ಕಾಮಗಾರಿ ಮುಗಿದು ಕೆಲವೇ ದಿನದಲ್ಲಿ ಹಾಳಾಯ್ತು ರಸ್ತೆ: ಯಪ್ಪಾ ಬಿದ್ನೋ.... ಎತ್ರೋ.. ಎನ್ನುತ್ತಿದ್ದಾರೆ ರಾಯಚೂರು ಜನ..

ರಾಯಚೂರು ಜನವರಿ 8: ರಾಯಚೂರು ಅಂದರೆ ಸಾಕು ಬಿಸಿಲು, ಧೂಳು, ಗುಂಡಿ ಬಿದ್ದ ರಸ್ತೆಗಳು ನೆನಪಿಗೆ ಬರುವಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಿರ್ಮಾಣಗೊಂಡ ರಸ್ತೆಯೊಂದು ಕೆಲವೇ ದಿನಗಳಲ್ಲಿ ಎಥಾ ಸ್ಥಿತಿಗೆ ತಲುಪಿದ ಘಟನೆ ನಡೆದಿದೆ. ಇದರಿಂದ ಜನ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹೌದು... ಕವಿತಾಳ ಸಮೀಪದ ಮಲ್ಲದಗುಡ್ಡ ಗ್ರಾಮದಿಂದ ತೋರಣದಿನ್ನಿ ಸಂಪರ್ಕಿಸುವ ಮುಖ್ಯ ರಸ್ತೆಯ ದುರಸ್ತಿ ಕಾಮಗಾರಿ ಕಳಪೆಯಾಗಿದ್ದು ಕಾಮಗಾರಿ ಮುಗಿದ ಕೆಲವೇ ದಿನಗಳಲ್ಲಿ ರಸ್ತೆ ಹಾಳಾಗಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು, ಗುತ್ತಿಗೆದಾರರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Raichurs Kavitala road problem: Peoples outrage against the authorities

ಮಾನ್ವಿ ತಾಲ್ಲೂಕಿನ ಬ್ಯಾಗವಾಟ್‌ನಿಂದ ಮಸ್ಕಿ ತಾಲ್ಲೂಕಿನ ತೋರಣದಿನ್ನಿ ಸಂಪರ್ಕಿಸುವ 16 ಕಿ.ಮೀ. ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಲೊಕೋಪಯೋಗಿ ಇಲಾಖೆ ವತಿಯಿಂದ ಎರಡು ಪ್ಯಾಕೇಜ್‌ಗಳಲ್ಲಿ ಇಬ್ಬರು ಗುತ್ತಿಗೆದಾರರಿಗೆ ವಹಿಸಲಾಗಿದೆ.

ಮಲ್ಲದಗುಡ್ಡದಿಂದ ತೋರಣದಿನ್ನಿ ವರೆಗೆ 8 ಕಿ.ಮೀ ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಅಂದಾಜು ₹8 ಕೋಟಿ ವೆಚ್ಚದಲ್ಲಿಕೈಗೊಳ್ಳಲಾಗಿದೆ. ಕಾಮಗಾರಿ ಮುಗಿದ ನಾಲ್ಕು ತಿಂಗಳಲ್ಲೇ ರಸ್ತೆ ಕುಸಿದು ಡಾಂಬರು ಮೇಲ್ಪದರು ಕಿತ್ತು ಬರುತ್ತಿದ್ದು ವಾಹನ ಸವಾರರು ತೊಂದರೆಗೆ ಸಿಲುಕಿದ್ದಾರೆ.

'ಈ ಭಾಗ ಸಂಪೂರ್ಣ ನೀರಾವರಿ ವ್ಯವಸ್ಥೆ ಹೊಂದಿದ್ದು ರೈತರು ಜಮೀನುಗಳಲ್ಲಿ ಭತ್ತ ಬೆಳೆಯುತ್ತಾರೆ. ಭತ್ತ ತುಂಬಿದ ಬೃಹತ್‌ ಲಾರಿಗಳು ಓಡಾಡುತ್ತವೆ, ಸ್ವಲ್ಪ ಆಯ ತಪ್ಪಿದರೂ ಅನಾಹುತ ಸಂಭವಿಸುವ ರೀತಿಯಲ್ಲಿ ಬಹುತೇಕ ಕಡೆ ರಸ್ತೆ ಕುಸಿದಿದೆ, ಕಳಪೆ ಗುಣಮಟ್ಟದ ಮುರಂ, ಹಾಗೂ ಇಲಾಖೆ ನಿಯಮಗಳಂತೆ ಕಾಮಗಾರಿ ಕೈಗೊಳ್ಳದಿರುವುದು ಈ ದುಸ್ಥಿತಿಗೆ ಕಾರಣ' ಎಂದು ಮಲ್ಲದಗುಡ್ಡ ಗ್ರಾಮದ ಮಲ್ಲಯ್ಯ ಗೋರ್ಕಲ್‌ ಆರೋಪಿಸಿದರು.

'ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿಲ್ಲ, ಹೀಗಾಗಿ ಗುತ್ತಿಗೆದಾರರು ತಮಗೆ ತೋಚಿದಂತೆ ಕೆಲಸ ಮಾಡಿದ್ದಾರೆ. ಡಾಂಬರೀಕರಣ ಮುಗಿದ ಕೆಲ ದಿನಗಳಲ್ಲಿಯೇ ಕಿತ್ತುಹೋಗಿ ಕಂಕರ್‌ ಮೇಲೆ ಬಂದಿವೆ. ಬರೀ ಕೈಯಿಂದಲೂ ಡಾಂಬರ್ ಕಿತ್ತು ಬರುತ್ತಿದೆ, ಈ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು' ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಪಾಟೀಲ ಒತ್ತಾಯಿಸಿದ್ದಾರೆ.

'ಗ್ರಾಮೀಣ ರಸ್ತೆ ದುರಸ್ತಿಗೆ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿದರೂ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ ಮತ್ತು ಗುತ್ತಿಗೆದಾರರ ಕಳ್ಳಾಟದಿಂದ ಹದಗೆಟ್ಟ ರಸ್ತೆಯಲ್ಲಿ ಓಡಾಡುವಂತಾಗಿದೆ' ಎಂದು ಮರಿಸ್ವಾಮಿ ಮತ್ತು ಡೊಳ್ಳು ರಂಗಯ್ಯ ನಾಯಕ ಆರೋಪಿಸಿದರು.

ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ದುರಸ್ತಿಗೆ ಶೀಘ್ರ ಮುಂದಾಗಬೇಕು ಎಂದು ಮುಖಂಡ ಹನುಮಂತ ಡೊಣಮರಡಿ ಒತ್ತಾಯಿಸಿದರು. ಈ ಬಗ್ಗೆ ಮಾತನಾಡಿದ ಲೋಕೋಪಯೋಗಿ ಇಲಾಖೆ ಮಾನ್ವಿ ಎಇಇ ರಾಜಕುಮಾರ ತೊರವಿ, 'ರಸ್ತೆ ದುರಸ್ತಿಗೆ ಗುತ್ತಿಗೆದಾರರಿಗೆ ಸೂಚಿಸಲಾಗುವುದು. ಕಾಳಜಿ ವಹಿಸದಿದ್ದರೆ ಇಲಾಖೆ ನಿಯಮದಂತೆ ಕ್ರಮ ಜರುಗಿಸುತ್ತೇವೆ' ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+