ಬಲಪಂಥೀಯರ ವಿರೋಧಕ್ಕೆ ಹೆದರಿ ಟಿಎಂ ಕೃಷ್ಣ ಗಾನಕಚೇರಿ ರದ್ದು
ನವದೆಹಲಿ, ನವೆಂಬರ್ 15: ಜನಪ್ರಿಯ ಶಾಸ್ತ್ರೀಯ ಸಂಗೀತ ಗಾಯಕ ಟಿಎಂ ಕೃಷ್ಣಪ್ಪ ಅವರಿಗೆ ಬಲಪಂಥೀಯರ ಬೆದರಿಕೆ, ಪ್ರತಿಭಟನೆಯ ಬಿಸಿ ತಟ್ಟಿದೆ. ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಆಯೋಜನೆಯ ಸಂಗೀತ ಕಾರ್ಯಕ್ರಮ ರದ್ದು ಪಡಿಸಲಾಗಿದೆ.
ಈ ಕುರಿತಂತೆ ಎಎಐ ಹಾಗೂ SPICMACAY ಸ್ಪಷ್ಟನೆ ನೀಡಿದ್ದು, ಡ್ಯಾನ್ಸ್ ಅಂಡ್ ಮ್ಯೂಸಿಕ್ ಇನ್ ದಿ ಪಾರ್ಕ್ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದೆ. ನವೆಂಬರ್ 17 ಹಾಗೂ 18ರಂದು ಯಾವುದೇ ಪೋಗ್ರಾಂ ಇರುವುದಿಲ್ಲ. ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದಿದೆ.
ಟಿಎಂ ಕೃಷ್ಣ ಅವರಲ್ಲದೆ, ಸೋನಾಲ್ ಮಾನ್ ಸಿಂಗ್, ಪ್ರಿಯದರ್ಶಿನಿ ಗೋವಿಂದ್ ಹಾಗೂ ಶಹೀದ್ ಪರ್ವೇಜ್ ಖಾನ್ ಅವರು ಈ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಆಹ್ವಾನಿಸಲಾಗಿತ್ತು.

ಮ್ಯಾಗ್ಸೆಸ್ಸೆ ಪ್ರಶಸ್ತಿ ವಿಜೇತ ಕೃಷ್ಣ ಅವರು ಯೇಸುಕ್ರಿಸ್ತನ ಸ್ತುತಿ ಹಾಗೂ ಅಲ್ಲಾಹ್ ಕುರಿತು ಕೀರ್ತನೆಗಳನ್ನು ಶಾಸ್ತ್ರೀಯ ಸಂಗೀತ ಶೈಲಿಯಲ್ಲಿ ಸಂಯೋಜಿಸಿದ್ದರು.
ಆಗಸ್ಟ್ ತಿಂಗಳಿನಲ್ಲಿ ಕೃಷ್ಣ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಕೃಷ್ಣ ಅವರ ಸಂಯೋಜನೆಯ ಅಲ್ಲಾಹ್ , ಕ್ರಿಸ್ತ ಸ್ತುತಿಗಳು ವಾಟ್ಸಾಪ್ ನಲ್ಲಿ ಹಂಚಿಕೆಯಾಗಿ ಜನಪ್ರಿಯಗೊಂಡಿತ್ತು. ಪ್ರತಿಭಟನೆ, ಬೆದರಿಕೆಗೆ ಜಗ್ಗದ ಕೃಷ್ಣ ಅವರು ಪ್ರತಿ ತಿಂಗಳು ಈ ರೀತಿ ಸ್ತುತಿಗಳನ್ನು ಬಿಡುಗಡೆ ಮಾಡುವುದಾಗಿ ಟ್ವೀಟ್ ಮಾಡಿದ್ದರು.
#AAI cordially invites you to a Carnatic vocal performance by @tmkrishna who will be accompanied by R.K. Shriramkumar on violin, Praveen Sparsh on Mridangam & Anirudh Athreya on Kanjira - on 17th November in the 2nd edition of 'Dance & Music in the Park' at Nehru Park, Delhi. pic.twitter.com/8ZiUd4n2xC
— Airports Authority of India (@AAI_Official) November 10, 2018
ಚೆನ್ನೈನಲ್ಲಿ ಜನಿಸಿರುವ ಟಿಎಂ ಕೃಷ್ಣ ಅವರು ಮದ್ರಾಸ್ ವಿವಿನಿಂದ ಬಿ.ಎ(ಎಕಾನಾಮಿಕ್ಸ್) ಗಳಿಸಿದ್ದಾರೆ. ತಮ್ಮ 6ನೇ ವಯಸ್ಸಿನಲ್ಲೇ ಸಂಗೀತ ಕ್ಷೇತ್ರಕ್ಕೆ ಪರಿಚಿತರಾದ ಕೃಷ್ಣ ಅವರು ವಿದ್ವಾನ್ ಸೀತಾರಾಮ ಶರ್ಮ, ಶೆಮ್ಮಂಗುಡಿ ಶ್ರೀನಿವಾಸರ್, ಚಿಂಗ್ಲ್ ಪುಟ್ ರಂಗನಾಥನ್ ಅವರಿಂದ ಸಂಗೀತ ಪಾಠ ಕಲಿತರು. Carnatic Music - Passing on an Inheritance, 'A Southern Music - The Karnatik Story and 'Reshaping Art'. ಎಂಬ ಕೃತಿಗಳನ್ನು ರಚಿಸಿದ್ದಾರೆ.
Considering the vile comments and threats issued by many on social media regarding Karnatik compositions on Jesus, I announce here that I will be releasing one karnatik song every month on Jesus or Allah.
— T M Krishna (@tmkrishna) August 9, 2018
T.M. Krishna #art #religion #jesus #allah #communalism #freedom #music
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications