ರಾಮನಗರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ; ಮಹಿಳೆಯರಿಗೆ ಒಲಿದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಗಾದಿ
ರಾಮನಗರ, ನವೆಂಬರ್ 9: ರಾಮನಗರ ನಗರಸಭೆಯ ಆಡಳಿತ ಚುಕ್ಕಾಣಿ ನಿರೀಕ್ಷೆಯಂತೆ ಕಾಂಗ್ರೆಸ್ ಪಾಲಾಗಿದೆ. ಮಂಗಳವಾರ ಬೆಳಿಗ್ಗೆ ನಡೆದ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳು ಮಹಿಳಾ ಮಣಿಗಳಿಗೆ ಒಲಿದಿದೆ.
ರಾಮನಗರ ನಗರಸಭೆಯ ಸದಸ್ಯರಾಗಿ ಚುನಾಯಿತರಾಗಿದ್ದ 7 ತಿಂಗಳ ನಂತರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ 30ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಪಾರ್ವತಮ್ಮ ಅಧ್ಯಕ್ಷರಾಗಿ, 1ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಜಯಲಕ್ಷ್ಮಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚನ್ನಪಟ್ಟಣ ನಗರಸಭೆ ಜೆಡಿಎಸ್ ತೆಕ್ಕೆಗೆ; ಫಲಿಸಲಿಲ್ಲ ಸಿಪಿವೈ ಯೋಜನೆ
ಒಟ್ಟು 31 ಸದಸ್ಯ ಬಲದ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್-19, ಜೆಡಿಎಸ್- 11, ಪಕ್ಷೇತರ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಇಂದಿನ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಅಭ್ಯರ್ಥಿ ಪರವಾಗಿ 21 ಮತ ಹಾಗೂ ವಿರುದ್ಧವಾಗಿ ಅಧ್ಯಕ್ಷರಿಗೆ 12 ಮತ ಹಾಗೂ ಉಪಾಧ್ಯಕ್ಷರಿಗೆ 11 ಮತಗಳು ಚಲಾವಣೆಗೊಂಡವು.
ನಗರಸಭೆಯ
ಅಧ್ಯಕ್ಷ
ಮತ್ತು
ಉಪಾಧ್ಯಕ್ಷ
ಚುನಾವಣೆಯಲ್ಲಿ
ಸಂಸದ
ಡಿ.ಕೆ.
ಸುರೇಶ್
ಹಾಗೂ
ಕ್ಷೇತ್ರದ
ಶಾಸಕಿ
ಅನಿತಾ
ಕುಮಾರಸ್ವಾಮಿ
ಪಾಲ್ಗೊಂಡು
ತಮ್ಮ
ತಮ್ಮ
ಪಕ್ಷದ
ಅಭ್ಯರ್ಥಿಗಳ
ಪರವಾಗಿ
ಮತ
ಚಲಾಯಿಸಿಸಿದರು.
ಇನ್ನು
ಜೆಡಿಎಸ್
ಭದ್ರಕೋಟೆಯಲ್ಲಿ
ನಗರಸಭೆ
ಅಧ್ಯಕ್ಷ
ಮತ್ತು
ಉಪಾಧ್ಯಕ್ಷ
ಚುನಾವಣೆಯಲ್ಲಿ
ಕಾಂಗ್ರೆಸ್
ಜಯಭೇರಿ
ಸಾಧಿಸಿದ
ಹಿನ್ನೆಲೆಯಲ್ಲಿ
ಕಾಂಗ್ರೆಸ್
ಕಾರ್ಯಕರ್ತರು
ಸಿಹಿ
ಹಂಚಿ,
ಪಟಾಕಿ
ಸಿಡಿಸಿ
ಸಂತಸ
ವ್ಯಕ್ತಪಡಿಸಿದರು.
ಕುತೂಹಲ
ಮೂಡಿಸಿದ್ದ
ಬಣ
ರಾಜಕೀಯ
ನಗರಸಭೆ
ಅಧ್ಯಕ್ಷ
ಸ್ಥಾನ
ಪಡೆಯಲು
ಕಾಂಗ್ರೆಸ್
ಸದಸ್ಯರಲ್ಲೇ
ಎರಡು
ಬಣಗಳ
ನಡುವೆ
ಪೈಪೋಟಿ
ನಡೆದಿತ್ತು.
ಅಧ್ಯಕ್ಷರಾಗಲು
ನಾನಾ
ಕಸರತ್ತು
ನಡೆದ
ಹಿನ್ನಲೆ,
ಅಹಿತಕರ
ಘಟನೆಗಳು
ನಡೆಯದಂತೆ
ನಗರಸಭೆಯ
ಸುತ್ತಮುತ್ತ
ವ್ಯಾಪಕ
ಪೊಲೀಸ್
ಭದ್ರತೆ
ಏರ್ಪಡಿಸಲಾಗಿತ್ತು.
ಸರಳ ಬಹುಮತದೊಂದಿಗೆ ಅನಾಯಾಸವಾಗಿ ಅಧಿಕಾರ ಹಿಡಿಯಬಹುದಾಗಿದ್ದರೂ, ಎರಡು ಬಣಗಳಾಗಿ ಬಡಿದಾಡಿಕೊಳ್ಳುವಂತಹ ದುಸ್ಥಿತಿಯನ್ನು ಕೈ ಪಾಳೆಯ ನಿರ್ಮಿಸಿಕೊಂಡಿತ್ತು. ಎರಡೂ ಬಣದ ಬಿಗ್ ಫೈಟ್ ನಡುವೆ ಸಂಸದ ಡಿ.ಕೆ. ಸುರೇಶ್ ತಮ್ಮ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕೂರಿಸುವ ಪ್ರಯತ್ನದಲ್ಲಿ ವಿಫಲರಾದರು.
ಇನ್ನು ಮಾಜಿ ಶಾಸಕ , ಎಂಎಲ್ಸಿ ಲಿಂಗಣ್ಣ ಬಣ ಅಧ್ಯಕ್ಷ ಗಾದಿಯಲ್ಲಿ ತಮ್ಮದೇ ಅಭ್ಯರ್ಥಿಯನ್ನು ಕೂರಿಸುವ ಪಣ ತೊಟ್ಟಿದ್ದರು. ಚುನಾವಣೆಯಲ್ಲಿ ಲಿಂಗಪ್ಪ ಬಣ ಜಯಭೇರಿ ಬಾರಿಸಿದರು. ಸಂಸದ ಡಿ.ಕೆ. ಸುರೇಶ್, ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭ ಕೋರದೆ ನಿರ್ಗಮಿಸಿದರು.
ಸಂಸದ
ಡಿ.ಕೆ.ಸುರೇಶ್
ಪ್ರತಿಕ್ರಿಯೆ
ಈ
ವೇಳೆ
ಮಾತನಾಡಿದ
ಬೆಂಗಳೂರು
ಗ್ರಾಮಾಂತರ
ಕ್ಷೇತ್ರದ
ಸಂಸದ
ಡಿ.ಕೆ.
ಸುರೇಶ್,
ನಗರಸಭೆ
ಸದಸ್ಯರಾಗಿ
ಆಯ್ಕೆಯಾಗಿರುವವರಲ್ಲಿ
ಅಧ್ಯಕ್ಷರಾಗಬೇಕೆಂಬ
ಆಸೆ
ಎಲ್ಲರಿಗೂ
ಇರುತ್ತದೆ.
ಈ
ಹಿನ್ನೆಲೆಯಲ್ಲಿ
ಪಕ್ಷದಲ್ಲಿ
ಗೊಂದಲ
ಏರ್ಪಟ್ಟಿದ್ದು
ನಿಜ.
ಅಂತಿಮವಾಗಿ
ಪಕ್ಷದ
ತೀರ್ಮಾನಕ್ಕೆ
ಎಲ್ಲರೂ
ಬದ್ಧರಾಗಿದ್ದರಿಂದ,
ತಮ್ಮ
ಪಕ್ಷದ
ಅಭ್ಯರ್ಥಿ
ಅಧ್ಯಕ್ಷರಾಗಿ
ಆಯ್ಕೆಯಾಗಿದ್ದಾರೆ
ಎಂದರು.
ಚನ್ನಪಟ್ಟಣ
ನಗರಸಭೆ
ಜೆಡಿಎಸ್
ತೆಕ್ಕೆಗೆ
ರಾಮನಗರ
ಜಿಲ್ಲೆಯ
ಚನ್ನಪಟ್ಟಣ
ನಗರಸಭೆಯ
ಅಧ್ಯಕ್ಷ
ಮತ್ತು
ಉಪಾಧ್ಯಕ್ಷ
ಹುದ್ದೆ
ಜೆಡಿಎಸ್
ಪಕ್ಷದ
ಪಾಲಾಗಿದೆ.
ಬಿಜೆಪಿ
ಹಾಗೂ
ಕಾಂಗ್ರೆಸ್
ಸದಸ್ಯರು
ಚುನಾವಣೆಯಲ್ಲಿ
ಸ್ಪರ್ಧೆ
ಮಾಡದ
ಹಿನ್ನೆಲೆಯಲ್ಲಿ
ಅವಿರೋಧವಾಗಿ
ನಗರಸಭೆಯ
ಅಧ್ಯಕ್ಷ,
ಉಪಾಧ್ಯಕ್ಷ
ಸ್ಥಾನ
ಜೆಡಿಎಸ್ಗೆ
ಒಲಿದಿದೆ.
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚನ್ನಪಟ್ಟಣದ 26ನೇ ವಾರ್ಡ್ನ ಜೆಡಿಎಸ್ ಸದಸ್ಯ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾದರು ಹಾಗೂ ಸಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಅಲ್ಪಸಂಖ್ಯಾತ ಸಮುದಾಯದ ಹಸೀನಾ ಫರೀನ್ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಸೋಮವಾರ ಬೆಳಿಗ್ಗೆ 10ಕ್ಕೆ ಚನ್ನಪಟ್ಟಣ ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆದಿತ್ತು. ಅಧ್ಯಕ್ಷ ಸ್ಥಾನಕ್ಕೆ ಪ್ರಶಾಂತ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಸೀನಾ ಫರೀನ್ ನಾಮಪತ್ರ ಸಲ್ಲಿಸಿದರು. ಇಬ್ಬರನ್ನು ಬಿಟ್ಟು ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಚುನಾವಾಣಾ ಆಧಿಕಾರಿಯಾಗಿ ನೇಮಕವಾಗಿದ್ದ ಎಸಿ ಮಂಜುನಾಥ್, ಅಂತಿಮವಾಗಿ ಪ್ರಶಾಂತ್ ಮತ್ತು ಹಸೀನಾ ಫರೀನ್ ಅವಿರೋಧವಾಗಿ ಆಯ್ಕೆಯಾಗಿರುವ ಬಗ್ಗೆ ಘೋಷಣೆ ಮಾಡಿದ್ದರು.
ಮೀಸಲಾತಿ ತೊಡಿಕಿನಿಂದ 2 ವರ್ಷಗಳ ಬಳಿಕ ಕಳೆದ ಏಪ್ರಿಲ್ನಲ್ಲಿ ಚುನಾವಣೆ ನಡೆದು ಜೆಡಿಎಸ್ ಬಹುಮತ ಗಳಿಸಿತ್ತು. ಒಟ್ಟು 31 ಸದಸ್ಯರಿರುವ ನಗರಸಭೆಯಲ್ಲಿ, ಜೆಡಿಎಸ್ 16, ಬಿಜೆಪಿ 7 ಕಾಂಗ್ರೆಸ್ 7 ಹಾಗೂ ಒಬ್ಬ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.