ತಿಹಾರ್ ಜೈಲಿನ ಮೇಲೆ ದಾಳಿ ಸಾಧ್ಯತೆ, ಹೆಚ್ಚಿನ ಭದ್ರತೆ
ನವದೆಹಲಿ, ಡಿ. 19 : ನವದೆಹಲಿಯಲ್ಲಿರುವ ತಿಹಾರ್ ಜೈಲಿನ ಮೇಲೆ ಭಯೋತ್ಪಾದಕ ದಾಳಿ ನಡೆಯಬಹುದು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಜೈಲಿನ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಹಲವಾರು ರಾಜಕೀಯ ನಾಯಕರು ಮತ್ತು ಭಯೋತ್ಪಾದಕರು ತಿಹಾರ್ ಜೈಲಿನಲ್ಲಿದ್ದಾರೆ.
ಭಯೋತ್ಪಾದಕ
ಸಂಘಟನೆ
ಲಷ್ಕರ್-ಎ-ತೋಯ್ಬಾ
ತಿಹಾರ್
ಜೈಲಿನಲ್ಲಿರುವ
ತಮ್ಮ
ಸಹಚರರನ್ನು
ಬಂಧಮುಕ್ತಗೊಳಿಸಲು
ಆತ್ಮಹುತಿ
ದಾಳಿ
ನಡೆಸಬಹುದು
ಎಂದು
ಗುಪ್ತಚರ
ಇಲಾಖೆ
ದೆಹಲಿ
ಪೊಲೀಸರಿಗೆ
ಮಾಹಿತಿ
ನೀಡಿದೆ.
ಎಚ್ಚರಿಕೆಯನ್ನು
ಗಂಭೀರವಾಗಿ
ಪರಿಗಣಿಸಲಾಗಿದೆ.
ಈಗಾಗಲೇ ತಿಹಾರ್ ಜೈಲಿಗೆ ಮೂರು ಶ್ರೇಣಿಗಳ ಭದ್ರತೆಯನ್ನು ಒದಗಿಸಲಾಗಿದೆ. ಗುಪ್ತಚರ ಇಲಾಖೆ ವರದಿಗಳ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಮತ್ತಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ದೆಹಲಿ ನಗರದಲ್ಲಿಯೂ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಪೊಲೀಸರು ಕೈಗೊಂಡಿದ್ದು, ಜೈಲಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗಿದೆ. [ಗಣರಾಜ್ಯೋತ್ಸವ : ಸಿಮಿ, ಲಷ್ಕರ್ ದಾಳಿ ಸಾಧ್ಯತೆ]
ಜೈಲಿನಲ್ಲಿರುವ ಕೈದಿಗಳ ಭದ್ರತೆ ದೃಷ್ಟಿಯಿಂದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಐಜಿ ಮುಖೇಶ್ ಪ್ರಸಾದ್ ಹೇಳಿದ್ದಾರೆ. ಹಲವಾರು ಭಯೋತ್ಪಾದಕರು ಮತ್ತು ಪ್ರಭಾವಿ ನಾಯಕರು ತಿಹಾರ್ ಜೈಲಿನಲ್ಲಿದ್ದಾರೆ, ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.
ಅಂದಹಾಗೆ ಹರ್ಯಾಣ ಮಾಜಿ ಮುಖ್ಯಮಂತ್ರಿ ಓಂಪ್ರಕಾಶ್ ಚೌತಾಲಾ, ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ಸೇರಿದಂತೆ ರಾಜಕಾರಣಿಗಳು, ಉದ್ಯಮಿಗಳು, ಉಗ್ರರು ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.ಸಂಸತ್ ಭವನದ ದಾಳಿಯ ರೂವಾರಿ ಅಫ್ಜಲ್ ಗುರುವನ್ನು ಈ ಜೈಲಿನಲ್ಲಿಯೇ ನೇಣಿಗೇರಿಸಲಾಗಿತ್ತು.