ಪಂತ್
ರಿಷಬ್ ಪಂತ್ ಅಂದು ನಿಜವಾಗಿ ಗಾಯಗೊಂಡಿರಲಿಲ್ಲ ಬದಲಾಗಿ ಆಟವನ್ನು ಕೆಲ ಸಮಯ ನಿಲ್ಲಿಸಲು ಮಾಡಿದ ನಾಟವಾಗಿತ್ತು, ರೋಹಿತ್ ಶರ್ಮಾ ಕೂಡ ಇದನ್ನೇ ಹೇಳಿದ್ದರು. ಇದೀಗ ಘಟನೆ ಬಗ್ಗೆ ಬಾಯಿ ಬಿಟ್ಟಿರುವ ರಿಷಬ್ ಪಂತ್ ಮೈದಾನದಲ್ಲಿ ಸಮಯ ಕಳೆಯುವಂತೆ ಫಿಸಿಯೋಗೆ ಕೇಳಿಕೊಂಡಿದ್ದೆ ಎಂದಿದ್ದಾರೆ.
ಫೈನಲ್ ಪಂದ್ಯದ ಬಗ್ಗೆ ಮಾತನಾಡಿರುವ ರಿಷಬ್ ಪಂತ್, 2-3 ಓವರ್ ಗಳಲ್ಲಿ ಸಾಕಷ್ಟು ರನ್ ಬಂದಿದ್ದವು, ನಾನು ತುಂಬಾ ಯೋಚನೆ ಮಾಡಿದ್ದೆ, ಆಟವನ್ನು ಸ್ವಲ್ಪ ಸಮಯ ನಿಲ್ಲಿಸಿದರೆ ಏನಾದರೂ ಬದಲಾಗುತ್ತದೆ ಎನಿಸಿತ್ತು. ತಕ್ಷಣ ಗಾಯಗೊಂಡವನಂತೆ ಕೆಳಗೆ ಬಿದ್ದೆ, ನೋಡಲು ಬಂದ ಫಿಸಿಯೋಗೆ ಸ್ವಲ್ಪ ಸಮಯ ತೆಗೆದುಕೊಳ್ಳಿ ಎಂದು ಹೇಳಿದೆ. ಅವರು ಚೆನ್ನಾಗಿದ್ದೀಯಾ ಎಂದು ಕೇಳುತ್ತಿದ್ದರು, ನಾನು ಗಾಯಗೊಂಡವನಂತೆ ನಟಿಸಿದೆ. ಎಲ್ಲಾ ಸಮಯದಲ್ಲಿ ಈ ತಂತ್ರ ಕೆಲಸ ಮಾಡುತ್ತದೆ ಎಂದು ನಾನು ಹೇಳುವುದಿಲ್ಲ ಆದರೆ ಕೆಲವು ಪರಿಸ್ಥಿಯಿಯಲ್ಲಿ ಇದು ಕೆಲಸಕ್ಕೆ ಬರುತ್ತದೆ. ಅಂದಿನ ಪಂದ್ಯದಲ್ಲಿ ನಾನು ಮಾಡಿದ್ದು ತಂಡಕ್ಕೆ ಸಹಕಾರಿಯಾಯಿತು, ನನಗೆ ಇನ್ನೇನೂ ಬೇಕಿಲ್ಲ ಎಂದು ಹೇಳಿದ್ದಾರೆ.
ಅದು ನಾಟಕ ಎಂದಿದ್ದ ರೋಹಿತ್
ದಿ ಕಪಿಲ್ ಶರ್ಮಾ ಶೋನ ಸಂಚಿಕೆಯಲ್ಲಿ ರೋಹಿತ್ ಶರ್ಮಾ ಕೂಡ ರಿಷಬ್ ಪಂತ್ರ ಘಟನೆ ಬಗ್ಗೆ ನೆನಪು ಮಾಡಿಕೊಂಡಿದ್ದರು. ದಕ್ಷಿಣ ಆಫ್ರಿಕಾ ಗೆಲುವಿಗೆ 30 ಎಸೆತಗಳಲ್ಲಿ 30 ರನ್ ಬೇಕಿದ್ದಾಗ, ಪಂತ್ ಆಟವನ್ನು ಸ್ವಲ್ಪ ಸಮಯ ನಿಲ್ಲಿಸಲು ಬುದ್ಧಿವಂತಿಕೆಯನ್ನು ಬಳಿಸಿದ. ಇದರಿಂದ ಆಟ ನಿಧಾನವಾಯಿತು, ಉತ್ತಮವಾಗಿ ರನ್ ಬರುವಾಗ ಬ್ಯಾಟರ್ ಬೇಗ ಬೇಗ ಬೌಲಿಂಗ್ ಮಾಡಲಿ ಎಂದು ಬಯಸುತ್ತಾರೆ. ಆದರೆ ಪಂತ್ ಕೆಳಗೆ ಬಿದ್ದಾಗ, ಕ್ಲಾಸೆನ್ ಅವರು ಬೇಗನೆ ಆಟ ಶುರುವಾಗಲಿ ಎಂದು ಕಾಯುತ್ತಿದ್ದರು. ಪಂದ್ಯ ಕೆಲ ಸಮಯದ ಬಳಿಕ ಆರಂಭವಾಯಿತು, ಕ್ಲಾಸೆನ್ ಔಟಾದರು, ಪಂತ್ ತನ್ನ ಬುದ್ದಿವಂತಿಯನ್ನು ಬಳಸಿದ್ದ ಎಂದು ರೋಹಿತ್ ಶರ್ಮಾ ಹೇಳಿದರು.
-
Petrol Diesel Shortage: ಪೆಟ್ರೋಲ್, ಡೀಸೆಲ್ ಖಾಲಿಯಾಗುತ್ತೆ ಅನ್ನೋ ಸುಳ್ಳು ವದಂತಿಗಳಿಗೆ ಕಿವಿಕೊಡಬೇಡಿ; ಇಂಡಿಯನ್ ಆಯಿಲ್ -
ಶುಭ್ಮನ್ ಗಿಲ್ ಭೇಟಿಯಾದ ಅನನ್ಯಾ ಬಿರ್ಲಾ; ಆರ್ಸಿಬಿ ಹೊಸ ಮಾಲೀಕನ ಸಹೋದರಿಗೆ ಗುಜರಾತ್ ಜೆರ್ಸಿನಾ ಎಂದ ನೆಟ್ಟಿಗರು -
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ












Click it and Unblock the Notifications