ತನ್ನದೇ ಅಪಹರಣದ ಸಂಚು ರೂಪಿಸಿದ ಬಾಲಕ! ಹೀಗೊಂದು ಆಪರೇಶನ್ ಅಲಮೇಲಮ್ಮ ಪ್ರಸಂಗ!
ನೋಯ್ಡಾ, ಅಕ್ಟೋಬರ್ 17: ಆ ಹುಡುಗನಿಗೆ ಹನ್ನೊಂದು ವರ್ಷ. ಅಂದ್ರೆ ಕೇವಲ ಆರನೇ ತರಗತಿ! ತಂದೆ-ತಾಯಿ ಬೈದರು ಅನ್ನೋ ಒಂದೇ ಕಾರಣಕ್ಕೆ ತನ್ನದೇ ಅಪಹರಣದ ಸಂಚು ರೂಪಿಸಿ, ಐದು ಲಕ್ಷ ರೂಪಾಯಿಯ ಬೇಡಿಕೆ ಇಟ್ಟಿದ್ದ ಪೋರ ಈತ!
ಈ ಸಾಲುಗಳನ್ನು ಓದುತ್ತಿದ್ದಂತೆಯೇ ಕನ್ನಡದ 'ಆಪರೇಷನ್ ಅಲಮೇಲಮ್ಮ' ಚಿತ್ರ ನೆನಪಿಗೆ ಬಂದಿರಬೇಕಲ್ಲ?! ಹೌದು, ಆ ಚಿತ್ರದ ರೀತಿಯಲ್ಲಿಯೇ ನಡೆದ ಘಟನೆ ಇದು.
ವಿಷಯ ಪೊಲೀಸರಿಗೆ ತಿಳಿದು, ನಂತರ ಯಾವ ಅಪಾಯವೂ ಇಲ್ಲದೆ ಘಟನೆಗೆ ಶುಭ ಅಂತ್ಯ ಕಂಡಿತಾದರೂ, ಕೇವಲ ಹನ್ನೊಂದು ವರ್ಷ ವಯಸ್ಸಿನ ಹುಡುಗ ಅಪ್ಪ-ಅಮ್ಮನನ್ನು ಹೆದರಿಸುವುದಕ್ಕಾಗಿ ಈ ರೀತಿಯ ಸಂಚು ಹೋಡಿದ್ದು ಮಾತ್ರ ಅಚ್ಚರಿ ಮೂಡಿಸಿದೆ.

ಕಿರಾಣಿ ಅಂಗಡಿಯಲ್ಲಿ ಹಣ ಕದಿಯುತ್ತಿದ್ದ ಹುಡುಗ
ಈ ಬಾಲಕನ ತಂದೆಯದು ಕಿರಾಣಿ ಅಂಗಡಿಯಿತ್ತು. ಶಾಲೆಯಿಂದ ಬಂದ ನಂತರ ಅಥವಾ ರಜಾ ದಿನಗಳಲ್ಲಿ ತಂದೆಯು, ಮಗನನ್ನು ಅಂಗಡಿಗೆ ತಂದು ಕೂರಿಸಿ ವ್ಯವಹಾರ ನೋಡಿಕೊಳ್ಳುವಂತೆ ಹೇಳುತ್ತಿದ್ದರು. ಇದು ಹುಡುಗನಿಗೆ ಇಷ್ಟವಿರಲಿಲ್ಲ. ಕಿರಾಣಿ ಅಂಗಡಿಯ ಡ್ರಾಯರ್ ನಲ್ಲಿ ಇರುತ್ತಿದ್ದ ಹಣವನ್ನು ಹುಡುಗ ಕದಿಯುತ್ತಿರುವುದು ತಂದೆಗೆ ತಡವಾಘಿ ತಿಳಿಯಿತು. ಇದರಿಂದ ಮಗನನ್ನು ಚೆನ್ನಾಗಿ ಬೈದಿದ್ದರು ತಂದೆ.

ತಂದೆಯ ಬೈಗುಳದಿಂದ ಕೊಪ
ತಂದೆಯ ಬೈಗುಳ ಕೇಳಿ ಕೋಪಗೊಂಡಿದ್ದ ಮಗ ಅಂಗಡಿಗೆ ಹೋಗುವುದನ್ನು ಬಿಟ್ಟಿದ್ದ. ಆದರೆ ಕೆಲ ದಿನಗಳ ನಂತರ ಮತ್ತೆ ತಂದೆ ಆತನನ್ನು ಅಂಗಡಿಗೆ ಕರೆದೊಯ್ಯತೊಡಗಿದರು. ಆದರೆ ಈಗಲೂ ತಂದೆಯ ಕಣ್ತಪ್ಪಿಸಿ ಹಣ ಕದಿಯುವುದಕ್ಕೆ ಶುರು ಮಾಡಿದ್ದ. ಇದು ಬಾಲಕನ ಚಿಕ್ಕಪ್ಪನಿಗೆ ಒಮ್ಮೆ ತಿಳಿದು ಅವರೂ ಬಾಲಕನನ್ನು ಗದರಿದ್ದರು.

ಮನೆಬಿಟ್ಟು ತೆರಳಿದ ಹುಡುಗ
ಪಾಲಕರ ನಿರಂತರ ಬೈಗುಳದಿಂದ ಕೋಪಗೊಂಡ ಹುಡುಗ ಇತ್ತೀಚೆಗೆ ಒಂದು ದಿನ ಶಾಲೆಗೆ ಹೊರಟವನು ಮನೆಗೆ ಬಂದಿರಲಿಲ್ಲ. ಎಷ್ಟು ಹೊತ್ತಾದರೂ ಮಗ ಬಾರದಿದ್ದಾಗ ಕುಟುಂಬಸ್ಥರಿಗೆ ಗಾಬರಿಯಾಗಿತ್ತು. ಈ ಸಂದರ್ಭದಲ್ಲಿ ಫೋನ್ ಕರೆ ಮಾಡಿದ ಹುಡುಗ, ತನ್ನನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ. ನಾನು ಈಗ ಬಿಸ್ರಾಖ್ ಪ್ರದೇಶದಲ್ಲಿದ್ದೀನಿ. ಕೂಡಲೇ ಐದು ಲಕ್ಷ ರೂ.ಗಳೊಂದಿಗೆ ಈ ಸ್ಥಳಕ್ಕೆ ಬನ್ನಿ ಎಂದು ಹೇಳ ಫೋನ್ ಇಟ್ಟ. ಈ ವಿಷಯವನ್ನು ಕೂಡಲೇ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದರು.

ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ ಬಾಲಕ
ಬಾಲಕ ಬಿಸ್ರಾಖ್ ಪ್ರದೇಶದಲ್ಲಿ ಕಟ್ಟಡವೊಂದರ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ ಬಳಿ ಫೋನ್ ಪಡೆದು ಮನೆಗೆ ಫೋನಾಯಿಸಿದ್ದ. ಆತನ ಫೋನ್ ನಂಬರ್ ಟ್ರೇಸ್ ಮಾಡುವುದಕ್ಕೆ ಪೊಲೀಸರು ಪ್ರಯತ್ನಿಸಿದರೂ, ಅದು ಆಗಾಗ ಸ್ವಿಚ್ಡ್ ಆಫ್ ಆಗುತ್ತಿತ್ತು. ನಂತರ ಬಿಸ್ರಾಖ್ ಪೊಲೀಸರು ಬಾಲಕನ್ನು ಹುಡುಕಲು ಯಶಸ್ವಿಯಾದರು. ವಿಚಾರಣೆಯ ವೇಳೆ ತಾನೇ ಈ ಕೆಲಸ ಮಾಡಿದ್ದು ಎಂಬುದನ್ನು ಬಾಲಕ ಒಪ್ಪಿಕೊಂಡಿದ್ದಾನೆ. ಇದುವರೆಗೆ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ.
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications