ಪದವೀಧರರ ಸಮಸ್ಯೆಗಳಿಗೆ ದನಿಯಾಗುವೆ: ಆಯನೂರು ಮಂಜುನಾಥ
ಶಿವಮೊಗ್ಗ, ನವೆಂಬರ್ 20: 'ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಯಾಗಿ ನನ್ನನ್ನು ಆಯ್ಕೆಮಾಡಿದ ಬಿಜೆಪಿ ರಾಜ್ಯಾದ್ಯಕ್ಷ ಪಕ್ಷದ ಅಖಿಲ ಭಾರತ ಸಮಿತಿಗೆ ಧನ್ಯವಾದಗಳು' ಎಂದು ಬಿಜೆಪಿ ಮುಖಂಡ ಹಾಗೂ ಪದವೀಧರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪದವೀಧರ ಕ್ಷೇತ್ರದಿಂದ ಆಯ್ಕೆಯಲ್ಲಿ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.
ಇದರಲ್ಲಿ ಮೂವರು ವರ್ಗದ ಪದವೀಧರರು ಇದ್ದಾರೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗ ಕ್ಷೇತ್ರದ ಪದವೀಧರರು, ಸ್ವ ಉದ್ಯೋಗಸ್ಥ ಪದವೀದರ, ನಿರುದ್ಯೋಗ ಪದವೀಧರರು ಇದ್ದಾರೆ. ಇವರ ಸಮಸ್ಯೆಯನ್ನ ವಿಧಾನ ಮಂಡಲದಲ್ಲಿ ಭಾಗವಹಿಸಿ ಮಾತನಾಡುವ ಅನುಭವವಿದೆ, ಈ ಕುರಿತು ನಾನು ಚರ್ಚೆ ಮಾಡಬಲ್ಲೆ ಎಂದರು.

ಪದವೀಧರ ಹಾಗೂ ಕಾರ್ಮಿಕರ ಗಂಭೀರ ಸಮಸ್ಯೆ ಬಗ್ಗೆ ಕಳೆದ ಹತ್ತು ವರ್ಷಗಳಿಂದ ಕೇಳಿಬಂದಿಲ್ಲ, ಕಾರ್ಮಿಕ ಹೋರಾಟದಿಂದಲೇ ಬಂದ ನಾನು ಪದವೀಧರ ಸಮಸ್ಯೆಗಳಿಗೆ ಸಮರ್ಥದ್ವನಿ ಕೊಡಬಲ್ಲೆ ಎಂದರು.
25 ಸಾವಿರ ಪದವೀಧರ ನೌಕರರು ಉದ್ಯೋಗದಲ್ಲಿರುವವರಿಗೆ ಸ್ಪಂದಿಸಬಲ್ಲೆ, ಸ್ವಯಂ ಉದ್ಯೋಗಸ್ಥರ ಹಾಗೂ ನಿರುದ್ಯೋಗಿಗಳ ಸಮಸ್ಯೆಗೆ ಸದನದಲ್ಲಿ ಚರ್ಚೆ ಮಾಡಬಲ್ಲೆ ನಾನು ಎಂದು ಹೇಳಿದರು.
ಮುಂದಿನ ಬಾರಿ ವಿಧಾನ ಸಭೆ ಚುನಾವಣೆಗೆ ನಮ್ಮ ಪಕ್ಷ ಅಧಿಕಾರಕ್ಕೆ ಬರತ್ತದೆ ಎಂಬ ಆತ್ಮವಿಶ್ವಾಸವಿದೆ. ಹಾಗಾಗಿ ನಾನು ಆಯ್ಕೆಯಾಗಿ ಬಂದಲ್ಲಿ ಉತ್ತಮ ಸೇವೆ ನೀಡಲು ಬದ್ದವಾಗಿದ್ದೇನೆ ಎಂದ ಅವರು ಪದವೀಧರ ಕ್ಷೇತ್ರಕ್ಕೆ ಹೆಸರು ನೋಂದಾಯಿಸದವರು ನೋಂದಾಯಿಸಿಕೊಳ್ಳಲು ಕರೆ ನೀಡಿದರು.
1/07/17ರಿಂದ ಸರ್ಕಾರಿ ನೌಕರರಿಗೆ ಆರನೇ ವೇತನ ನೀಡಬೇಕಿತ್ತು. ಆದರೆ ಇದುವರೆಗೆ ಆಯೋಗದ ವರದಿ ಜಾರಿಗೊಳಿಸಿಲ್ಲ. ಯಾವುದೇ ತಿದ್ದುಪಡಿಯಾಗದೆ ಡಿಸೆಂಬರ್ ಒಳಗೆ ಸದನದಲ್ಲಿ ಮಂಡನೆಗೊಂಡು ಜಾರಿಯಾಗಬೇಕು, ಎಂದ ಅವರು ಇದುವರೆಗೂ ಆರನೇ ವೇತನ ಜಾರಿಯಾಗದೆ ಇರುವುದಕ್ಕೆ ಸರ್ಕಾರ ಮದ್ಯಂತರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇಂದಿರಾ ಕ್ಯಾಂಟೀನ್ ಸರ್ಕಾರವೇ ನಿರ್ವಹಿಸಲಿ: ನಿರ್ಮಾಣಕ್ಕೆ ಕಾರ್ಮಿಕರ ಇಲಾಖೆ, ಸ್ಥಳೀಯ ಸಂಸ್ಥೆಗಳು ಸೇರಿದಂತೆ ಒಂಬತ್ತು ಇಲಾಖೆಯಿಂದ ನಿರ್ವಹಣೆ ಮಾಡಲಾಗುತ್ತಿದೆ, ಈ ರೀತಿ ಮಾಡುವ ಬದಲು ಸರ್ಕಾರವೇ ನಿರ್ವಹಣೆ ಮಾಡಬೇಕೆಂದು ಒತ್ತಾಯಿಸಿದರು.
ಪಕ್ಷದಲ್ಲಿ ಪದವೀಧರ ಕ್ಷೇತ್ರಕ್ಕೆ ತಮ್ಮ ಆಯ್ಕೆಯಾಗಿರುವ ಬಗ್ಗೆ ಪಕ್ಷದಲ್ಲಿ ಅಸಮಾಧಾನವಿದೆಯೇ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಬಗ್ಗೆ ಗೊಂದಲವಿಲ್ಲ, ಆಕಾಂಕ್ಷಿಗಳಾಗಿ ಹಲವಾರು ಜನ ಸ್ಪರ್ಧಿಸಲು ಇಷ್ಟಪಟ್ಟಿದ್ದರು, ಗಿರೀಶ್ ಪಾಟೀಲ್, ಮಂಜುಳಾ, ಅರುಣ್, ದೇವದಾಸ್ ನಾಯ್ಕ್ ಇವರುಗಳು ಇದ್ದರು, ಆದರೆ ಪಕ್ಷದ ಒಮ್ಮತವಾಗಿ ನನ್ನನ್ನ ಆಯ್ಕೆ ಮಾಡಿದೆ. ಅಸಮಾಧಾನವನ್ನ ಇದ್ದರೆ ಕುಳಿತು ಬಗೆಹರಿಸಿಕೊಳ್ಳಲಾಗುವುದು ಎಂದರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications