ಕೃಷಿ ಮೇಳದಲ್ಲಿ ನೋಡುಗರ ಗಮನ ಸೆಳೆದ ₹9 ಲಕ್ಷದ ಕೋಣ: ಏನಿದರ ವಿಶೇಷತೆ..?
ರಾಯಚೂರು ಜನವರಿ 16: ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನಕ್ಕೆ ತಂದಿರುವ ಮುರ್ರಾ ತಳಿ ಕೋಣವು ರೈತರ ಗಮನ ಸೆಳೆದಿದೆ.
ಅಜಾನುಬಾಹು ಕೋಣದ ದರ ಕೇಳಿ ಎಲ್ಲರೂ ಬಾಯಿ ತೆರೆದು ನಿಲ್ಲುವಂತಾಗಿದೆ. ಮೂರು ವರ್ಷದ ಈ ಕೋಣದ ದರ ಬರೋಬ್ಬರಿ ₹9 ಲಕ್ಷವಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರೈತರು ಈ ಕೋಣ ನೋಡಿ ಖುಷಿ ಪಡುವುದರ ಜೊತೆ ಅಚ್ಚರಿ ಪಡುತ್ತಿದ್ದಾರೆ.
ಕೃಷಿ ಮೇಳದಲ್ಲಿ ಈ ಕೋಣದ ಬಗ್ಗೆ ಮಾಹಿತಿ ಪಡೆದು, ಅದರೊಂದಿಗೆ ಛಾಯಾಚಿತ್ರ ಸೆರೆಹಿಡಿಯುವುದು ಸಾಮಾನ್ಯವಾಗಿದೆ. ಹೆಚ್ಚು ಹಾಲು ನೀಡುವ ಸಾಮರ್ಥ್ಯ ಹೊಂದಿರುವ ಮುರ್ರಾಾತಳಿ ಎಮ್ಮೆ ಮತ್ತು ಹೈನುಗಾರಿಕೆಗೆ ನೆರವಾಗುವ ಮುರ್ರಾ ಕೋಣವನ್ನು ರೈತರಿಗೆ ಪರಿಚಯಿಸುವುದಕ್ಕಾಗಿ ಶ್ರೀನಿವಾಸರೆಡ್ಡಿ ಅವರನ್ನು ವಿಶ್ವವಿದ್ಯಾಲಯದ ಅಧಿಕಾರಿಗಳು ಕೃಷಿ ಮೇಳೆ ಕರೆಸಿದ್ದಾರೆ.

ಬಳ್ಳಾರಿ ಜಿಲ್ಲೆ ಸಿರಗುಪ್ಪದ ರೈತ ಶ್ರೀನಿವಾಸರೆಡ್ಡಿ ಅವರಿಗೆ ಈ ವರ್ಷ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ನೀಡಿದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೈನುಗಾರಿಕೆಯಲ್ಲಿ ಸಾಧನೆ ಮಾಡುತ್ತಿರುವ ಅವರು ಮುರ್ರಾ ತಳಿ ಎಮ್ಮೆಗಳನ್ನು ಮಾತ್ರ ಸಾಕಾಣಿಕೆ ಮಾಡಿದ್ದು, ಪ್ರತಿದಿನ 400 ಲೀಟರ್ ಹಾಲು ಸಂಗ್ರಹಿಸುತ್ತಿದ್ದಾರೆ. ಅದರಲ್ಲಿ 200 ಲೀಟರ್ ಮಾರಾಟ ಮಾಡಿ, ಇನ್ನುಳಿದ ಹಾಲುಗಳನ್ನು ಕರುಗಳು ಕುಡಿಯುವುದಕ್ಕೆ ಬಿಡುತ್ತಿದ್ದಾರೆ.
'ಸಾಮಾನ್ಯ ದನಕರುಗಳಿಗೆ ನೀಡುವ ಮೇವನ್ನೇ ಈ ಕೋಣಕ್ಕೂ ನೀಡುತ್ತಿದ್ದೇವೆ. ಆದರೆ ವರ್ಷದಲ್ಲಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಮಾತ್ರ ಪ್ರತಿದಿನ 10 ಲೀಟರ್ ಹಾಲು ಮತ್ತು ಹಸಿಮೊಟ್ಟೆಗಳನ್ನು ಸೇವಿಸುವುದಕ್ಕೆ ಕೋಣಕ್ಕೆ ನೀಡುತ್ತೇವೆ' ಎನ್ನುವುದು ಶ್ರೀನಿವಾಸರೆಡ್ಡಿ ಅವರ ವಿವರಣೆ.
'ಮೂರು ತಿಂಗಳು ಮುರ್ರಾ ಎಮ್ಮೆಗಳಿಗೆ ಗರ್ಭಧಾರಣೆ ಮಾಡಿಸುವ ಅವಧಿ. ಹೀಗಾಗಿ ಗುಣಮಟ್ಟದ ವೀರ್ಯ ಉತ್ಪಾದನೆಯಾಗುವ ಉದ್ದೇಶದಿಂದ ಹಾಲು, ಮೊಟ್ಟೆ ಕೊಡುತ್ತಿದ್ದೇವೆ. ಈ ವರ್ಷದಿಂದ ಗರ್ಭಧಾರಣೆ ಮಾಡುವ ಶಕ್ತಿ ಕೋಣಕ್ಕೆ ಬಂದಿದೆ. ಮುಂದಿನ 10 ವರ್ಷಗಳವರೆಗೂ ಇದಕ್ಕೆ ಗರ್ಭಧಾರಣೆ ಮಾಡಿಸುವ ಶಕ್ತಿ ಇರುತ್ತದೆ. ಸುಮಾರು 200 ಕ್ಕೂ ಹೆಚ್ಚು ಎಮ್ಮೆಗಳಿಗೆ ಗರ್ಭ ಧಾರಣೆ ಮಾಡಿಸಬಹುದು' ಎಂದು ಶ್ರೀನಿವಾಸರೆಡ್ಡಿ ತಿಳಿಸಿದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications