ಸಾವಿರಾರು ಹಾಡು ಹಾಡಿರುವ ಈ ಜಾನಪದ ಕಲಾವಿದೆಗೆ ಬೇಕಿದೆ ಸರ್ಕಾರದ ಪ್ರೋತ್ಸಾಹ
ರಾಯಚೂರು, ಆಗಸ್ಟ್ 28: ಜನಪದ ತತ್ವಪದ, ಸರ್ವಜ್ಞನ ವಚನಗಳು ಮತ್ತು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಮತ್ತು ಕಥೆ ಹೇಳುವ ಪಟ್ಟಣದ ನಿವಾಸಿ ಅಲೆಮಾರಿ ಕುಟುಂಬದ ಅಯ್ಯಮ್ಮ ಯಡವಲ್ ಎಲೆಮರೆ ಕಾಯಿಯಂತೆ ಉಳಿದಿದ್ದಾರೆ.
64 ವರ್ಷದ ಅಯ್ಯಮ್ಮ ಕೈಯಲ್ಲಿ ತಂಬೂರಿ ಹಿಡಿದು ಹಾಡಲು ಕುಳಿತರೆ ಸಮಯ ಕಳೆದದ್ದು ತಿಳಿಯುವುದಿಲ್ಲ. ಕಥೆ ಹೇಳುವುದನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕು ಎನ್ನಿಸುತ್ತದೆ. ಹತ್ತು ವರ್ಷದ ಬಾಲಕಿಯಾಗಿದ್ದಾಗಲೇ ಹಾಡುವ ಗೀಳು ಹಚ್ಚಿಕೊಂಡ ಅಯ್ಯಮ್ಮ ಇದುವರೆಗೆ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ವಿಶೇಷವೆಂದರೆ ಆಯಾ ಸಂದರ್ಭ, ವಿಷಯಕ್ಕೆ ತಕ್ಕಂತೆ ಹಾಡುಗಳನ್ನು ರಚಿಸಿ ಇಂಪಾದ ಸ್ವರದಲ್ಲಿ ಹಾಡುವುದು ಅಯ್ಯಮ್ಮ ಅವರ ಹೆಚ್ಚುಗಾರಿಕೆಯಾಗಿದೆ.

ಎದುರಿಗೆ ಕುಳಿತವರ ಹೆಸರು ಹೇಳಿದರೂ ಸಾಕು ಅವರ ಹೆಸರಿನ ಮೇಲೆಯೇ ಒಂದು ಗೀತೆ ರಚಿಸಿ ಹಾಡಿ ಬಿಡುತ್ತಾರೆ. ಮದುವೆ , ಮುಂಜಿ , ಜವಳ , ಸೀಮಂತ ಮತ್ತಿತರ ಶುಭ ಸಮಾರಂಭಗಳು ಸೇರಿದಂತೆ ದೇವಸ್ಥಾನಗಳಲ್ಲಿ ನಡೆಯುವ ವಿಶೇಷ ಪೂಜಾ ಸಂದರ್ಭಗಳಲ್ಲಿ ಅಯ್ಯಮ್ಮ ಅವರಿಂದ ಹಾಡಿಸಲಾಗುತ್ತದೆ.
ಬಾಲನಾಗಮ್ಮ , ಕಾಂಭೋಜ ರಾಜ, ಗಂಡುಗಲಿ ಕುಮಾರರಾಮ , ಭೂಲಕ್ಷ್ಮಿ , ಸೌರಮ್ಮ , ಚಿತ್ರಶೇಖರ , ನಂದಸೇನ ರಾಜ , ಭೀಮಸೇನ ರಾಜ ಹೀಗೆ ಹತ್ತು ಹಲವು ಬುರ್ರಕಥೆ ಅಯ್ಯಮ್ಮ ಅವರ ಬಾಯಿಯಲ್ಲಿ ಲೀಲಾಜಾಲವಾಗಿ ಬರುತ್ತವೆ. ಕಥೆಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿ ಹೇಳುತ್ತಾರೆ. ಬೀಸುವ ಕಲ್ಲಿನ ಹಾಡು , ನಾಗರ ಪಂಚಮಿ ಹಾಡು, ಲಾಲಿ ಹಾಡುಗಳನ್ನು ಹಾಡುತ್ತಾರೆ.

ತ್ತೆ ಚಂದಮ್ಮ ಅವರಿಂದ ಹಾಡುಗಾರಿಕೆ ಮತ್ತು ಬುರ್ರಕಥೆ ಹೇಳುವುದನ್ನು ಕಲಿತಿರುವುದಾಗಿ ಹೇಳುವ ಅಯ್ಯಮ್ಮ , ನನ್ನ ಕಂಠಸಿರಿ ಚೆನ್ನಾಗಿದೆ ಎಂದು ಅತ್ತೆ ಚಂದಮ್ಮ ಬಾಲ್ಯದಲ್ಲಿಯೇ ಹಾಡುವುದನ್ನು ಕಲಿಸಿದರು ಎನ್ನುತ್ತಾರೆ.
ಮೂಲತಃ ತೆಲುಗಿನ ಜನಪದವಾದ ಬುರ್ರಕಥೆಯನ್ನು ಹೇಳುವ ಕಲಾವಿದರು ಆಂಧ್ರದ ಗಡಿ ಜಿಲ್ಲೆಗಳಲ್ಲಿ ಇದ್ದಾರೆ. ಅಲೆಮಾರಿ ಬುಡಕಟ್ಟು ಕುಟುಂಬಗಳು ಬುರ್ರಕಥೆ ಹೇಳುವುದನ್ನು ಕಾಣಬಹುದು. ಬುರ್ರಾ ಎಂದರೆ ತಂಬೂರಿ ಎಂದು ಅರ್ಥ, ತಂಬೂರಿ ವಾದ್ಯದೊಂದಿಗೆ ಮಹಾಪುರುಷರ ಕಥನಗಳನ್ನು ಜನಪದ ಶೈಲಿಯಲ್ಲಿ ಹಾಡುವುದು ಬುರ್ರಾ. ಕರ್ನಾಟಕದಲ್ಲಿ ಕಂಪಿಲರಾಯನ ಮಗ ಕುಮ್ಮಟ ದುರ್ಗದ ಕುಮಾರರಾಮನ ಕಥೆ ಬುರ್ರಕಥೆಗೆ ಉತ್ತಮ ಉದಾಹರಣೆ ಎಂದು ಶಿಕ್ಷಕ ರವಿಚಂದ್ರ ತಿಳಿಸಿದ್ದಾರೆ.
ಇಳಿವ ಯಸ್ಸಿನಲ್ಲೂ ಹಾಡುವುದನ್ನು ನಿಲ್ಲಿಸದ ಅಯ್ಯಮ್ಮ, ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಹಾಡಿ ಜನರ ಮೆಚ್ಚುಗೆ ಗಳಿಸಿದ್ದೇನೆ. ಸರ್ಕಾರ ನನ್ನ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎನ್ನುವ ಆಸೆ ಇದೆ ಎಂದು ಹೇಳಿದ್ದಾರೆ. ಅಯ್ಯಮ್ಮ ಉತ್ತಮ ಜನಪದ ಗಾಯಕಿ . ಅವರ ಧ್ವನಿ ಚೆನ್ನಾಗಿದೆ. ಸಂಘ ಸಂಸ್ಥೆಗಳು ಮತ್ತು ಸರ್ಕಾರ ಇಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಶಿಕ್ಷಕ ರವಿಚಂದ್ರ ಮಲ್ಕಾಪುರ ಒತ್ತಾಯಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications