8 ಸೀಟಲ್ಲಿ ಸ್ಪರ್ಧಿಸುವವರೂ ಪಿಎಂ ಆಗಲು ಕಾಯ್ತಿದ್ದಾರೆ: ಎಚ್ಡಿಡಿಗೆ ಮೋದಿ ಟಾಂಗ್
Recommended Video
ಪಟ್ನಾ, ಏಪ್ರಿಲ್ 25: ಬಿಹಾರದ ದುರ್ಭಾಂಗಾದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.
ಆರಂಭದಲ್ಲಿ ಅವರು ಭಯೋತ್ಪಾದನೆಯನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳ ವಿರುದ್ಧ ಹರಿಹಾಯ್ದರು. ನೆರೆಯ ಶ್ರೀಲಂಕಾದಲ್ಲಿ 350ಕ್ಕೂ ಅಧಿಕ ಮಂದಿ ಜೀವಕಳೆದುಕೊಂಡಿರುವುದನ್ನು ಉಲ್ಲೇಖಿಸಿದ ಅವರು, ನಮ್ಮ ನೆರೆಹೊರೆಯ ದೇಶಗಳಲ್ಲಿ ಭಯೋತ್ಪಾದನೆಯ ಕಾರ್ಖಾನೆಗಳು ಕೆಲಸ ಮಾಡುತ್ತಿದ್ದರೆ, 'ಮಹಾಮಿಲಾವತ್' ಅದೊಂದು ಸಮಸ್ಯೆಯೆಂದೇ ಪರಿಗಣಿಸಿಲ್ಲ ಎಂದು ಆರೋಪಿಸಿದರು.
ಮಮತಾ ಬ್ಯಾನರ್ಜಿಯನ್ನು 'ಸ್ಟಿಕ್ಕರ್ ದೀದಿ' ಎಂದು ವ್ಯಂಗ್ಯವಾಡಿದ ಮೋದಿ
ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆ ಒಂದು ಮಹತ್ವದ ಸಮಸ್ಯೆ ಎಂದು ಮಹಾಮಿಲಾವತ್ಗೆ ಅನಿಸಿಲ್ಲ. ಭಯೋತ್ಪಾದನೆಯ ವಿರುದ್ಧ ಮೋದಿ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಚೌಕಿದಾರನಿಗೆ ಈ ಹೋರಾಟದಲ್ಲಿ ಗೆಲುವು ಸಾಧಿಸಲು ನಿಮ್ಮ ಮತಗಳು ಬೇಕು ಎಂದರು.
ಪ್ರಧಾನಿ ಮೋದಿ, ಇದು ನಿಮ್ಮಿಂದ ಆಗಲ್ಲ ಎಂದು ಕಾಂಗ್ರೆಸ್ ಹೇಳಿದ್ದೇನು?
ಕೆಲವು ವ್ಯಕ್ತಿಗಳು 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಘೋಷಣೆಗಳ ವಿಚಾರದಲ್ಲಿ ಸಮಸ್ಯೆ ಹೊಂದಿದ್ದಾರೆ. ಅಂತಹವರು ಚುನಾವಣೆಯಲ್ಲಿ ತಮ್ಮ ಠೇವಣಿಗಳನ್ನು ಕಳೆದುಕೊಳ್ಳಬಾರದೇ? ಎಂದು ಪ್ರಶ್ನಿಸಿದರು.
PM Modi in Darbhanga, Bihar: Some people have a problem with 'Bharat mata ki Jai' & 'Vande mataram', should such people lose their deposits or not? These are same people who complain when I talk about Bharat. They also say 'why is Modi talking about terrorism, it is not an issue' pic.twitter.com/132N7MY49L
— ANI (@ANI) 25 April 2019
ಮೋದಿ ವಿರುದ್ಧದ ಹೋರಾಟಕ್ಕೆ ಅಡ್ಡಬಂದರೆ ನಾಶ ಮಾಡ್ತೀನಿ: ಖುರ್ಷಿದ್ ವಿವಾದ
ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ವಿರೋಧಪಕ್ಷಗಳ ಮಹಾ ಮೈತ್ರಿಕೂಟದಲ್ಲಿರುವ ಪ್ರಧಾನಿ ಆಕಾಂಕ್ಷಿಗಳನ್ನು ಲೇವಡಿ ಮಾಡಿದ ಅವರು, 40, 20 ಕೊನೆಗೆ ಕೇವಲ 8 ಸೀಟುಗಳಲ್ಲಿ ಸ್ಪರ್ಧಿಸಿರುವವರು ಕೂಡ ಪ್ರಧಾನಿಯಾಗುವ ತಮ್ಮ ಸರದಿಗಾಗಿ ಸಾಲಿನಲ್ಲಿ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.