RCB Vs DC: 'ಗ್ರೀನ್ ಜರ್ಸಿ'ಯಲ್ಲಿ ಅಖಾಡಕ್ಕಿಳಿಯಲಿದೆ ಆರ್ಸಿಬಿ; ಇದರ ಹಿಂದಿದೆ ಮಹತ್ವದ ಸಂದೇಶ
RCB IPL 2026: ಚಿನ್ನಸ್ವಾಮಿಯಲ್ಲಿ ಶನಿವಾರ (ಏಪ್ರಿಲ್ 18) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಹಸಿರು ಜರ್ಸಿ ಧರಿಸಿ ಕಣಕ್ಕಿಯಲಿದ್ದಾರೆ. ಇದರ ಹಿಂದಿದೆ ಮಹತ್ವದ ಸಂದೇಶ. ಹಾಗಾದ್ರೆ, ಅದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಐಪಿಎಲ್ ಇತಿಹಾಸದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೆ, ಪರಿಸರ ಕಾಳಜಿಯಲ್ಲೂ ಮುಂಚೂಣಿಯಲ್ಲಿರುವ ತಂಡವೆಂದರೆ ಅದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಪ್ರತಿ ಬಾರಿಯಂತೆ ಈ ವರ್ಷವೂ ಆರ್ಸಿಬಿ ಹಸಿರು ಜರ್ಸಿಯೊಂದಿಗೆ ಮೈದಾನಕ್ಕಿಳಿಯುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಇಂದು ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡವು ಈ ವಿಶೇಷ ಜರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ.

ಹಸಿರು ಜರ್ಸಿ ಧರಿಸುವ ಉದ್ದೇಶವೇನು?
2011ರಲ್ಲಿ ಚಾಲನೆಗೊಂಡ ಈ 'ಗೊ ಗ್ರೀನ್' ಅಭಿಯಾನವು ಪರಿಸರ ಸಂರಕ್ಷಣೆ ಮತ್ತು ಜಾಗತಿಕ ತಾಪಮಾನ ತಡೆಗಟ್ಟುವ ಉದ್ದೇಶವನ್ನು ಹೊಂದಿದೆ. ಆರ್ಸಿಬಿ ಈ ಕೆಲಸವನ್ನು ಕೇವಲ ಪ್ರಚಾರಕ್ಕಾಗಿ ಮಾಡದೆ, ಅರ್ಥಪೂರ್ಣ ಉದ್ದೇಶದಿಂದ ಮಾಡುತ್ತಿದೆ.
ಈ ಬಾರಿಯ ಜರ್ಸಿಯ ವಿಶೇಷತೆಗಳೇನು?
ಈ ಬಾರಿಯ ಹಸಿರು ಜರ್ಸಿಯನ್ನು ಕ್ರೀಡಾಂಗಣದ ಸುತ್ತ ಸಂಗ್ರಹಿಸಲಾದ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಹಳೆಯ ಬಟ್ಟೆಗಳನ್ನು ಸಂಸ್ಕರಿಸಿ ಸಿದ್ಧಪಡಿಸಲಾಗಿದೆ. ಕ್ರೀಡಾಂಗಣದಲ್ಲಿ ಸೌರಶಕ್ತಿಯ ಬಳಕೆ ಮತ್ತು ವೈಜ್ಞಾನಿಕ ತ್ಯಾಜ್ಯ ವಿಲೇವಾರಿಯಿಂದಾಗಿ ಆರ್ಸಿಬಿ ವಿಶ್ವದ ಮೊದಲ ಕಾರ್ಬನ್ ನ್ಯೂಟ್ರಲ್ ಟಿ20 ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದಿನ ಪಂದ್ಯದ ಟಾಸ್ ವೇಳೆ ಆರ್ಸಿಬಿ ನಾಯಕ ರಜತ್ ಪಾಟಿದಾರ್, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಿಗೆ ಬೆಲೆಬಾಳುವ ಉಡುಗೊರೆಯ ಬದಲಾಗಿ ಸಣ್ಣ ಸಸಿಯನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಇದು "ಮರಗಳನ್ನು ಬೆಳೆಸಿ, ಪರಿಸರ ಉಳಿಸಿ" ಎಂಬ ಸಂದೇಶವನ್ನು ಜಗತ್ತಿಗೆ ಸಾರುವ ವಿಶಿಷ್ಟ ಪ್ರಯತ್ನವಾಗಿದೆ.
ಅಭಿಮಾನಿಗಳಿಗೆ ಮಹತ್ವದ ಮಾಹಿತಿ
ಪಂದ್ಯ ವೀಕ್ಷಿಸಲು ಬರುವ ಕ್ರಿಕೆಟ್ ಪ್ರೇಮಿಗಳು ಸಹ ಈ ಅಭಿಯಾನದಲ್ಲಿ ಕೈಜೋಡಿಸುವಂತೆ ತಂಡ ಮನವಿ ಮಾಡಿದೆ. ಇಂಧನ ಉಳಿಸಲು ಮೆಟ್ರೋ ಅಥವಾ ಬಿಎಂಟಿಸಿ ಬಸ್ಸುಗಳಂತಹ ಸಾರ್ವಜನಿಕ ಸಾರಿಗೆ ಬಳಸಿ. ಕ್ರೀಡಾಂಗಣದ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಎಂಬ ಸಂದೇಶವನ್ನ ಸಾರಲಿದೆ.
ಇಂದಿನ ಈ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ. ಮಧ್ಯಾಹ್ನ 3:00 ಗಂಟೆಗೆ ಟಾಸ್ ನಡೆಯಲಿದ್ದು, ಅಭಿಮಾನಿಗಳು ಈ ಹಸಿರು ಕ್ರಾಂತಿಗೆ ಸಾಕ್ಷಿಯಾಗಲು ಸಜ್ಜಾಗಿದ್ದಾರೆ. ಇನ್ನೂ ಮೈದಾನದಲ್ಲಿ ರನ್ ಮಳೆ ಸುರಿಸುವ ಜೊತೆಗೆ, ಆರ್ಸಿಬಿಯ ಈ 'ಹಸಿರುವ ಉಳಿಸಿ, ಪರಿಸರ ಸಂರಕ್ಷಿಸಿ' ಎನ್ನುವ ಸಣ್ಣ ಸಂದೇಶದ ಹೆಜ್ಜೆ ದೊಡ್ಡ ಬದಲಾವಣೆಗೆ ದಾರಿಯಾಗಲಿ ಎನ್ನುವುದೇ ಎಲ್ಲರ ಆಶಯ.
ಒಟ್ಟಿನಲ್ಲಿ ಹೇಳುವುದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 'ಹಸಿರು ಜರ್ಸಿ' ಉಪಕ್ರಮವು ಕೇವಲ ಕ್ರೀಡೆಯಲ್ಲ, ಅದೊಂದು ಪರಿಸರ ಜಾಗೃತಿಯ ಚಳುವಳಿ. 2011ರಲ್ಲಿ ಆರಂಭವಾದ ಈ 'ಗೊ ಗ್ರೀನ್' ಅಭಿಯಾನದ ಮೂಲಕ ಆರ್ಸಿಬಿ ಪ್ರತಿ ವರ್ಷ ಒಂದು ಪಂದ್ಯವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಡುತ್ತದೆ. ಈ ಜರ್ಸಿಯ ವಿಶೇಷತೆಯೆಂದರೆ, ಇದನ್ನು ಕ್ರೀಡಾಂಗಣದಲ್ಲಿ ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಸ್ಕರಿಸಿ ತಯಾರಿಸಲಾಗುತ್ತದೆ.
ವಿಶ್ವದ ಮೊದಲ 'ಕಾರ್ಬನ್ ನ್ಯೂಟ್ರಲ್' ಕ್ರಿಕೆಟ್ ತಂಡ ಎಂಬ ಹೆಗ್ಗಳಿಕೆ ಹೊಂದಿರುವ ಆರ್ಸಿಬಿ, ಟಾಸ್ ವೇಳೆ ಎದುರಾಳಿ ನಾಯಕನಿಗೆ ಸಸಿಯನ್ನು ಉಡುಗೊರೆಯಾಗಿ ನೀಡುವ ಮೂಲಕ ಹಸಿರೀಕರಣದ ಸಂದೇಶ ಸಾರುತ್ತದೆ. ಸೌರಶಕ್ತಿ ಬಳಕೆ ಮತ್ತು ಕ್ರೀಡಾಂಗಣದ ಶೂನ್ಯ ತ್ಯಾಜ್ಯ ನಿರ್ವಹಣೆ ಈ ಅಭಿಯಾನದ ಪ್ರಮುಖ ಭಾಗಗಳಾಗಿವೆ. ಅಭಿಮಾನಿಗಳೂ ಸಹ ಸಾರ್ವಜನಿಕ ಸಾರಿಗೆ ಬಳಸಿ ಪರಿಸರ ಕಾಳಜಿ ತೋರಬೇಕೆಂದು ತಂಡ ಪ್ರೇರೇಪಿಸುತ್ತದೆ.












Click it and Unblock the Notifications