'ಮುಂಬರುವ ವರ್ಷಗಳಲ್ಲಿ ಲಾಹೋರ್ ನಲ್ಲಿ ಗಾಂಧಿ ಜಯಂತಿ ಆಚರಿಸುತ್ತೇವೆ'
ನವದೆಹಲಿ, ಸೆಪ್ಟೆಂಬರ್ 13: 'ಪ್ರತ್ಯೇಕತಾವಾದಿ ಚಳವಳಿಯಿಂದ' ಪಾಕಿಸ್ತಾನ ಕುಸಿಯಲಿದೆ. ಮುಂಬರುವ ವರ್ಷಗಳಲ್ಲಿ ಗಾಂಧೀಜಿ ಜನ್ಮ ವರ್ಷಾಚರಣೆಯನ್ನು ಲಾಹೋರ್ ನಲ್ಲಿ (ಪಾಕಿಸ್ತಾನ) ಆಚರಿಸಲಿದ್ದೇವೆ ಎಂದು ಶುಕ್ರವಾರ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಮುಖಂಡ ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮುಜಫರಾಬಾದ್ ನಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು, ಕಾಶ್ಮೀರಿಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಮ್ಮು - ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಭಾರತ ಸರಕಾರ ರದ್ದು ಮಾಡಿದ ನಂತರ ಇದು ಅವರ ಎರಡನೇ ಭೇಟಿಯಾಗಿದೆ.
"1947ಕ್ಕೂ ಮುನ್ನ ಪಾಕಿಸ್ತಾನವು ವಿಶ್ವ ಭೂಪಟದಲ್ಲಿ ಇರಲಿಲ್ಲ. ಇನ್ನು ಮುಂದೆ ಕೂಡ ಇರಲ್ಲ ಅಂತ ನಾನು ಅಂದುಕೊಳ್ತೀನಿ. ಅದು ಒಂದು ವೇಳೆ ನಿಜವಾದರೆ ಬಾಪೂ ಜಯಂತಿ ಹಾಗೂ ಹಿಂದಿ ದಿವಸ್ ನ ಲಾಹೋರ್ ನಲ್ಲಿ ಆಚರಿಸಬಹುದು, ನೀವಿದನ್ನು ಒಪ್ತೀರಾ?" ಎಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಇಂದ್ರೇಶ್ ಕುಮಾರ್ ಪ್ರಶ್ನಿಸಿದ್ದಾರೆ.

ವಿಭಜನೆ ನಂತರ ಪಾಕಿಸ್ತಾನ ರಚನೆ ಆಯಿತು. 1971ರಲ್ಲಿ ಮತ್ತಷ್ಟು ವಿಭಜನೆ ಆಯಿತು. ಈಗ ಇನ್ನೂ ಐದಾರು ತುಂಡಾಗುವ ಹಂತದಲ್ಲಿ ಇದೆ. ಪಷ್ತೂನಿಸ್ತಾನ್, ಬಲೂಚಿಸ್ತಾನ್, ಸಿಂಧ್ ದೂರವಾಗಲು ಬಯಸುತ್ತಿವೆ. ತಜ್ಞರು ಪಾಕಿಸ್ತಾನದ ಈ ಸ್ಥಿತಿ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ. ಪಾಕಿಸ್ತಾನ ದಿನದಿನಕ್ಕೂ ದುರ್ಬಲವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಆರೆಸ್ಸೆಸ್ ನಲ್ಲಿ ಹೇಗೆ ಪ್ರಚಾರಕ್ ಅಂತ ಇರುತ್ತಾರೋ ಅದೇ ರೀತಿ ಕಾಂಗ್ರೆಸ್ ನಲ್ಲಿ 'ಪ್ರೇರಕ್' ಎಂಬ ಹುದ್ದೆ ಸೃಷ್ಟಿಗೆ ಕೆಲವು ನಾಯಕರು ಆಲೋಚಿಸುತ್ತಿರುವ ಬಗ್ಗೆ ಮಾತನಾಡಿದ ಇಂದ್ರೇಶ್, ಕಾಂಗ್ರೆಸ್ ಗೆ 'ಪ್ರಚಾರಕರನ್ನು' ಹೊಂದಲು ಸಾಧ್ಯವಿಲ್ಲ. ಅದಕ್ಕೆ ಬದ್ಧತೆ, ತ್ಯಾಗ ಅಗತ್ಯ ಇದೆ ಎಂದರು.
ಪ್ರಚಾರಕ್ ಅಂದರೆ ಗುರಿ. ನಿಮಗೆ ಗುರಿ ಇಲ್ಲ ಅಂದರೆ ಅದು ಉಳಿಯಲ್ಲ. ನಾಟಕದ ಆಧಾರದಲ್ಲಿ ಗುರಿ ನಡೆಯಲ್ಲ. ಗುರಿ ಆರಂಭಿಸಲು ನಿಮಗೆ ತ್ಯಾಗ ಬೇಕು, ಸರಳತೆ, ಸಮರ್ಪಣೆ ಬೇಕು. ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯ ಗುರಿಯ ಭಾಗ. ಅದು ತನ್ನ ಗುರಿಯನ್ನು ಬಿಟ್ಟ ಮೇಲೆ ಭಾರತದ ವಿಭಜನೆಗೆ ಕಾರಣ ಆಯಿತು. ಅವರು ದೇಶದಲ್ಲಿ ಭ್ರಷ್ಟ, ಅಪರಾಧ ಚಟುವಟಿಕೆಗೆ ಕಾರಣರಾದರು ಎಂದು ಇಂದ್ರೇಶ್ ಕುಮಾರ್ ಆರೋಪಿಸಿದರು.
-
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ









Click it and Unblock the Notifications