ಸಿದ್ಧಗಂಗಾ ಶ್ರೀಗಳಿಗೆ ಜನ್ಮದಿನದಂದು ಮೋದಿ ಅಕ್ಷರ ನಮನ
ನವದೆಹಲಿ, ಏಪ್ರಿಲ್ 01: ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ(1 ಏಪ್ರಿಲ್ 1907 - 21 ಜನವರಿ 2019) ಯವರ ಜನ್ಮದಿನಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡುವ ಮೂಲಕ ಸ್ವಾಮೀಜಿಯವರಿಗೆ ನುಡಿನಮನ ಸಲ್ಲಿಸಿದ್ದಾರೆ.
"ಡಾ.ಶ್ರೀ ಶ್ರೀ ಶಿವಕುಮಾರ ಸ್ವಾಮಿ ಅವರು ಕೋಟ್ಯಂತರ ಜನರ ಮನಸು, ಹೃದಯಗಳಲ್ಲಿ ಉಸಿರಾಡುತ್ತಲೇ ಇದ್ದಾರೆ. ಈ ದಿನ ಅವರ ಜನ್ಮ ದಿನ. ಇಂಥ ಸಂದರ್ಭದಲ್ಲಿ ಅವರನ್ನು ಆತ್ಮಪೂರ್ವಕವಾಗಿ ಸ್ಮರಣೆ ಮಾಡುತ್ತೇನೆ. ಸಿದ್ದಗಂಗಾ ಮಠದ ಮೂಲಕ ಹತ್ತಾರು ಲಕ್ಷ ಮಂದಿಯ ಬದುಕಿಗೆ ಬೆಳಕಾದ, ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ಚೇತನ ಶಿವಕುಮಾರ ಸ್ವಾಮಿಗಳು.
ವರ್ಷದ ಮೊದಲ ಮನ್ ಕೀ ಬಾತ್ ನಲ್ಲಿ ಶಿವಕುಮಾರ ಸ್ವಾಮೀಜಿ, ನೇತಾಜಿಯನ್ನು ನೆನೆದ ಮೋದಿ
ಬಡತನ- ಹಸಿವು ಹೋಗಲಾಡಿಸಲು, ಜನರಿಗೆ ಉತ್ತಮ ಆರೋಗ್ಯ, ಶಿಕ್ಷಣ ದೊರೆಯಲು ಅವರು ಮಾಡಿದ ಸೇವೆ ಅನುಪಮವಾದದ್ದು, ಅನರ್ಘ್ಯವಾದದ್ದು.
ಆ ಅದ್ಭುತ ಚೇತನಕ್ಕೆ ಮತ್ತೊಮ್ಮೆ ಶಿರ ಬಾಗಿ ನಮಿಸುತ್ತೇನೆ"
ಎಂದು ಮೋದಿ ಟ್ವೀಟ್ ಮಾಡಿದ್ದು, ಶ್ರೀಗಳ ಸಾಮಾಜಿಕ ಕೊಡುಗೆಯನ್ನು ಸ್ಮರಿಸಿದ್ದಾರೆ.
I bow to His Holiness Dr. Sree Sree Sree Sivakumara Swamigalu on his Jayanti.
— Chowkidar Narendra Modi (@narendramodi) April 1, 2019
He lives in our hearts and minds.
His noble ideals and ideas motivate lakhs of people. pic.twitter.com/mss8sWTnhJ
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
111 ವರ್ಷ ವಯಸ್ಸಿನ ಶ್ರೀಗಳು ವಯೋಸಹಜ ಅನಾರೋಗ್ಯದಿಂದ ಜ.21 ರಂದು ಇಹಲೋಕ ತ್ಯಜಿಸಿದ್ದರು. ಶ್ರಿಗಳ ಅಗಲಿಕೆಗೆ ಸಂತಾಪ ಸೂಚಿಸಿ ಮೋದಿಯವರು ಅಂದೂ ಸಾಲು ಸಾಲು ಟ್ವೀಟ್ ಮಾಡಿದ್ದರಾದರೂ, ಅಂತಿಮ ದರ್ಶನಕ್ಕೆ ಬರಲಿಲ್ಲ ಎಂಬುದು ಸಾಕಷ್ಟು ಚರ್ಚೆಗೊಳಗಾಗಿತ್ತು. ಅಲ್ಲದೆ, ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ನೀಡಬಹುದು ಎಂಬ ಊಹೆಯೂ ಸುಳ್ಳಾಗಿದ್ದರಿಂದ ಶ್ರೀಗಳ ಅಭಿಮಾನಿಗಳು ಮೋದಿ ಸರ್ಕಾರದ ವಿರುದ್ಧ ಹರಿಯಾಯ್ದಿದ್ದರು.