Get Updates
Get notified of breaking news, exclusive insights, and must-see stories!

IPL 2026 RCB: ಆರ್‌ಸಿಬಿಯಲ್ಲಿ ಕನ್ನಡಿಗನ ಸ್ಥಾನಕ್ಕೆ 7 ಕೋಟಿ ಮೊತ್ತದ ಆಟಗಾರ ಎಂಟ್ರಿ ಸಾಧ್ಯತೆ

IPL 2026 RCB: ಐಪಿಎಲ್‌ 2025 ಫೈನಲ್‌ ಪಂದ್ಯದಲ್ಲಿ ಗೆದ್ದು ಚಾಂಪಿಯನ್ ಆಗಿರುವ ಆರ್‌ಸಿಬಿ ಮುಂದಿನ ಬಾರಿಗೆ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿದೆ. ಮಿನಿ ಹರಾಜಿನಲ್ಲಿ ಹೊಸ ಎಂಟು ಆಟಗಾರರನ್ನು ಸೇರ್ಪಡೆ ಮಾಡಿಕೊಂಡಿದೆ. ಇದರಲ್ಲಿ ಒಬ್ಬರು ಪ್ಲೇಯಿಂಗ್‌ 11ನಲ್ಲಿ ಸ್ಥಾನ ಪಡೆದುಕೊಳ್ಳಲಿದ್ದು, ಕನ್ನಡಿಗ ದೇವ್‌ದತ್ ಪಡಿಕ್ಕಲ್ ಹೊರಗುಳಿಯುವ ಸಾಧ್ಯತೆಯಿದೆ ಎನ್ನುವ ಸುದ್ದಿಗಗಳು ದೊಡ್ಡ ಮಟ್ಟದಲ್ಲಿ ಗದ್ದಲ ಮಾಡುತ್ತಿವೆ. ಹಾಗಾದ್ರೆ, ಈ ಸ್ಥಾನ ತುಂಬಬಲ್ಲ ಆಟಗಾರ ಯಾರು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ರಿಟೈನ್‌ ಪ್ರಕ್ರಿಯೆ ವೇಳೆ ಬಹುತೇಕ ಈ ಬಾರಿಯ ಆಟಗಾರರನ್ನು ಉಳಿಸಿಕೊಂಡಿದ್ದು, ಎಂಟು ಮಂದಿಯನ್ನು ಕೈಬಿಟ್ಟಿತು. ಮಿನಿ ಹರಾಜಿನಲ್ಲಿ ಎಂಟು ಮಂದಿ ಆಟಗಾರರನ್ನು ಕೊಂಡುಕೊಳ್ಳುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಪಡಿಸಿಕೊಂಡಿತು. ಇದೀಗ ಪ್ರಸ್ತುತ ತಂಡದಲ್ಲಿ 25 ಆಟಗಾರರನ್ನು ಹೊಂದಿದೆ.

IPL 2026 Venkatesh Iyer Likely to Replace Kannada Star Devdutt Padikkal in RCB Playing XI

ಈ ಬಾರಿಯಂತೆ ಮುಂದಿನ ಬಾರಿಗೆ ಉತ್ತಮ ದಾಂಡಿಗರೇ ಪ್ಲೇಯಿಂಗ್‌ 11ನಲ್ಲಿ ಕಾಣಿಸಿಕೊಳ್ಳಲಿದ್ದು, ತುಸು ಬದಲಾವಣೆಯಾಗುವ ಸಾಧ್ಯತೆಯಿದೆ ಎನ್ನುವ ಭವಿಷ್ಯವೊಂದು ಹೊರಬಿದ್ದಿದೆ. ಇದು ಇದೀಗ ಸಮಾಜಿಕ ಜಾಲತಾಣದಲ್ಲಿ ದೊಟ್ಟ ಮಟ್ಟದಲ್ಲಿ ವೈರಲ್‌ ಆಗಿದೆ. ಕನ್ನಡಿಗ ದೇವ್ ಸ್ಥಾನದಲ್ಲಿ ಬೇರೊಬ್ಬ ಆಟಗಾರರ ಆಡಲಿದ್ದಾರೆ ಎಂಬುದೇ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕನ್ನಡಿಗನ ಸ್ಥಾನಕ್ಕೆ ಬರುವವರು ಯಾರು?: ಮುಂದಿನ ಐಪಿಎಲ್‌ 2026ನಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್‌ ಸ್ಥಾನದಲ್ಲಿ ತಂಡಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ವೆಂಕಟೇಶ್‌ ಅವರನ್ನು ಆಡಿಸಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಇವರನ್ನು ಫ್ರಾಂಚೈಸಿಯು 7,00,00,000 ರೂಪಾಯಿಗೆ ಕೊಂಡುಕೊಂಡಿತು. ಇವರು ಬ್ಯಾಟಿಂಗ್‌ ಜೊತೆ ಬೌಲಿಂಗ್ ಸಹ ಮಾಡಲಿದ್ದು, ಆಲ್‌ರೌಂಡರ್ ಆಗಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಟಾಪ್‌ ಆರ್ಡರ್‌ನಲ್ಲಿ ವಿರಾಟ್‌ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಕಣಕ್ಕಿಯಲಿದ್ದಾರೆ. ನಂತರದ ಕ್ರಾಮಾಂಕದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್‌ ಬದಲಿಗೆ ವೇಂಕಟೇಶ್‌ ಅಯ್ಯರ್ ಆಡಲಿದ್ದಾರೆ. ಬಳಿಕ, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ, ಟಿಮ್ ಡೇವಿಡ್ ಬರಲಿದ್ದು, ಇವರು ಫಿನಿಶರ್ ಆಗಿರಲಿದ್ದಾರೆ. ಯಾಕಂದ್ರೆ, ಹಿಂದಿನ ಆವೃತ್ತಿಯಲ್ಲಿ ಇವರು ಈ ಸ್ಥಾನದಲ್ಲಿ ಬಂದು ಎದುರಾಳಿ ತಂಡಗಳ ಆಟಗಾರರಿಗೆ ಬೆವರಿಳಿಸಿದ್ದಾರೆ. ಕೊನೆಗೆ ಕೃನಾನ್‌ ಪಾಂಡ್ಯ, ಬ್ಲ್ಯಾಕ್‌ ಡ್ರ್ಯಾಗನ್‌ ರೊಮಾರೊಯೋ ಶೆಫರ್ಡ್‌ ಬರಲಿದ್ದಾರೆ. ಇವರು ಕೂಡ ಬೌಲಿಂಗ್‌ ಜೊತೆ ಬ್ಯಾಟಿಂಗ್‌ನಲ್ಲೂ ಅಬ್ಬರಿಸಿದ್ದಾರೆ.

ದೇವದತ್ ಪಡಿಕ್ಕಲ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೂ ಸಹ ಇವರ ಸ್ಥಾನಕ್ಕೆ ವೆಂಕಟೇಶ್ ಅಯ್ಯರ್ ಅವರನ್ನು ನಿರ್ಧಾರ ಮಾಡಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಆಕ್ರೋಶಗಳು ಕೂಡ ವ್ಯಕ್ತವಾಗಿವೆ. ಕನ್ನಡದ ತಂಡದಲ್ಲಿ ಕನ್ನಡಿಗನಿಗೆ ಹಿನ್ನಡೆ ಯಾಕೆ? ಎಂದು ಪ್ರಶ್ನಿಸುವ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ಬೌಲಿಂಗ್‌ ವಿಭಾಗಕ್ಕೆ ಬಂದರೆ, ಜೋಶ್ ಹ್ಯಾಝಲ್‌ವುಡ್, ಭುವನೇಶ್ವರ್ ಕುಮಾರ್, ಯಶ್‌ ದಯಾಳ್‌ ಮಾರಕ ಬೌಲಿಂಗ್ ದಾಳಿ ಮಾಡುತ್ತಾರೆ. ಸುಯೇಶ್‌ ಶರ್ಮಾ ಹಾಗೂ ಕೃನಲ್‌ ಪಾಂಡ್ಯ ಸ್ಪಿನ್‌ ಬೌಲರ್ ಇದ್ದಾರೆ. ಒಂದು ವೇಳೆ ಯಶ್‌ ದಯಾಳ್‌ ಹೊರಗುಳಿದರೆ, ಇವರನ್ನು ಬೌಲಿಂಗ್‌ಗೆ ಇಳಿಸುವ ಸಾಧ್ಯತೆ ಹೆಚ್ಚಿದೆ. ಯಾಕಂದ್ರೆ, ಇವರು ಬ್ಯಾಟಿಂಗ್ ಜೊತೆ ಉತ್ತಮ ಬೌಲಿಂಗ್ ದಾಳಿಯನ್ನು ಸಹ ಮಾಡಲಿದ್ದಾರೆ.

ಪ್ರಸ್ತುತ ಆರ್‌ಸಿಬಿ ತಂಡದಲ್ಲಿರುವ ಆಟಗಾರರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯೇಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್, ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್, ವಿಕಿ ಓಸ್ಟ್ವಾಲ್, ಕನಿಷ್ಕ್ ಚೌಹಾಣ್, ವಿಹಾನ್ ಮಲ್ಹೋತ್ರಾ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+