ಅಮ್ಮನಿಗಾಗಿ ಬಾವಿಯನ್ನೇ ತೋಡಿದ ಸಾಗರದ 'ಬಾಹುಬಲಿ'
ಸಾಗರ (ಶಿವಮೊಗ್ಗ), ಮೇ 07 : ಸಾಗರದಂಥ ಮಲೆನಾಡಿನ ಪ್ರದೇಶದಲ್ಲೂ ನೀರಿಗೆ ತತ್ವಾರ. ಅಂಥ ಬೇಸಿಗೆ ಇದು. ಅಮ್ಮ ಪ್ರತಿದಿನ ನೀರು ತರಲೆಂದು ಅರ್ಧ ಕಿ.ಮೀ. ದೂರ ಕ್ರಮಿಸಬೇಕಾಗಿತ್ತು. ಇದನ್ನು ನೋಡುತ್ತಿದ್ದ ಮಗ ಒಂದು ನಿರ್ಧಾರಕ್ಕೆ ಬಂದ. ಅಮ್ಮನಿಗಾಗಿ ಮನೆಯ ಹಿತ್ತಿಲಲ್ಲಿ ಬಾವಿಯನ್ನೇ ಅಗೆದ! ಇಂಥ ಮಕ್ಕಳನ್ನಲ್ಲವೆ ಎಲ್ಲ ಅಮ್ಮಂದಿರು ಬಯಸುವುದು?
ಈ ಸುದ್ದಿ ಸ್ವಲ್ಪ ಅತಿರೇಕದಂತೆ ಕಾಣಿಸುತ್ತದೆ. ಆದರೆ, ಅಮ್ಮನ ಕಷ್ಟ ನೋಡಲಾಗದೆ, ಸಾಗರ ತಾಲೂಕಿನ ಶೆಟ್ಟಿಸಾರ ಗ್ರಾಮದಲ್ಲಿ ನೆಲೆಸಿರುವ 15 ವರ್ಷದ ಹುಡುಗ ಪವನ್ ಕುಮಾರ್ ಬಾವಿಯನ್ನು ಅಗೆದು ನೀರು ಬರಿಸಿದ್ದಾನೆ. ಬಾವಿಯಲ್ಲಿ ನೀರು ಕಂಡೊಡನೆ ಅಮ್ಮನ ಕಣ್ಣು ಮಾತ್ರವಲ್ಲ, ಹೃದಯವೂ ತುಂಬಿ ಬಂದಿದೆ.
ಬಾವಿಯನ್ನು ಪವನ್ ನಿರ್ಮಿಸಿದ ಮೇಲೆ ಊರಿನಲ್ಲಿ ಎಲ್ಲರೂ ಅವನನ್ನು 'ಬಾಹುಬಲಿ' ಎಂದು ಕರೆಯುತ್ತಿದ್ದಾರಂತೆ ಎಂದು ದಿನ್ಯೂಸ್ ಮಿನಿಟ್ ವರದಿ ಮಾಡಿದೆ. ಅಮ್ಮನ ಪೂಜೆಗೆ ನೀರು ತರಲು ಕಷ್ಟವಾಗದಿರಲೆಂದು ಬಾಹುಬಲಿಯು ಶಿವನ ಲಿಂಗವನ್ನೇ ಎತ್ತಿಕೊಂಡು ಬಂದು ಜಲಪಾತದ ಬಳಿ ಪ್ರತಿಷ್ಠಾಪಿಸಿದ್ದನಂತೆ. ತೆಲುಗು ಸಿನೆಮಾದ ಕಥೆಯಿದು. ಇದನ್ನು ಸಾಗರದ 'ಬಾಹುಬಲಿ' ನಿಜವಾಗಿಸಿದ್ದಾನೆ. [ಅಮ್ಮಂದಿರ ಪ್ರಪಂಚ ಚಿಕ್ಕದು, ಪ್ರೀತಿ ಅಳತೆಗೆ ಸಿಗದು]

"ನೀರು ತರಲು ಅಮ್ಮ ಪ್ರತಿದಿನ ಎರಡು ಗಂಟೆ ವ್ಯಯಿಸುತ್ತಿದ್ದಳು. ನನಗೂ ರಜಾ ಇದ್ದ ಕಾರಣ ಅಮ್ಮನಿಗಾಗಿ ಯಾಕೆ ಬಾವಿಯನ್ನೇ ತೋಡಬಾರದು" ಎಂದು ಕಂಗಳನ್ನು ಅರಳಿಸುತ್ತಾನೆ ಸರಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಪವನ್ ಕುಮಾರ್.
ಅಮ್ಮನೂ ಸೇರಿದಂತೆ ಹಲವಾರು ಜನರು ಇಂಥ ಕೆಲಸಕ್ಕೆ ಕೈಹಾಕಬೇಡ ಎಂದು ತಿಳಿಮಾತು ಹೇಳಿದರು. ನನ್ನ ಕೆಲ ಸ್ನೇಹಿತರು ಕೂಡ ಇದೆಲ್ಲ ಆಗತಕ್ಕ ಮಾತಲ್ಲ ಎಂದು ಬುದ್ಧಿವಾದ ಹೇಳಿದರು. ಅಮ್ಮನೂ ನಾನು ಹತ್ತಿರದ ಬಾವಿಯಿಂದ ನೀರು ತರುತ್ತೇನೆ ಎಂದು ನುಡಿದರು. ಆದರೆ, ನಾನು ನಿರ್ಧಾರ ಮಾಡಿಯಾಗಿತ್ತು ಅಂತಾನೆ ಪವನ್.
ಏಪ್ರಿಲ್ ತಿಂಗಳಲ್ಲಿ ಬಾವಿ ತೋಡಲು ಪವನ್ ಆರಂಭಿಸಿದ್ದಾನೆ. 45 ಅಡಿ ಅಗೆತ ಆದ ನಂತರ ಕೈಮುರಿದಿದ್ದರಿಂದ ಇನ್ನಿಬ್ಬರ ಸಹಾಯ ತೆಗೆದುಕೊಳ್ಳಬೇಕಾಯಿತು ಎಂದು ಹೇಳುವ ಪವನ್ ಮುಂದೆ ಪೊಲೀಸ್ ಅಧಿಕಾರಿಯಾಗಿ ರಾಜ್ಯದ ಸೇವೆ ಸಲ್ಲಿಸಬೇಕು ಎಂದು ಕನಸು ಹೊತ್ತಿದ್ದಾನೆ. [ಮಕ್ಕಳ ಕಳೆದುಕೊಂಡ ಅಮ್ಮಂದಿರ ಗೋಳು ಕೇಳೋರ್ಯಾರು?]
45 ಅಡಿ ಅಗೆದ ನಂತರವೂ ನೀರು ಬರದಿದ್ದರಿಂದ ತುಂಬಾ ನಿರಾಶೆ ಆಗಿತ್ತು. ಆದರೆ, ಇಬ್ಬರು ವೃತ್ತಿಪರ ಬಾವಿ ತೋಡುವವರ ಸಹಕಾರದಿಂದ ಇನ್ನೂ ಹತ್ತು ಅಡಿ ತೋಡಿದಾಗ ನೀರು ಜಿನುಗಿತು ಎಂದು ಪವನ್ ಹೇಳುತ್ತಾನೆ. ಈ ಬಾವಿಯ ನೀರನ್ನು ಪವನ್ ಮನೆಯವರು ಮಾತ್ರವಲ್ಲ ಅಕ್ಕಪಕ್ಕದವರೂ ಬಳಸುತ್ತಿದ್ದಾರೆ.
ಇದೇ ಭಾನುವಾರ, ಮೇ ತಿಂಗಳ ಎರಡನೇ ಭಾನುವಾರ, ಮೇ 8ರಂದು ಅಮ್ಮನ ದಿನಾಚರಣೆ. ಅಮ್ಮನ ದಿನಕ್ಕೆ ಬಾವಿ ತೋಡಿ ಇದ್ದಲ್ಲಿಯೇ ನೀರು ಸಿಗುವಂತೆ ಮಾಡಿದ್ದಕ್ಕಿಂತ ದೊಡ್ಡ ಕಾಣಿಕೆ ಇನ್ನೇನಿದೆ. ಎಲ್ಲ ಅಮ್ಮಂದಿರಿಗೂ ಇಂಥ ಮಕ್ಕಳು ಸಿಗಲಿ.
-
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ? -
Rashmika Mandanna: ಮನೆಮಗಳಾಗಿ ಇಲ್ಲಿಗೆ ಬಂದೆ, ಈಗ ಸೊಸೆಯಾಗಿ ನಿಂತಿದ್ದೇನೆ: ರಶ್ಮಿಕಾ ಮಂದಣ್ಣ ಭಾವುಕ -
ಕೇಂದ್ರೀಯ ವಿದ್ಯಾಲಯ 1ನೇ ತರಗತಿ ಪ್ರವೇಶಾತಿ 2026: ಇಂದಿನಿಂದಲೇ ಅರ್ಜಿ ಸಲ್ಲಿಕೆ ಶುರು, ಪೋಷಕರೇ ಈಗಲೇ ಗಮನಿಸಿ












Click it and Unblock the Notifications