Get Updates
Get notified of breaking news, exclusive insights, and must-see stories!

Kumaraswamy vs Yogeshwar: ಚನ್ನಪಟ್ಟಣದಲ್ಲಿ ಒಕ್ಕಲಿಗ ನಾಯಕರ ಪೈಪೋಟಿ- ಸಮಬಲದ ಸಂಘರ್ಷ ನಿರೀಕ್ಷೆ, ಇನ್‌ಸೈಡ್‌ ಸ್ಟೋರಿ

ಚನ್ನಪಟ್ಟಣ, ಏಪ್ರಿಲ್‌ 24: ರಾಮನಗರ ಜಿಲ್ಲೆಯ ಚನ್ನಪಟ್ಟಣವು ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರವಾಗಿದೆ. ಇದು ರಾಜ್ಯದ ಇಬ್ಬರು ಪ್ರಮುಖ ರಾಜಕಾರಣಿಗಳ ನಡುವಿನ ಪೈಪೋಟಿಯ ಕಣವಾಗಿಯೂ ಮಾರ್ಪಟ್ಟಿದೆ. ಕರ್ನಾಟಕದ ಎರಡು ಬಾರಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿ ನಾಯಕ, ಮಾಜಿ ಸಚಿವ ಸಿಪಿ ಯೋಗೇಶ್ವರ ಅವರನ್ನು ಈ ಬಾರಿ ಎದುರಿಸಲಿದ್ದಾರೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಸಿಪಿ ಯೋಗೇಶ್ವರ್‌ ಅವರನ್ನು ಸೋಲಿಸಿದ್ದರು.

ಯೋಗೇಶ್ವರ್ ಅವರು ಸತತ ಎರಡನೇ ಬಾರಿಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಚನ್ನಪಟ್ಟಣದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣಾ ಜೀವನ ಆರಂಭಿಸಿದ ಯೋಗೇಶ್ವರ್‌ ಅವರು ಇಲ್ಲಿಯವರೆಗೆ ತಾವು ಹುಟ್ಟಿದ ಕ್ಷೇತ್ರಕ್ಕೆ ಅಂಟಿಕೊಂಡಿದ್ದಾರೆ. ಕುಮಾರಸ್ವಾಮಿ ಸಹ ರಾಮನಗರ ಜಿಲ್ಲೆಗೆ ಅಂಟಿಕೊಂಡಿದ್ದಾರೆ. ಈ ಪೈಪೋಟಿಯ ಕಣದಲ್ಲಿ ಕಾಂಗ್ರೆಸ್‌ನ ಎಸ್ ಗಂಗಾಧರ್ ಅವರು ಪ್ರಮುಖ ಎದುರಾಳಿಯಾಗಿ ಹೊರಹೊಮ್ಮುವುದು ಕಷ್ಟಸಾಧ್ಯ.

Kumaraswamy vs Yogeshwar: A tough battleground for HDK in Channapatna Constituency

ಕುಮಾರಸ್ವಾಮಿಯ ಬದ್ಧವೈರಿ ಯೋಗೇಶ್ವರ್‌

ಕುಮಾರಸ್ವಾಮಿ ಮತ್ತು ಯೋಗೇಶ್ವರ ಇಬ್ಬರೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಸಮುದಾಯಕ್ಕೆ ಸೇರಿದ 1,06,000 ಮತಗಳು ಈ ಕ್ಷೇತ್ರದಲ್ಲಿವೆ. ಇತರ ದೊಡ್ಡ ಸಮುದಾಯಗಳೆಂದರೆ ದಲಿತರು, ಅವರ ಸಂಖ್ಯೆ 40,000 ರಷ್ಟಿದೆ. ಮುಸ್ಲಿಮರು ಸುಮಾರು 25,000 ಮತ್ತು ಲಿಂಗಾಯತರು ಸುಮಾರು 9,000 ರಷ್ಟಿದ್ದಾರೆ.

ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಕಳೆದ ಬಾರಿ ಯೋಗೇಶ್ವರ ಅವರನ್ನು ಸೋಲಿಸಿ 21,530 ಮತಗಳ ಅಂತರದಿಂದ ಗೆದ್ದಿದ್ದರು. 2013ರಲ್ಲಿ ಅನಿತಾ ಕುಮಾರಸ್ವಾಮಿ ಅವರು ಸಿಪಿ ಯೋಗೇಶ್ವರ್‌ ವಿರುದ್ಧ ನಿಂತು ಸೋಲು ಅನುಭವಿಸಿದ್ದರು. ಈ ಸೋಲಿನ ಸೇಡನ್ನು ಕುಮಾರಸ್ವಾಮಿ ತೀರಿಸಿಕೊಂಡಿದ್ದರು.

Kumaraswamy vs Yogeshwar: A tough battleground for HDK in Channapatna Constituency

ಕುಮಾರಸ್ವಾಮಿ ಯೋಗೇಶ್ವರ ವಿರುದ್ಧ ಒಂದು ಗೆದ್ದಿದ್ದಾರೆ. ಆದರೆ, ಯೋಗೇಶ್ವರ್‌ ಅವರು ಈ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದಿದ್ದಾರೆ. 1999 ರಲ್ಲಿ, ಯೋಗೇಶ್ವರ್‌ ಸ್ವತಂತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು.

2004ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಯೋಗೇಶ್ವರ್‌ ಸ್ಪರ್ಧಿಸಿದ್ದರು. ಆಗ ಅವರು 16,617 ಮತಗಳ ಅಂತರದಿಂದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಅಶ್ವತ್ ಅವರನ್ನು ಸೋಲಿಸಿದ್ದರು. 2008ರಲ್ಲಿ 4,930 ಮತಗಳ ಅಲ್ಪ ಅಂತರದಿಂದ ಗೆದ್ದಿದ್ದರು. 2013 ರಲ್ಲಿ, ಯೋಗೇಶ್ವರ ಅವರು ಪಕ್ಷವನ್ನು ಬದಲಾಯಿಸಿದರು. ಸಮಾಜವಾದಿ ಪಕ್ಷದ ಬ್ಯಾನರ್ ಅಡಿಯಲ್ಲಿ ಸ್ಪರ್ಧಿಸಿದರು, ಕುಮಾರಸ್ವಾಮಿ ಅವರ ಪತ್ನಿ ಅನಿತಾ ಅವರನ್ನು ಸೋಲಿಸಿದರು.

ಚುನಾವಣೆಯಲ್ಲಿ ಪ್ರಮುಖ ವಿಚಾರಗಳು

ಯೋಗೇಶ್ವರ ಅವರ ವಿರುದ್ಧದ ಮೆಗಾಸಿಟಿ ಹಗರಣದ ಆರೋಪವನ್ನು ಜೆಡಿಎಸ್ ಪಕ್ಷವು ಬಿಂಬಿಸಲು ಪ್ರಯತ್ನಿಸುತ್ತಿದೆ. 'ವಜ್ರಗಿರಿ ಟೌನ್‌ಶಿಪ್ ಪ್ರಾಜೆಕ್ಟ್' ಕುರಿತು ದಾಖಲಾಗಿರುವ ಪ್ರಕರಣದಲ್ಲಿ ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್‌ನ (ಎಂಬಿಡಿಎಲ್) ಆರೋಪಿಗಳಲ್ಲಿ ಯೋಗೇಶ್ವರ್‌ ಒಬ್ಬರಾಗಿದ್ದಾರೆ. ಯೋಗೇಶ್ವರ ಎಂಬಿಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಅವರ ಸಂಬಂಧಿಕರು ನಿರ್ದೇಶಕರಾಗಿದ್ದಾರೆ.

ಯೋಗೇಶ್ವರ ಮತ್ತು ಅವರ ಬೆಂಬಲಿಗರು ಕ್ಷೇತ್ರದ ಅಭಿವೃದ್ಧಿಯ ಕೊರತೆಯ ಬಗ್ಗೆ ಜನರಲ್ಲಿ ತಿಳುವಳಿಗೆ ಮೂಡಿಸುತ್ತಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡುತ್ತಿದ್ದಾರೆ. ಚನ್ನಪಟ್ಟಣವನ್ನು ಗೊಂಬೆಗಳ ಹಬ್ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಇದರ ಹೆಗ್ಗಳಿಕೆಯನ್ನು ತೆಗೆದುಕೊಳ್ಳಲು ಬಿಜೆಪಿ ನೋಡುತ್ತಿದೆ. ಯೋಗೇಶ್ವರ್‌ ತಮ್ಮ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣವು ತೀವ್ರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+