'ವಸತಿ ಸಚಿವ ಲಿಪ್ ಸ್ಟಿಕ್ ಹಾಕಿಸಿಕೊಂಡು ಜಾಹೀರಾತು ನೀಡ್ತಾರೆ'
Recommended Video
ಮಾನ್ವಿ (ರಾಯಚೂರು ಜಿಲ್ಲೆ), ಮಾರ್ಚ್ 12 : ಇಲ್ಲಿ ನಡೆದ ಜೆಡಿಎಸ್ ವಿಕಾಸ ಪರ್ವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಜನ್ಮ ಜಾಲಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. ಅವರು ಏನೆಂದರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
* "ಶಾಸಕ ಅಶೋಕ್ ಖೇಣಿ ಕಾಂಗ್ರೆಸ್ ಸೇರ್ಪಡೆ ಆಗಿರುವುದನ್ನು ಗಮನಿಸಿದರೆ ನೈಸ್ ಹಗರಣ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿರುವಂತಿದೆ".
ಸಿದ್ದರಾಮಯ್ಯ ಅವರಿಗೆ ಡೀಲ್ ಮಾಡೋದು ಕರಗತ: ಎಚ್ ಡಿಕೆ ತಿರುಗೇಟು
* "ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಪಕ್ಷಕ್ಕೆ ಖೇಣಿ ಫಂಡಿಂಗ್ ಮಾಡುವಲ್ಲಿ ಅನುಮಾನವಿಲ್ಲ. ಕಾಂಗ್ರೆಸ್ ಮೊದಲಿಂದಲೂ ಭ್ರಷ್ಟರಿಗೆ ಆಶ್ರಯ ನೀಡುತ್ತಾ ಬಂದಿದೆ".
* "ಹಲವು ಯೋಜನೆ ಹೆಸರಲ್ಲಿ ಒಂದು ಲಕ್ಷದ ನಾಲ್ಕುನೂರು ಕೋಟಿ ರೂಪಾಯಿ ಸಾಲವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಡಿದ್ದಾರೆ. ಇದನ್ನು ರಾಜ್ಯದ ಜನರು ತೀರಿಸಬೇಕು. ಸಿದ್ಧರಾಮಯ್ಯ ತೀರಿಸೋದಿಲ್ಲ".
* "ಸಿದ್ದರಾಮಯ್ಯ ಹಾಗೂ ಎಂ.ಬಿ. ಪಾಟೀಲ್ ಪತ್ರಿಕೆಗಳಿಗೆ ಏಳು ಪುಟಗಳ ಜಾಹೀರಾತು ನೀಡ್ತಾರೆ. ಈ ಜಾಹೀರಾತಿಗೆ ನೀಡಿದ ಹಣ ಯಾರ ಅಪ್ಪನದು?"
* "ಸಿದ್ದರಾಮಯ್ಯ ಡ್ಯಾನ್ಸ್ ಮಾಡಿಕೊಂಡು ಸ್ಟೇಜ್ ಮೇಲೆ ಮಾತನಾಡ್ತಾರೆ. ಆದರೆ ಇವರು ನೀಡಿದ್ದು ಬರಭಾಗ್ಯ, ಅರೆಬರೆ ಕುಡಿಯುವ ನೀರಿನ ಭಾಗ್ಯ"
* "ಸಸಿ ನೆಡುವ ನೆಪದಲ್ಲಿ ನೂರಾರು ಕೋಟಿ ನುಂಗಿಹಾಕಿದ್ದಾರೆ".
* "ಸಿದ್ದರಾಮಯ್ಯ ಶೌಚಾಲಯಮುಕ್ತ ಅಂತಾರೆ. ಇಂದಿಗೂ ಉತ್ತರ ಕರ್ನಾಟಕದಲ್ಲಿ ಬಯಲಲ್ಲೇ ಕುಳಿತಿರುತ್ತಾರೆ. ಇವರು ನೋಡಿದರೆ ಕ್ರಾಂತಿ ಅಂತಿದ್ದಾರೆ. ಶೌಚಾಲಯಕ್ಕೆ ನೀರೇ ಕೊಡದಿದ್ದರೆ ಹೇಗೆ?"
ಯಡಿಯೂರಪ್ಪರನ್ನು ತೆಗಳುವ ನೈತಿಕತೆ ಸಿದ್ದುಗಿಲ್ಲ: ರೇವಣ್ಣ ಹೊಸ ವರಸೆ
* "ಪತ್ರಿಕೆಗಳಿಗೆ ಒಂದೇ ದಿನ ನೀರಾವರಿ ಇಲಾಖೆಯಿಂದ ಏಳರಿಂದ ಎಂಟು ಕೋಟಿ ನೀಡುತ್ತಿದ್ದಾರೆ."
* "ವಸತಿ ಸಚಿವ ನನ್ನಂತೆ ಕಪ್ಪಗಿಲ್ಲ. ಆದರೂ ಬಣ್ಣ, ಲಿಪ್ ಸ್ಟಿಕ್ ಹಾಕಿಸಿಕೊಂಡು ಜಾಹೀರಾತು ನೀಡುತ್ತಿದ್ದಾರೆ".