ಮಧ್ಯ ಏಷ್ಯಾ, ರಷ್ಯಾ, ಬ್ರಿಕ್ಸ್ ಸಭೆ, ಮೋದಿ ಟೂರ್ ಗೈಡ್
ನವದೆಹಲಿ, ಜುಲೈ 06: ಮಧ್ಯ ಏಷ್ಯಾ ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಂಟು ದಿನಗಳ ಪ್ರವಾಸದಲ್ಲಿ ಬ್ರಿಕ್ಸ್, ಎಸ್ಸಿಒ ಸಮಾವೇಶ, ಸೇರಿದಂತೆ ಹಲವು ಮಹತ್ವದ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಜ್ಬೇಕಿಸ್ತಾನದಿಂದ ಮೋದಿ ಅವರ ಪ್ರವಾಸ ಆರಂಭವಾಗಲಿದೆ. ಮಂಗಳವಾರ ಕಜಕಿಸ್ತಾನಕ್ಕೆ ಭೇಟಿ ನೀಡುವರು. ಜು.8 ರಂದು ರಷ್ಯಾ, ಜು.10-11 ರಂದು ತುರ್ಕೇನಿಸ್ತಾನ, ಜು.11-12 ರಂದು ಕಿರ್ಜಿಸ್ತಾನ್ ಹಾಗೂ ಜು.12-13 ರಂದು ತಜಿಕಿಸ್ಥಾನ್ ದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಆರ್ಥಿಕ ಅಭಿವೃದ್ಧಿ ಮತ್ತು ಇಂಧನ ಉತ್ಪಾದನೆಗೆ ಸಂಬಂಧಿಸಿದಂತೆ ಒಪ್ಪಂದಗಳಿಗೆ ಸಹಿ ಹಾಕುವುದು, ಬ್ರಿಕ್ಸ್ ಸಭೆಯಲ್ಲಿ ಪಾಲ್ಗೊಳ್ಳುವುದು, ಹಾಗೂ ಶಾಂಘಾಯ್ ಸಹಕಾರ ಸಂಘಟನೆಗೆ ಹಾಜರಾಗುವುದು ಸೇರಿದಂತೆ ಹಲವು ಮಹತ್ವದ ಕಾರ್ಯಕ್ರಮಗಳು ಪ್ರಧಾನಿ ನರೇಂದ್ರ ಮೋದಿ ಅವರ ಪ್ರವಾಸದ ವೇಳಾಪಟ್ಟಿಯಲ್ಲಿದೆ.

ರಷ್ಯಾದಲ್ಲಿ ಎಸ್ಸಿಒ ಸಮಾವೇಶ (ಶಾಂಘೈ ಸಹಕಾರ ಸಂಘಟನೆಯ ಸಮಾವೇಶ) ಜುಲೈ 8 ರಿಂದ 10ರ ತನಕ ನಡೆಯಲಿದೆ. ಈ ಸಂದರ್ಭ ಚೀನಾ, ರಷ್ಯಾ, ಕಜಕಿಸ್ತಾನ, ಕಿರ್ಜಿಸ್ತಾನ, ಉಜಬೆಕಿಸ್ತಾನ ಮತ್ತು ತಜಿಕಿಸ್ತಾನಗಳ ಒಕ್ಕೂಟಕ್ಕೆ ಭಾರತವೂ ಸೇರ್ಪಡೆಗೊಳ್ಳುವ ಕಾರ್ಯಕ್ರಮವಿದೆ.
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ಸೌತ್ ಆಫ್ರಿಕಾ ದೇಶಗಳ ಬ್ರಿಕ್ಸ್ (ಬಿಆರ್ಐಸಿಎಸ್) ಸಮಾವೇಶವು ದೇಶದ ಅಭಿವೃದ್ಧಿ, ಹೊರದೇಶಗಳೊಂದಿಗಿನ ಬಾಂಧವ್ಯ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಬ್ರಿಕ್ಸ್ ಸಮಾವೇಶದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಬ್ರೆಜಿಲಿಯನ್ ಅಧ್ಯಕ್ಷೆ ದಿಲ್ಮಾ ರೊಸೆಫ್, ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ದಕ್ಷಿಣ ಆಫ್ರಿಕಾದ ಜಾಕಬ್ ಜುಮಾ ಅವರನ್ನು ಮೋದಿ ಭೇಟಿ ಮಾಡಲಿದ್ದಾರೆ. ಶಾಂಘೈ ಸಹಕಾರ ಸಂಘಟನೆಗಳ ಸಭೆಯಲ್ಲಿ ಪಾಕಿಸ್ತಾನದ ನವಾಜ್ ಷರೀಫ್ ಅವರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ.
* ಉಜ್ಬೇಕಿಸ್ತಾನದಲ್ಲಿ ತಾಷ್ಕೆಂಟ್ ನಲ್ಲಿ ಹಿಂದಿ ವಿದ್ಯಾರ್ಥಿಗಳ ಜೊತೆ ಮೋದಿ ಅವರ ಸಂವಾದ ಕಾರ್ಯಕ್ರಮವಿದೆ.
* ಕಜಕಿಸ್ತಾನ್: ನಜರ್ ಬಯೆವ್ ವಿವಿಯಲ್ಲಿ ಭಾಷಣ, ಭಾರತ-ಕಜಕ್ ಸ್ತಾನ್ ಸೆಂಟರ್ ಫಾರ್ ಎಕ್ಸಲೆನ್ಸಿ ಭಾರತದ ಪರಮ್ ಸೂಪರ್ ಕಂಪ್ಯೂಟರ್ ವೀಕ್ಷಣೆ.
* ಅಲ್ಮಟಿಯಲ್ಲಿ ವಿವಿಧ ಸಂಸ್ಥೆಗಳ ಸಿಇಒಗಳ ಜೊತೆ ಮೋದಿ ಸಂವಾದ.
* ತುರ್ಕ್ ಮೇನಿಸ್ತಾನದಲ್ಲಿ ಸಾಂಪ್ರದಾಯಿಕ ಔಷಧ ಹಾಗೂ ಯೋಗ ಕೇಂದ್ರ ಉದ್ಘಾಟನೆ.
* ಕಿರ್ಜಿಸ್ತಾನ್: ಇ ಆರೋಗ್ಯ ಯೋಜನೆ ಬಿಷ್ಕೆಕ್ ನಲ್ಲಿ ಆಸ್ಪತ್ರೆ ಜೊತೆಗೆ ಭಾರತದ ಆಸ್ಪತ್ರೆ ಜೊತೆ ಸಂಪರ್ಕ.
* ತಜಕಿಸ್ತಾನ್: ಅಧ್ಯಕ್ಷ ಎಮೊಮಲಿ ರೊಹ್ಮನ್ ಜೊತೆ ಮಾತುಕತೆ ಹಾಗೂ ಇನ್ನಿತರ ಕಾರ್ಯಕ್ರಮ. (ಐಎಎನ್ ಎಸ್)
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ












Click it and Unblock the Notifications