ಉಕ್ರೇನ್ನಿಂದ ತಾಯಿನಾಡಿಗೆ: 250 ಭಾರತೀಯರೊಂದಿಗೆ ದೆಹಲಿಗೆ ಬಂದಿಳಿದ 2ನೇ ವಿಮಾನ
ನವದೆಹಲಿ ಫೆಬ್ರವರಿ 27: ಉಕ್ರೇನ್ನಿಂದ ಸ್ಥಳಾಂತರಿಸಲು 250 ಭಾರತೀಯರನ್ನು ಹೊತ್ತ ಎರಡನೇ ವಿಮಾನ ರೊಮೇನಿಯಾದ ಬುಕಾರೆಸ್ಟ್ನಿಂದ ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಯಿತು. ಏರ್ ಇಂಡಿಯಾ (AI)-192 ವಿಶೇಷ ವಿಮಾನ ಸೇವೆಯು ಬೆಳಗ್ಗೆ 3 ಗಂಟೆಗೆ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಆಪರೇಷನ್ ಗಂಗಾ' ಅಡಿಯಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಯಶಸ್ವಿಯಾಗಿ ಕರೆತಂದಿದೆ. ಈ ವಿಮಾನದಲ್ಲಿ 25 ಮಂದಿ ಕನ್ನಡಿಗರು ಇದ್ದಾರೆನ್ನಲಾಗಿದೆ. ಈ ವೇಳೆ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಳೀಧರನ್ ಅವರು ಉಕ್ರೇನ್ನಿಂದ ಬುಕಾರೆಸ್ಟ್ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಿದ ಭಾರತೀಯರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.
ಎರಡನೇ ವಿಮಾನದಲ್ಲಿ ಉಕ್ರೇನ್ನಿಂದ ಹಿಂದಿರುಗಿದ ಭಾರತೀಯ ವಿದ್ಯಾರ್ಥಿಯೊಬ್ಬರು, ಕೀವ್ನ ಹಲವಾರು ಸ್ಥಳಗಳಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ಅದರ ನಾಗರಿಕರು ತಮ್ಮ ದೇಶವನ್ನು ಉಳಿಸಲು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಉಕ್ರೇನ್ನಿಂದ
ಬರುವ
ಕನ್ನಡಿಗರಿಗೆ
ವಸತಿ,
ಸಾರಿಗೆ
ವ್ಯವಸ್ಥೆ:
ಸಿಎಂ
ಬಸವರಾಜ
ಬೊಮ್ಮಾಯಿ
"ಉಕ್ರೇನ್ನ
ಅನೇಕ
ಸ್ಥಳಗಳಲ್ಲಿ
ಪರಿಸ್ಥಿತಿ
ಕೆಟ್ಟದಾಗಿದೆ,
ನಾಗರಿಕರು
ತಮ್ಮ
ದೇಶವನ್ನು
ಉಳಿಸಲು
ಶಸ್ತ್ರಾಸ್ತ್ರಗಳನ್ನು
ತೆಗೆದುಕೊಂಡಿದ್ದಾರೆ.
ನಾನು
ಉಳಿದುಕೊಂಡಿದ್ದ
ಸ್ಥಳದಲ್ಲಿ
ಸಂಗ್ರಹಣೆಯನ್ನು
ಪ್ರಾರಂಭಿಸಲಾಯಿತು"ಎಂದು
ಉಕ್ರೇನ್ನಿಂದ
ಹಿಂದಿರುಗಿದ
ವಿದ್ಯಾರ್ಥಿಯೊಬ್ಬರು
ಸುದ್ದಿ
ಸಂಸ್ಥೆ
ANI
ಗೆ
ಉಲ್ಲೇಖಿಸಿದ್ದಾರೆ.
The second evacuation flight from Romanian capital Bucharest carrying 250 Indian nationals who were stranded in Ukraine landed at the Delhi airport in the early hours of Sunday. #OperationGanga pic.twitter.com/vjKHRqsYF7
— ANI (@ANI) February 26, 2022
ಉಕ್ರೇನ್ನಿಂದ ಹಿಂದಿರುಗಿದ ಮತ್ತೊಬ್ಬ ವಿದ್ಯಾರ್ಥಿ, "ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಆದರೆ ಉಕ್ರೇನ್ನ ಇತರ ಪ್ರದೇಶಗಳಿಗೆ ಹೋಲಿಸಿದರೆ ನಾವು ಉಳಿದುಕೊಂಡಿರುವ (ರೊಮೇನಿಯಾ ಗಡಿಯ ಬಳಿ) ಪರಿಸ್ಥಿತಿ ಉತ್ತಮವಾಗಿದೆ" ಎಂದು ಹೇಳಿದರು. "ಉಕ್ರೇನ್ ವಿರುದ್ಧದ ದಾಳಿಯಿಂದಾಗಿ ಅನೇಕ ವಿದ್ಯಾರ್ಥಿಗಳು ಬಂಕರ್ಗಳಲ್ಲಿ ತಂಗಿದ್ದಾರೆ. ಪರಿಸ್ಥಿತಿ ಕಷ್ಟಕರವಾಗಿದೆ. ಸಮಯಕ್ಕೆ ಸರಿಯಾಗಿ ನಮ್ಮನ್ನು ಸ್ಥಳಾಂತರಿಸಿದ ಸರ್ಕಾರಕ್ಕೆ ಧನ್ಯವಾದಗಳು, "ಎಂದು ಇನ್ನೊಬ್ಬ ವಿದ್ಯಾರ್ಥಿ ಹೇಳಿದರು.
ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಕಲಿಯುತ್ತಿರುವ ಸುಮಾರು 15,000 ಭಾರತೀಯ ವಿದ್ಯಾರ್ಥಿಗಳು ಇನ್ನೂ ಯುದ್ಧ ಪೀಡಿತ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ಇದಕ್ಕೂ ಮೊದಲು, ಶನಿವಾರ ಸಂಜೆ ರೊಮೇನಿಯಾದಿಂದ ಮೊದಲ ಏರ್ ಇಂಡಿಯಾ ವಿಮಾನದ ಮೂಲಕ 219 ಭಾರತೀಯರು ನವದೆಹಲಿಗೆ ಆಗಮಿಸಿದ್ದರು.
ಕಳೆದ ಕೆಲವು ದಿನಗಳಲ್ಲಿ 4000 ಭಾರತೀಯ ಪ್ರಜೆಗಳು ಈಗಾಗಲೇ ಉಕ್ರೇನ್ ತೊರೆದಿದ್ದಾರೆ. ದೆಹಲಿಯ ಎಂಇಎ ನಿಯಂತ್ರಣ ಕೊಠಡಿಗೆ 980 ಕರೆಗಳು ಮತ್ತು 850 ಇಮೇಲ್ಗಳು ಬಂದಿವೆ ಎಂದು ಕೂಡಾ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶ್ರಿಂಗ್ಲಾ ತಿಳಿಸಿದ್ದಾರೆ. ಆನ್ಲೈನ್ ನೋಂದಣಿಯ ಆಧಾರದ ಮೇಲೆ 20,000 ಭಾರತೀಯ ಪ್ರಜೆಗಳು ಉಕ್ರೇಕ್ನಲ್ಲಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷ್ ವಿ ಶ್ರಿಂಗ್ಲಾ ತಿಳಿಸಿದ್ದಾರೆ.ಮಂಗಳೂರು, ರಾಮನಗರ, ಬೆಳಗಾವಿ, ಬಾಗಲಕೋಟೆ, ಶಿವಮೊಗ್ಗ, ಕೊಪ್ಪಳ, ಧಾರವಾಡ ಸೇರಿದಂತೆ ಉಕ್ರೇನ್ನಲ್ಲಿ ಯುದ್ಧ ಪೀಡಿತ ಪ್ರದೇಶದಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಕೂಡಾ ಸಿಲುಕಿದ್ದಾರೆ.
ಮಂಗಳೂರಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿರುವ ಮಾಹಿತಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಮಂಗಳೂರಿನ ದೇರಬೈಲ್ ನಿವಾಸಿ ಅನೈನಾ ಮತ್ತು ಪಡೀಲ್ನ ಶಾಂತಿನಗರ ನಿವಾಸಿ ಕ್ಲಾಟನ್ ಸಿಲುಕಿದ್ದಾರೆ. ದಾವಣಗೆರೆಯಿಂದ ಉಕ್ರೇನ್ಗೆ ವಿದ್ಯಾಭ್ಯಾಸಕ್ಕೆ ತೆರಳಿದ್ದ ನಾಲ್ವರು ವಿದ್ಯಾರ್ಥಿಗಳು ಸಿಲುಕಿ ಹಾಕಿಕೊಂಡಿದ್ದಾರೆ. ಉಕ್ರೇನ್ನಲ್ಲಿರುವ ಎಲ್ಲ ನಾಲ್ವರು ಸದ್ಯಕ್ಕೆ ಸುರಕ್ಷಿತವಾಗಿದ್ದಾರೆ. ಶಿವಮೊಗ್ಗದ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ ದೇಶದಲ್ಲಿದ್ದು, ಆತಂಕಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳ ಪೋಷಕರು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿಯಾಗಿ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಹಿಂದಕ್ಕೆ ಕರೆಯಿಸಿಕೊಳ್ಳುವ ಕುರಿತು ಮನವಿ ಮಾಡಿದ್ದಾರೆ.