ಗುಂಪು ಹತ್ಯೆ ಪಾಶ್ಚಿಮಾತ್ಯರ ಕೊಡುಗೆ: ಮೋಹನ್ ಭಾಗವತ್
ನಾಗ್ಪುರ, ಅಕ್ಟೋಬರ್ 08: "ಗುಂಪು ಹತ್ಯೆ ಎಂಬುದು ಪಾಶ್ಚಿಮಾತ್ಯ ದೆಶಗಳಲ್ಲಿ ಛಾಲ್ತಿಯಲ್ಲಿದ್ದ ಪದ್ಧತಿ. ಈಗ ಭಾರತವನ್ನು ಹಳಿಯಲು ಅದ್ನು ಬಳಸಲಾಗುತ್ತಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಹೇಳಿದರು.
ಮಹಾರಾಷ್ಟ್ರದ ನಾಗ್ಪುರದಲ್ಲಿ ಇಂದು ಆರೆಸ್ಸೆಸ್ ಮುಖ್ಯಸ್ಥರ ಐತಿಹಾಸಿಕ ವಿಜಯ ದಶಮಿ ಭಾಷಣ ಮಾಡಿ, ಮಾತನಾಡಿದ ಭಾಗವತ್, "ಗುಂಪುಹತ್ಯೆ ಹುಟ್ಟಿಕೊಂಡಿದ್ದು ಭಾರತದಲ್ಲಲ್ಲ. ಅದಕ್ಕೆ ಮೂಲ ಭಾರತವಲ್ಲವೇ ಅಲ್ಲ. ಭಾರತದ ಪರಂಪರೆ ಮತ್ತು ಇತಿಹಾಸವನ್ನು ಘಾಸಿಗೊಳಿಸಲು ಪಾಶ್ಚಿಮಾತ್ಯ ದೇಶದ ಧಾರ್ಮಿಕ ಗ್ರಂಥಗಳಲ್ಲಿ ಕಂಡುಬಂದ ಈ ಪದ್ಧತಿಯನ್ನು ಪರಿಚಯಿಸಲಾಗುತ್ತಿದೆ" ಎಂದು ಮೋಹನ್ ಭಾಗವತ್ ಹೇಳಿದರು.
"ಕೆಲವರು ನಮ್ಮ ದೇಶದ ಘನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ವಿವಿಧತೆಯಲ್ಲಿ ಏಕತೆಗೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. 'ಗುಂಪು ಹತ್ಯೆ' ಎಂಬ ಪದವನ್ನು ಇತ್ತೀಚೆಗೆ ಉಪಯೋಗಿಸಲಾಗುತ್ತಿದೆ. ಆದರೆ ಅದು ಎಂದಿಗೂ ಭಾರತದಲ್ಲಿ ನಡೆದಿರಲಿಲ್ಲ" ಎಂದು ಅವರು ಹೇಳಿದರು.
ಗುಂಪು ಹತ್ಯೆ ಅಥವಾ ಲಿಂಚಿಂಗ್ ಎಂಬುದು ಪಾಶ್ಚಿಮಾತ್ಯರ ರಚನೆ. ಅದು ಭಾರತದ್ದಲ್ಲ. ಇದರ ಮೂಲ ಒಂದು ಧಾರ್ಮಿಕ ಗ್ರಂಥದಲ್ಲಿದೆ. ಆ ಪದವನ್ನು ಭಾರತದ ಮೇಲೆ ಹೇರಬೇಡಿ ಎಂದು ಭಾಗವತ್ ಹೇಳಿದರು.
ಮೋಹನ್ ಭಾಗವತ್ ಅವರ ವಿಜಯ ದಶಮಿ ಭಾಷಣದ ಮುಖ್ಯಾಂಶ ಇಲ್ಲಿದೆ.

370 ನೇ ವಿಧಿ
ಕೇಂದ್ರದ ಎನ್ ಡಿಎ ಸರ್ಕಾರ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ್ದು, ಜನರು ತನ್ನ ಮೇಲೆ ನಂಬಿಕೆ ಇರಿಸಿಕೊಂದು ಎರಡನೇ ಬಾರಿ ಗೆಲ್ಲಿಸಿದ ಜನರ ನಿರೀಕ್ಷೆಯನ್ನು ಈಡೇರಿಸಿದೆ -ಮೋಹನ್ ಭಾಗವತ್

ಕೆಲವರಿಗೆ ಭಯ ಹುಟ್ಟಿದೆ
ಭಾರತ ಅಭಿವೃದ್ಧಿ ಹೊಂದುತ್ತಿರುವುದು ಕೆಲವರಲ್ಲಿ ಭಯ ಹುಟ್ಟಿಸಿದೆ. ಆದ್ದರಿಂದಲೇ ಸುಖಾಸುಮ್ಮನೆ ವಿವಾದ ಸೃಷ್ಟಿಸುವ ಕೆಲಸಗಳಾಗುತ್ತಿವೆ. ಗುಂಪು ಹತ್ಯೆಯ ಬಗ್ಗೆ ಸುದ್ದಿ ಎದ್ದಿರುವುದೂ ಅದೇ ಕಾರಣಕ್ಕೆ- ಮೋಹನ್ ಭಾಗವತ್

ಎಲ್ಲರ ಅಭಿಪ್ರಾಯಕ್ಕೂ ಬೆಲೆ
ಪ್ರಜಾಪ್ರಭುತ್ವದಲ್ಲಿ ಸಂಭವಿಸುವ ಎಲ್ಲಾ ಬದಲಾವಣೆಗಳನ್ನೂ ಒಪ್ಪಿಕೊಳ್ಳಲೇ ಬೇಕೆಂದಿಲ್ಲ. ಆದರೆ ನಮ್ಮ ಅಭಿಪ್ರಾಯಗಳು ಸ್ವಹಿತಾಸಕ್ತಿ ಪೂರಕವಾಗಿ, ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗಿ ಇರಕೂಡದು- ಮೋಹನ್ ಭಾಗವತ್

ಭಾರತ ಎಲ್ಲರಿಗೂ ಸೇರಿದ್ದು!
ಭಾರತ ಎಲ್ಲ ಧರ್ಮದ ಭಾರತೀಯರಿಗೂ ಸೇರಿದ್ದು. ಜಾತಿ ಅಥವಾ ಮತದ ಮೇಲೆ ಯಾವುದೇ ಭೇದಭಾವ ತೋರದಂತೆ ಆಡಳಿತ ನಡೆಸುವುದು ಒಬ್ಬ ಆಡಳಿತಗಾರನ ಕರ್ತವ್ಯ. ಒಬ್ಬ ಸ್ವಯಂಸೇವಕ ಅಧಿಕಾರದಲ್ಲಿದ್ದಾನೆ ಎಂದರೆ ಆತ ಅವನ್ನೆಲ್ಲ ಗಮನದಲ್ಲಿಟ್ಟುಕೊಳ್ತಾನೆ ಮತ್ತು ಅವ್ನು ಪಾಲಿಸುತ್ತಾನೆ ಎಂದರ್ಥ- ಮೋಹನ್ ಭಾಗವತ್
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications