ಬೇರೆಯವರ ಕೆಲಸಕ್ಕೆ ಬಂದು ಟೇಪ್ ಕಟ್ ಮಾಡುವುದು ಪೌರುಷವಲ್ಲ; ಡಿ.ಕೆ.ಸುರೇಶ್
ರಾಮನಗರ, ನವೆಂಬರ್ 27: ಬೇರೆಯವರ ಕೆಲಸಗಳಿಗೆ ಬಂದು ಟೇಪು ಕಟ್ ಮಾಡುವುದು ಪೌರುಷವಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ಗೆ ಸಂಸದ ಡಿ.ಕೆ.ಸುರೇಶ್ ಪರೋಕ್ಷವಾಗಿ ಟಾಂಗ್ ನೀಡಿದರು.
ಮಾಗಡಿ ತಾಲೂಕಿನ ಚಿಕ್ಕತೊರೆಪಾಳ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಗುರುವಾರವಷ್ಟೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಅವರ ಮಾಗಡಿ ಪ್ರವಾಸದಲ್ಲಿ ಸುಮಾರು 16 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೇರವೇರಿಸಿದ್ದರು. ಡಿಸಿಎಂ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಗೈರಾಗಿದ್ದರು.
ರಾಮನಗರ: ಕುತೂಹಲ ಕೆರಳಿಸಿದ್ದ ಬಿಡದಿ ಪುರಸಭೆ ಜೆಡಿಎಸ್ ಪಾಲು
"ಅಶ್ವತ್ಥ ನಾರಾಯಣ್ ಪ್ರವಾಸದ ಕಾರ್ಯಕ್ರಮದ ಹಿಂದಿನ ರಾತ್ರಿ ಆಹ್ವಾನ ಪತ್ರಿಕೆ ನೀಡುತ್ತಾರೆ. ಕೆಲಸ ಕಾರ್ಯವಿಲ್ಲದೆ ನಾನು ಕುಳಿತಿಲ್ಲ, ಯಾರೋ ಮಾಡಿದ ಕೆಲಸಕ್ಕೆ ಬಂದು ಟೇಪು ಕತ್ತರಿಸುವುದು ಪೌರುಷವಲ್ಲ, ಸಮಯ ಬಂದಾಗ ಇದಕ್ಕೆಲ್ಲ ಉತ್ತರ ನೀಡುತ್ತೇನೆ ಎಂದು ಸಂಸದ ಡಿ.ಕೆ.ಸುರೇಶ್ ಹರಿಹಾಯ್ದರು.
"ಮರಾಠಿ ಪ್ರಾಧಿಕಾರ ರಚನೆ ಖಂಡಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್ ಗೆ ನನ್ನ ಸಂಪೂರ್ಣ ಬೆಂಬಲವಿದೆ. ಸರ್ಕಾರ ಕನ್ನಡಪರ ಸಂಘಟನೆಗಳ ಕ್ಷಮೆ ಕೇಳಬೇಕು. ಜಾತಿಗೊಂದು ಅಭಿವೃದ್ಧಿ ನಿಗಮ ಬೇಕಾಗಿಲ್ಲ" ಎಂದು ಸರ್ಕಾರದ ವಿರುದ್ಧ ಸುರೇಶ್ ಅಸಮಾಧಾನ ಹೊರಹಾಕಿದರು.