ಏರ್ಲೈನ್ಸ್ಗೆ ಟಾಟಾ ರೀ ಎಂಟ್ರಿ, ಮುಂಬಯಿಗೆ ಮೊದಲ ಪಯಣ
ನವದೆಹಲಿ, ಜ. 9: ದೇಶದಲ್ಲಿರುವ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳು ನಷ್ಟ ಭರಿಸಲಾಗದೆ, ತಳಕಚ್ಚುತ್ತಿವೆ. ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಕೂಡ ಆರ್ಥಿಕ ಸಂಕಷ್ಟದಿಂದ ಹೈರಾಣಾಗಿದೆ. ಇಂತಹ ಸನ್ನಿವೇಷದಲ್ಲಿಯೂ ಟಾಟಾ ಸಮೂಹವು ಆರು ದಶಕಗಳ ನಂತರ ವಿಮಾನಯಾನ ಕ್ಷೇತ್ರಕ್ಕೆ ಹೊಸ ಉತ್ಸಾಹದೊಂದಿಗೆ ಪುನಃ ಕಾಲಿಟ್ಟಿದೆ.
ಟಾಟಾ ಮತ್ತು ಸಿಂಗಪುರ್ ಏರ್ಲೈನ್ಸ್ ಜಂಟಿ ಮಾಲೀಕತ್ವದ ವಿಸ್ತಾರಾ ವಿಮಾನಯಾನ ಸಂಸ್ಥೆಯು ಭಾರತದಲ್ಲಿ ತನ್ನ ಮೊದಲ ಹಾರಾಟ ಆರಂಭಿಸಿದೆ. ಶುಕ್ರವಾರ ಬೆಳಗ್ಗೆ ನವದೆಹಲಿಯಿಂದ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಗೆ ಪ್ರಯಾಣಿಕರನ್ನು ಒಯ್ದಿದೆ. [ಥಂಡಿ ಹಿಡಿದ ವಿಮಾನ ತಳ್ಳಿದ ಪ್ರಯಾಣಿಕರು]
ಈ ಮೂಲಕ ಸರ್ಕಾರಿ ಮಾಲೀಕತ್ವದ ಏರ್ ಇಂಡಿಯಾ ಹಾಗೂ ಖಾಸಗಿ ಸಂಸ್ಥೆ ಜೆಟ್ ಏರ್ವೇಯ್ಸ್ ನಂತರ ವಿಸ್ತಾರಾ ಕಂಪನಿಯು ದೇಶದಲ್ಲಿ ಪೂರ್ಣ ಪ್ರಮಾಣದ ಸೇವೆ ಸಲ್ಲಿಸುವ ಮೂರನೇ ಕಂಪನಿ ಎನ್ನಿಸಿಕೊಂಡಿದೆ.

ಟಾಟಾ ಸಮೂಹವು ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿಯೇ ಈ ಕುರಿತು ಘೋಷಣೆ ಮಾಡಿತ್ತು. 2015ರ ಜನವರಿ 9ರಂದು ದೆಹಲಿಯಿಂದ ಮುಂಬಯಿ ಹಾಗೂ ಅಹಮದಾಬಾದ್ಗೆ ಪ್ರಯಾಣ ಬೆಳೆಸುವುದಾಗಿ ತಿಳಿಸಿತ್ತು. [ಸ್ಪರ್ಧೆಗೆ ಏರ್ ಇಂಡಿಯಾ, ಇದು ಸರ್ಕಾರಿ ಸವಾಲ್]
148 ಸೀಟ್ಗಳ ಏರ್ಬಸ್ : ಪ್ರಸ್ತುತ ವಿಸ್ತಾರಾ ಕಂಪನಿಯು ಎರಡು A320 ಏರ್ಬಸ್ಗಳನ್ನು ಲೀಸ್ ಮೇಲೆ ಪಡೆದಿದ್ದು, ಇವುಗಳಲ್ಲಿ 148 ಸೀಟ್ಗಳಿವೆ. ಇದರಲ್ಲಿ 16 ಬಿಸಿನೆಸ್ ದರ್ಜೆ, 36 ಪ್ರೀಮಿಯಂ ಎಕಾನಮಿ ಹಾಗೂ 96 ಎಕಾನಮಿ ಸೀಟ್ಗಳು.
ಮೊದಲ ವರ್ಷ ನವದೆಹಲಿಯಿಂದ ಗೋವಾ, ಮುಂಬಯಿ, ಬೆಂಗಳೂರು, ಅಹಮದಾಬಾದ್, ಹೈದರಾಬಾದ್, ಚಂಡೀಗಢ, ಶ್ರೀನಗರ, ಜಮ್ಮು ಮತ್ತು ಪಾಟ್ನಾ ನಗರಗಳಿಗೆ ವಿಮಾನಯಾನ ಸೇವೆ ನೀಡುವುದಾಗಿ ವಿಸ್ತಾರಾ ಕಂಪನಿಯು ತಿಳಿಸಿದೆ. [ಏರಿ ಟಿಕೆಟ್ ದರ ಸಮರ, ಏರ್ ಏಷ್ಯಾ ಎಂಟ್ರಿ ಆಫರ್]
ಮೊದಲ ವರ್ಷದಲ್ಲಿ 87 ಹಾರಾಟಗಳನ್ನು ನಡೆಸಲು ಸಂಸ್ಥೆ ಉದ್ದೇಶಿಸಿದ್ದು, ಇದಕ್ಕಾಗಿ 5 ಏರ್ಬಸ್ A320 ಗಳನ್ನು ಲೀಸ್ ಮೇಲೆ ಪಡೆಯಲು ನಿರ್ಧರಿಸಿದೆ. ನಾಲ್ಕನೇ ವರ್ಷಕ್ಕೆ 301 ಹಾರಾಟಗಳನ್ನು ನಡೆಸುವ ಗುರಿ ಹೊಂದಿರುವುದಾಗಿ ವಿಸ್ತಾರಾ ಸಂಸ್ಥೆ ತಿಳಿಸಿದೆ.
-
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ 3 ಜಾಗ ನಿಗದಿ: ಡಿಸಿಎಂ ಡಿ.ಕೆ ಶಿವಕುಮಾರ್ ಅಪ್ಡೇಟ್ಸ್ -
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Anganwadi Workers: ಅಂಗನವಾಡಿ ಕಾರ್ಯಕರ್ತೆಯರ ವೇತನ ಪರಿಷ್ಕರಣೆ: ಲಕ್ಷ್ಮಿ ಹೆಬ್ಬಾಳ್ಕರ್ ಅಪ್ಡೇಟ್ಸ್












Click it and Unblock the Notifications