ರಾಯಚೂರು: ಜೆಸ್ಕಾಂ ನೌಕರರಿಗೆ ಫಜೀತಿ ತಂದಿಟ್ಟ ಸರ್ಕಾರದ ಗ್ಯಾರಂಟಿ ಯೋಜನೆ

ರಾಯಚೂರು, ಜೂನ್‌ 2: ಚುನಾವಣೆಗೂ ಮುನ್ನ ನೀಡಿರುವ ಗ್ಯಾರಂಟಿ ಯೋಜನೆಗಳ ಜಾರಿಗೆ ಕಾಂಗ್ರೆಸ್‌ ಸರಕಾರ ತಾಲೀಮು ನಡೆಸುತ್ತಿದೆ. 'ಗ್ಯಾರಂಟಿ' ಯೋಜನೆಗಳು ಈಗಾಗಲೇ ಜಾರಿಯಾಗಿವೆ ಎಂಬ ಮನೋಭಾವನೆಯಲ್ಲಿರುವ ಜನರಿಂದ ಸಂಬಂಧಪಟ್ಟ ಇಲಾಖೆಯ ನೌಕರರಿಗೆ ಫಜೀತಿ ತಂದೊಡ್ಡಿದೆ.

ಕಾಂಗ್ರೆಸ್‌ ನೀಡಿದ ಗ್ಯಾರಂಟಿಗಳಲ್ಲಿ ಪ್ರಮುಖವಾದ 200 ಯೂನಿಟ್‌ ಉಚಿತ ವಿದ್ಯುತ್‌, ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಭರವಸೆಗೆ ಸಂಬಂಧಿಸಿದಂತೆ ಹೆಚ್ಚು ಚರ್ಚೆ ನಡೆಯುತ್ತಿದ್ದು, ಗ್ಯಾರಂಟಿಗಳು ಇನ್ನೂ ಪರಿಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಆದರೆ, ಜೆಸ್ಕಾಂ, ಸಾರಿಗೆ ಇಲಾಖೆಯ ನೌಕರರು ನಾನಾ ರೀತಿಯ ತೊಂದರೆ ಅನುಭವಿಸುತ್ತಿದ್ದಾರೆ.

Gescom Staff Worried About Karnataka Government 200U Free Electricity Scheme

ತಾಲೂಕಿನಲ್ಲಿ ಜೆಸ್ಕಾಂ ಸಿಬ್ಬಂದಿ ಮೀಟರ್‌ ರೀಡಿಂಗ್‌ ಹೋದಾಗ ಮತ್ತು ಬಾಕಿ ಬಿಲ್‌ ಕಟ್ಟುವಂತೆ ಕೇಳಲು ಹೋದಾಗ ಸಾರ್ವಜನಿಕರಿಂದ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಇದರಿಂದ ಈಗ ವಿದ್ಯುತ್‌ ಬಿಲ್‌ ನೀಡುವುದಕ್ಕೂ ಭಯ ಶುರುವಾಗಿದೆ. ಯಾವಾಗ? ಯಾರು?, ಎಲ್ಲಿ? ಜಗಳ ತೆಗೆದು ಹೊಡೆಯುತ್ತಾರೋ, ಆ ಶಿವನೇ ಬಲ್ಲ.

ಇನ್ನು ಸರಕಾರ ರೂಲ್ಸ್‌ ಮಾಡಿ, ಬಿಪಿಎಲ್‌ ಕುಟುಂಬಕ್ಕೆ ವಿದ್ಯುತ್‌ ಉಚಿತ ಎಂದರೂ ಕಷ್ಟ. ಆಗ ಅರ್ಧಕ್ಕರ್ಧ ಜನ ಜಗಳಕ್ಕಿಳಿಯುತ್ತಾರೆ. ಸರಕಾರದ ಕೆಲಸಗಳಿಗೆ ನಾವು ಪೊಲೀಸ್‌ ಕಾವಲಿನಲ್ಲಿ ಬಿಲ್‌ ನೀಡಲು ಮನೆಮನೆ ಸುತ್ತಬೇಕಾಗಿದೆ ಎಂಬುದು ನೌಕರರ ಅಸಹಾಯಕತೆಯಾಗಿದೆ.

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನ ನಾಯಕರು ಇನ್ನೂ ಮುಂದೆ ಯಾರೂ ವಿದ್ಯುತ್‌ ಬಿಲ್‌ ಕಟ್ಟಬೇಡಿ ಎಂದು ಬಹಿರಂಗವಾಗಿ ಹಾಗೂ ಮನೆಮನೆ ಪ್ರಚಾರದ ವೇಳೆಯಲ್ಲೂ ಹೇಳಿದ್ದರಿಂದ ಅದನ್ನೇ ಬಂಡವಾಳವಾಗಿಸಿಕೊಂಡ ಜನತೆ ಬಿಲ್‌ ಕಟ್ಟೊಲ್ಲಎಂದು ಪಟ್ಟು ಹಿಡಿದಿದ್ದರಿಂದ ತಾಲೂಕಿನ ಜೆಸ್ಕಾಂ ಇಲಾಖೆ ನಗರ ಮತ್ತು ಗ್ರಾಮೀಣ ಭಾಗದ ಮನೆಗಳ ವಿದ್ಯುತ್‌ ಬಿಲ್‌ ವಸೂಲಾತಿಯಲ್ಲಿ ಈ ಹಿಂದೆ ಶೇ.98 ರಷ್ಟು ಸಾಧನೆ ಮಾಡಲಾಗುತ್ತಿತ್ತು. ಆದರೆ, ಈ ತಿಂಗಳು ಮುಗಿಯುವ ಹಂತಕ್ಕೆ ತಲುಪಿದರೂ ಬಿಲ್‌ ಕಲೆಕ್ಷನ್‌ ಶೇ.50ರಷ್ಟು ದಾಟಿಲ್ಲ ಎನ್ನುವುದು ಸಿಬ್ಬಂದಿಯನ್ನು ಚಿಂತೆಗೀಡುಮಾಡಿದೆ.

Gescom Staff Worried About Karnataka Government 200U Free Electricity Scheme

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣದ ಗ್ಯಾರಂಟಿಯಿಂದಾಗಿ ಹೆಚ್ಚು ತೊಂದರೆ ಹಾಗೂ ವಾಗ್ವಾದಕ್ಕೀಡಾಗುವುದು ಬಸ್‌ ಕಂಡಕ್ಟರ್‌. ಪಟ್ಟಣದ ಸಾರಿಗೆ ಘಟಕದಿಂದ ಹೊರಡುವ ಬಸ್‌ಗಳಲ್ಲಿ ಪ್ರತಿನಿತ್ಯವೂ ಇದೇ ಗೋಳಾಗಿದೆ. ಬಸ್‌ ಟಿಕೆಟ್‌ ನೀಡಲು ಮುಂದಾದರೆ ಕಂಡಕ್ಟರ್‌ ಜೊತೆ ಮಹಿಳೆಯರು ವಾದ ಮಾಡುತ್ತಿರುವುದು ಕಂಡಕ್ಟರ್‌ಗೆ ತಲೆನೋವಾಗಿದೆ. ಕರ್ತವ್ಯ ನಿಭಾಯಿಸುವುದು ಒಂದಡೆಯಾದರೆ ಇನ್ನೂ ಜಾರಿಯಾಗದ ಗ್ಯಾರಂಟಿ ನಿರ್ವಹಣೆ ಮಾಡುವುದೇ ನಿರ್ವಾಹಕರಿಗೆ ದೊಡ್ಡ ಸವಾಲಾಗಿದೆ.

ಕಾಂಗ್ರೆಸ್‌ ಸರಕಾರ ಜನತೆಗೆ ನೀಡಿದ ಗ್ಯಾರಂಟಿಯನ್ನು ಆದಷ್ಟು ಬೇಗ ಜಾರಿ ಮಾಡಿದರೆ ಮಾತ್ರ ಸಾರಿಗೆ ಮತ್ತು ಜೆಸ್ಕಾಂ ಸಿಬ್ಬಂದಿ ಅನುಭವಿಸುವ ಯಾತನೆಗೆ ಮುಕ್ತಿಯಾಗಲಿದೆ. ಗ್ಯಾರಂಟಿ ಜಾರಿಗೆ ವಿಳಂಬವಾದರೆ ಸಿಬ್ಬಂದಿಗೆ ಎಲ್ಲಿಲ್ಲಿದ ಸಂಕಟ ಶುರುವಾಗುತ್ತಿದೆ.

ವಿದ್ಯುತ್‌ ಬಿಲ್‌ ಕೇಳಲು ಹೋದರೆ ನಮ್ಮ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಏನು ಮಾಡೋದು, ಬಿಲ್‌ ತರದಿದ್ದರೆ ಇಲಾಖೆ ಮೇಲಾಧಿಕಾರಿಗಳು ಬೈಯುತ್ತಾರೆ. ಬಿಲ್‌ ಕೊಡಿ ಎಂದ್ರೆ ಜನ ಬೈಯುತ್ತಾರೆ. ಇದರ ಮಧ್ಯೆ ನಮ್ಮ ಪಾಡೇನು ಎಂದು ಜೆಸ್ಕಾಂ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+