ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಸ್ಲಿಮರ ಬಂಧನಕ್ಕೆ ಉಲ್ಟಾ ಹೊಡೆದ ಶಿಂದೆ
ನಾನು ಪತ್ರ ಬರೆದಿರೋದು ನಿಜ. ಆದರೆ ಹಾಗಲ್ಲಾ ಹೇಳಿರೋದು. ಮುಸ್ಲಿಂ ಯುವಕರು ಮಾತ್ರವೇ ಅಲ್ಲ. ಭಯೋತ್ಪಾದಕ ಚಟುವಟಿಕೆಗಳಲ್ಲಿ ತಪ್ಪಾಗಿ ಬಂಧಿತರಾದ ಯಾವುದೇ ಸಮುದಾಯದ ಯುವಕರಿಗೂ ಕಿರುಕುಳ ನೀಡಬೇಡಿ ಎಂದು ಆದೇಶಿಸಿರುವುದಾಗಿ ಶಿಂಧೆ ಹೇಳಿದ್ದಾರೆ.
ಪತ್ರ ಭಾರಿ ವಿವಾದಕ್ಕೆ ಕಾರಣವಾಗಿ ವಿಪಕ್ಷಗಳು ಶಿಂದೆ ಮೇಲೆ ದಾಳಿ ನಡೆಸುತ್ತಿದ್ದಂತೆ ಶಿಂದೆ ಇದೀಗ ತಮ್ಮ ವರಸೆ ಬದಲಿಸಿದಂತಿದೆ. 'ಮುಸ್ಲಿಂ ಯುವಕರ ಮೇಲೆ ಕ್ರಮ ಕೈಗೊಳ್ಳಬೇಡಿ ಎಂದು ನಾನು ನಿರ್ದೇಶಿಸಿಲ್ಲ. ವಿಪಕ್ಷಗಳು ಅದನ್ನು ತಪ್ಪಾಗಿ ಅರ್ಥೈಸಿಕೊಂಡಿವೆ. ಮೊದಲ ಎರಡು ಪ್ಯಾರಾಗಳಲ್ಲಷ್ಟೇ ನಾನು ಮುಸ್ಲಿಂ ಎಂಬ ಪದ ಬಳಸಿದ್ದೇನೆ' ಎಂದು ಶಿಂಧೆ ಹೇಳಿದ್ದಾರೆ.
'ಅಷ್ಟಕ್ಕೂ ಈ ಪತ್ರ ನಾನೇಕೆ ಬರೆದೆ. ಎನ್ ಜಿಓಗಳು ಮತ್ತು ಇತರೆ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಪತ್ರ ಬರೆದೆ. ಆದರೆ ಅದರಲ್ಲಿ ಮುಸಲ್ಮಾನರಿಗೆ ಮಾತ್ರ ತೊಂದರೆ ಕೊಡಬೇಡಿ ಎಂದು ನಾನು ಬರೆದಿಲ್ಲ. ರಾಜಕೀಯ ಪಕ್ಷಗಳು ತಪ್ಪಾಗಿ ಅರ್ಥೈಸಿಕೊಂಡವು' ಎಂದು ಸಮಜಾಯಿಷಿ ನೀಡಿದ್ದಾರೆ.
Comments
terrorism arrest jail muslim sushil kumar shinde bomb blast terrorist ಭಯೋತ್ಪಾದನೆ ಪೊಲೀಸ್ ಹೈದರಾಬಾದ್ ಬಾಂಬ್ ಸ್ಫೋಟ ಜೈಲು ಮುಸ್ಲಿಂ
English summary
Terrorism muslims wrongful arrests- Home minister Shinde backtracks. Home minister Sushilkumar Shinde had asked all chief ministers to ensure that no innocent Muslim youth is wrongfully detained in the name of terror. While Mr Shinde faced severe criticism over mentioning “Muslims” in his letter, he said it was not specific to Muslims but what he meant was youths from all minority communities.
Story first published: Friday, October 11, 2013, 8:33 [IST]