ನಿರ್ಭಯಾ ಪ್ರಕರಣ: ಪವನ್ ಗುಪ್ತಾ ಕ್ಷಮಾಧಾನ ಅರ್ಜಿ ವಜಾ
ನವದೆಹಲಿ, ಮಾರ್ಚ್ 2 : ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿದ್ದಾರೆ.
ಸುಪ್ರೀಂಕೋರ್ಟ್
ಕೂಡ
ಮರಣದಂಡನೆಗೆ
ತಡೆಕೋರಿ
ಸಲ್ಲಿಸಿದ್ದ
ಕ್ಯುರೇಟಿವ್
ಅರ್ಜಿಯನ್ನು
ವಜಾಗೊಳಿಸಿತ್ತು.
ಅದಾದ
ಬಳಿಕ
ರಾಷ್ಟ್ರಪತಿಗೆ
ಕ್ಷಮಾಧಾನ
ಅರ್ಜಿ
ಸಲ್ಲಿಸಿದ್ದರು.
2012ರ
ಮೇನಲ್ಲಿ
ಸುಪ್ರೀಂಕೋರ್ಟ್
ಕೂಡ
ಮರಣ
ದಂಡನೆ
ಶಿಕ್ಷೆ
ಎತ್ತಿ
ಹಿಡಿದಿತ್ತು.
ನಿರ್ಭಯಾ ಆರೋಪಿ ಪವನ್ಗುಪ್ತಾ ಕ್ಷಮಾಧಾನ ಕೋರಿ ರಾಷ್ಟ್ರಪತಿಗೆ ಅರ್ಜಿ
ಮರಣ ದಂಡನೆಯನ್ನು ಪ್ರಶ್ನಿಸಿ ನಾಲ್ವರು ಅಪರಾಧಿಗಳು ಒಬ್ಬೊಬ್ಬರಾಗಿ ಅರ್ಜಿ ಸಲ್ಲಿಸಿದ್ದ ಕಾರಣ ಮರಣ ದಂಡನೆಯಿಂದ ಪಾರಾಗಲು ಹಲವು ಕಾನೂನಿನ ಮಾರ್ಗಗಳನ್ನು ಅನುಸರಿಸುತ್ತಿರುವ ಕಾರಣ ಮರಣದಂಡನೆ ವಿಳಂಬವಾಗುತ್ತಿದೆ.
ನಾಲ್ವರು ಅಪರಾಧಿಗಳಿಗೆ ನಾಳೆ ಬೆಳಗ್ಗೆ 6 ಗಂಟೆಗೆ ನಿಗದಿಯಾಗಿರುವ ಮರಣ ದಂಡನೆ ಶಿಕ್ಷೆಯಲ್ಲಿ ಯಾವುದೇ ವಿಳಂಬವಾಗುವುದಿಲ್ಲ ಎನ್ನಲಾಗುತ್ತಿದೆ.
ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನುಳಿದ ಮೂವರು ಅಪರಾಧಿಗಳಾದ ಮುಖೇಶ್ ಕುಮಾರ್ , ವಿನಯ್ ಶರ್ಮಾ, ಹಾಗೂ ಅಕ್ಷಯ್ ಠಾಕೂರ್ ಅವರ ಕ್ಷಮಾಧಾನ ಅರ್ಜಿಯನ್ನು ರಾಷ್ಟ್ರಪತಿಗಳು ಈಗಾಗಲೇ ವಜಾಗೊಳಿಸಿದ್ದಾರೆ.
2012ರ ಡಿಸೆಂಬರ್ 16ರಂದು ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಫೆ.12ರಂದು ಹೊಸದಾಗಿ ಡೆತ್ ವಾರಂಟ್ ಹೊರಡಿಸಿ ಮಾ.3 ರಂದು ಬೆಳಗ್ಗೆ 6 ಗಂಟೆಗೆ ಮರಣ ದಂಡನೆ ವಿಧಿಸುವಂತೆ ತೀರ್ಪು ನೀಡಿತ್ತು.