ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ರಾಂ ವಿಲಾಸ್ ಪಾಸ್ವಾನ್: ವಿಷಯ ಅದಲ್ಲ..
ಕುಟುಂಬ ರಾಜಕಾರಣ, ವಂಶಪಾರಂಪರ್ಯ ರಾಜಕಾರಣ, ಪುತ್ರ ವ್ಯಾಮೋಹ ಎಂದು ಯಾರೂ, ನಮ್ಮ ಕರ್ನಾಟಕದ ಹಿರಿಯ ರಾಜಕಾರಣಿಯ ಕುಟುಂಬದತ್ತ ಬೊಟ್ಟು ತೋರಿಸುವಂತಿಲ್ಲ. ಯಾಕೆಂದರೆ, ದೇಶದಲ್ಲಿ ಇದೆಲ್ಲಾ ಕಾಮನ್..
73ವರ್ಷದ ರಾಂ ವಿಲಾಸ್ ಪಾಸ್ವಾನ್, ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಪಾಸ್ವಾನ್, ಬಿಜೆಪಿಯ ಪಾಲಿಸಿ ಪ್ರಕಾರ ವೃದ್ಧಾಶ್ರಮ ಸೇರಲು ಇನ್ನೆರಡು ವರ್ಷ ಬಾಕಿಯಿದೆ.
ಹತ್ತೊಂಬತ್ತು ವರ್ಷದ ಹಿಂದೆ, ತಾನೇ ಹುಟ್ಟುಹಾಕಿದ ಎಲ್ಜೆಪಿ ಪಕ್ಷದ ಅಧ್ಯಕ್ಷ ಹುದ್ದೆಯನ್ನು ತೊರೆಯಲು ಕೇಂದ್ರ ಸಚಿವ ಪಾಸ್ವಾನ್ ಅವರಿಗೆ ಅಂತಹ ಪೈಪೋಟಿ ಏನೂ ಇರಲಿಲ್ಲ. ಆದರೆ, ಪುತ್ರ ವ್ಯಾಮೋಹ ಎನ್ನುವುದು ಯಾರನ್ನೂ ಬಿಡುವುದಿಲ್ಲವೇನೋ?
ಯಾವಾಗಲೂ ಅಧಿಕಾರ ತನ್ನ ಸುತ್ತಮುತ್ತ ಇರಬೇಕೆಂದು ಬಯಸುವ ದೇಶದ ರಾಜಕಾರಣಿಗಳಲ್ಲೊಬ್ಬರು ಪಾಸ್ವಾನ್ ಕೂಡಾ. ಯುಪಿಎ ಮೈತ್ರಿಕೂಟಕ್ಕೆ ನಿಯತ್ತು ತೋರಿಸಿದ್ದ ಪಾಸ್ವಾನ್, 2014ರಲ್ಲಿ ಮೋದಿ ಹವಾ ಜೋರಿದ್ದ ವೇಳೆ, ಎನ್ಡಿಎ ಮೈತ್ರಿಕೂಟದ ಗಾಳಿಗೆ ಒಳಗೆ ತೂರಿಬಿಟ್ಟರು.

ಪಾಸ್ವಾನ್, ಹಾಲೀ ಸರಕಾರದಲ್ಲಿ ಆಹಾರ ಖಾತೆ ಸಚಿವ
ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರಾಸಾಯನಿಕ, ರಸಗೂಬ್ಬರ ಖಾತೆಯ ಸಚಿವರಾಗಿದ್ದ ರಾಂ ವಿಲಾಸ್ ಪಾಸ್ವಾನ್, ಹಾಲೀ ಸರಕಾರದಲ್ಲಿ ಆಹಾರ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಅವರ ಪುತ್ರ ಚಿರಾಗ್ ಪಾಸ್ವಾನ್ ಕೂಡಾ ಜಮಾಯಿ (ಬಿಹಾರ) ಕ್ಷೇತ್ರದ ಲೋಕಸಭಾ ಸದಸ್ಯರು.

ಚಿರಾಗ್ ಪಾಸ್ವಾನ್ ನಿರಾಯಾಸವಾಗಿ ಗೆಲುವು
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಜೊತೆ, ಪಾಸ್ವಾನ್ ಅವರ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದರಿಂದ, ಚಿರಾಗ್ ಪಾಸ್ವಾನ್ ನಿರಾಯಾಸವಾಗಿ ಗೆಲುವನ್ನು ಸಾಧಿಸಿದ್ದರು. ಈಗ, ತಂದೆ ಹುಟ್ಟುಹಾಕಿದ ಪಕ್ಷಕ್ಕೆ ಚಿರಾಗ್, ವಾರಸುದಾರರಾಗಿದ್ದಾರೆ.

ಮಗನನ್ನು ಅಧ್ಯಕ್ಷನನ್ನಾಗಿ ಮಾಡಲು ಪಾಸ್ವಾನ್ ನೀಡಿದ ಕಾರಣ
ಚಿರಾಗ್ ಪಾಸ್ವಾನ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಗನನ್ನು ಅಧ್ಯಕ್ಷನನ್ನಾಗಿ ಮಾಡಲು ರಾಮ್ ವಿಲಾಸ್ ಪಾಸ್ವಾನ್ ನೀಡಿದ ಕಾರಣ, "ಯುವ ನಾಯಕತ್ವಕ್ಕಾಗಿ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ" ಎಂದು.

ನನಗೆ ಸಂಪೂರ್ಣ ವಿಶ್ವಾಸವಿದೆ
"ನನಗೆ ಸಂಪೂರ್ಣ ವಿಶ್ವಾಸವಿದೆ, ಬಡವರಿಗೆ ಮತ್ತು ದೀನ ದಲಿತರಿಗೆ ನ್ಯಾಯ ಒದಗಿಸಲು ನನ್ನ ಮಗ ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಾನೆ. ನನ್ನ ಈ ನಿರ್ಧಾರವನ್ನು ಪಕ್ಷದ ಸಂಸದರು ಆದಿಯಾಗಿ, ಎಲ್ಲರೂ ಬೆಂಬಲಿಸುತ್ತಾರೆ" ಎಂದು ರಾಂ ವಿಲಾಸ್ ಪಾಸ್ವಾನ್ ವಿಶ್ವಾಸದ ಮಾತನ್ನಾಡಿದ್ದಾರೆ.

ಪುತ್ರ ವ್ಯಾಮೋಹದ ಪಟ್ಟಿಗೆ ಇನ್ನೊಂದು ಕುಡಿ
"ಪಕ್ಷದ ನಿಲುವಿಗೆ ಧಕ್ಕೆಯಾಗದಂತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪಾಲಿಸಿಕೊಂಡು ಬರುತ್ತೇನೆ. ಹಿರಿಯ ನಾಯಕರು ಮತ್ತು ಕಾರ್ಮಿಕರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಮುನ್ನಡೆಯುತ್ತೇನೆ" ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಅಲ್ಲಿಗೆ, ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹದ ಪಟ್ಟಿಗೆ ಇನ್ನೊಂದು ಕುಡಿ ಸೇರಿದಂತಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications