ಅನೈತಿಕ ಸಂಬಂಧ ದುರಂತ ಅಂತ್ಯ: ಬೆಂಗಳೂರನ್ನು ಬೆಚ್ಚಿ ಬೀಳಿಸಿದ ಘಟನೆ

ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣ ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಶುರುವಾದ ಅನೈತಿಕ ಸಂಬಂಧ, ಕೊನೆಗೆ ಕೊಲೆಯಲ್ಲಿ ಕೊನೆಗೊಂಡಿದೆ. ಈ ಸಂಬಂಧದ ಆಘಾತಕಾರಿ ಹಿನ್ನೆಲೆಯನ್ನು ಪೊಲೀಸರು ಈಗ ಬಹಿರಂಗಪಡಿಸಿದ್ದಾರೆ.

ರಾಮನಗರ ಜಿಲ್ಲೆಯ ಬೀಡಿ ಕಾಲೋನಿ ನಿವಾಸಿ, 27 ವರ್ಷದ ಮೊಹಮ್ಮದ್ ಖಾಸಿಂ ಅವರು, ತಾವು ನೆಲೆಸಿರುವ ಪ್ರದೇಶದಲ್ಲಿ ಸ್ವಂತವಾಗಿ ಗುಜರಿ ಅಂಗಡಿಯನ್ನು ನಡೆಸುತ್ತಿದ್ದರು. ಮೊಹಮ್ಮದ್ ಖಾಸಿಂ ಮತ್ತು ಅರ್ಬಿಯಾ ಕೌಸರ್ ನಡುವೆ ಮದುವೆಗೂ ಮುನ್ನ ಏಳು ವರ್ಷಗಳ ಕಾಲ ಪ್ರೇಮ ಸಂಬಂಧವಿತ್ತು.

Bengaluru

ಅವರ ಪ್ರೀತಿ ತೀವ್ರವಾಗಿದ್ದರೂ, ಮೂರು ವರ್ಷಗಳ ಹಿಂದೆ ಅರ್ಬಿಯಾ ಕೌಸರ್‌ಗೆ ಮೊಹಮ್ಮದ್ ಅಕ್ಬರ್ ಎಂಬವರೊಂದಿಗೆ ಮದುವೆಯಾಯಿತು. ಮದುವೆಯ ನಂತರ, ಈ ದಂಪತಿ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಯಾಮಣ್ಣ ಗಾರ್ಡನ್ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಅರ್ಬಿಯಾ ಕೌಸರ್ ತಮ್ಮ ಹೊಸ ಕುಟುಂಬ ಜೀವನವನ್ನು ಪ್ರಾರಂಭಿಸಿದರೂ, ಖಾಸಿಂ ಜೊತೆಗಿನ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿರಲಿಲ್ಲ.

ಸಾಮಾಜಿಕ ಜಾಲತಾಣಗಳ ಮೂಲಕ ಮತ್ತೆ ಸಂಪರ್ಕ ಬೆಳೆದು ಅವರ ಸಂಬಂಧ ಅನೈತಿಕವಾಗಿ ಮಾರ್ಪಟ್ಟಿತು. ಅರ್ಬಿಯಾ ಕೌಸರ್ ತಮ್ಮ ಪತಿಗೆ ತಿಳಿಯದಂತೆ ತಮ್ಮ ಮಾಜಿ ಗೆಳೆಯ ಮೊಹಮ್ಮದ್ ಖಾಸಿಂ ಜೊತೆ ಮಾತುಕತೆ ಮುಂದುವರಿಸಿದ್ದಲ್ಲದೆ, ಆಗಾಗ್ಗೆ ಏಕಾಂತದಲ್ಲಿ ಭೇಟಿಯಾಗುತ್ತಿದ್ದರು. ಒಂದು ಹಂತದಲ್ಲಿ, ಅವರ ಅನೈತಿಕ ಸಂಬಂಧದ ಬಗ್ಗೆ ಅರ್ಬಿಯಾ ಕೌಸರ್ ಪತಿ ಮೊಹಮ್ಮದ್ ಅಕ್ಬರ್‌ಗೆ ತಿಳಿದುಬಂದಿದೆ.

ಕೂಡಲೇ, ಅವರು ತಮ್ಮ ಪತ್ನಿಗೆ ಇದನ್ನೆಲ್ಲ ಮಾಡಬೇಡ ಎಂದು ಎಚ್ಚರಿಸಿದ್ದಾರೆ. ಆದರೂ, ಅರ್ಬಿಯಾ ಕೌಸರ್ ತನ್ನ ಪತಿಯ ಮಾತನ್ನು ಕೇಳದೆ, ಖಾಸಿಂ ಜೊತೆ ಸಂಬಂಧವನ್ನು ಮುಂದುವರಿಸಿದರು. ಇದು ಮೊಹಮ್ಮದ್ ಅಕ್ಬರ್‌ ಅವರ ಆಕ್ರೋಶವನ್ನುಂಟು ಮಾಡುವುದಕ್ಕೆ ಕಾರಣವಾಗಿದೆ. ಮೇ 25 ರಂದು, ಮಾಜಿ ಪ್ರೇಯಸಿಯನ್ನು ಭೇಟಿಯಾಗಲು ಮೊಹಮ್ಮದ್ ಖಾಸಿಂ ರಾಮನಗರದಿಂದ ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಅರ್ಬಿಯಾ ಕೌಸರ್ ಮನೆಗೆ ಬಂದಿದ್ದರು. ಇವರು ಇಬ್ಬರು ಮಾತ್ರ ಮನೆಯಲ್ಲಿದ್ದರು. ಈ ವಿಷಯ ತಿಳಿದ ಪತಿ ಮೊಹಮ್ಮದ್ ಅಕ್ಬರ್, ತಮ್ಮ ಎಲ್ಲಾ ಸಂಬಂಧಿಕರನ್ನು ಕರೆದುಕೊಂಡು ಏಕಾಏಕಿ ಮನೆಗೆ ನುಗ್ಗಿದ್ದಾರೆ. ಅಲ್ಲಿ ಮೊಹಮ್ಮದ್ ಖಾಸಿಂ ಮತ್ತು ಅರ್ಬಿಯಾ ಕೌಸರ್ ಅವರನ್ನು ರೆಡ್‌ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಎಷ್ಟು ಹೇಳಿದರೂ ಕೇಳದೆ ಅಕ್ರಮ ಸಂಬಂಧವನ್ನು ಕಡಿದುಕೊಳ್ಳದ ಆಕ್ರೋಶದಲ್ಲಿ, ಮೊಹಮ್ಮದ್ ಅಕ್ಬರ್ ಮತ್ತು ಅವರ ಸಂಬಂಧಿಕರು ಸೇರಿ ಖಾಸಿಂ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ.

ಮನೆಯೊಳಗೆ ನಡೆದ ಜಗಳ ಬೀದಿಗೆ ಬಂದಿದ್ದು, ಸಾರ್ವಜನಿಕರು ಮಧ್ಯಪ್ರವೇಶಿಸಿ ಜಗಳ ನಿಲ್ಲಿಸಿದ್ದಾರೆ. ಖಾಸಿಂ ಅವರ ದೇಹದ ಪೂರ್ತಿ ತೀವ್ರ ಗಾಯಗಳಾಗಿದ್ದವು. ಹೇಗೋ ಅಲ್ಲಿಂದ ತಪ್ಪಿಸಿಕೊಂಡು ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ದುರಂತವಾಗಿ ಸಾವನ್ನಪ್ಪಿದರು.

ಖಾಸಿಂ ಸಾವಿನ ನಂತರ, ಬೈಯಪ್ಪನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತೀವ್ರ ತನಿಖೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+