ಸಂಸದರಿಗೆ 100% ಸ್ಯಾಲರಿ ಹೆಚ್ಚಳ! ಮೊಮ್ಮಕ್ಕಳಿಗೂ ಉಡುಗೊರೆ
ನವದೆಹಲಿ, ಜು.2: ಸಂಸತ್ತಿನ ಕ್ಯಾಂಟೀನ್ ಊಟದ ರೇಟ್ ನೋಡಿದರೆ ಜನಸಾಮಾನ್ಯರ ಹುಬ್ಬೇರುತ್ತಿತ್ತು. ಈಗ ಸಂಸದರಿಗೆ ಶೇ 100 ಸಂಬಳ ಏರಿಕೆಯಾಗುವ ಸುದ್ದಿ ಬಂದಿದೆ. ಜೊತೆಗೆ ಸಂಸದರ ಮಕ್ಕಳು, ಮೊಮ್ಮಕ್ಕಳಿಗೂ ಉಡುಗೊರೆ ನೀಡುವ ಶಿಫಾರಸ್ಸನ್ನು ಜಂಟಿ ಸದನ ಸಮಿತಿ ಸಿದ್ಧಪಡಿಸಿದೆ.
ಬಿಜೆಪಿಯ ಬೆಂಕಿ ಚೆಂಡು ಸಂಸದ ಯೋಗಿ ಆದಿತ್ಯಾನಾಥ್ ನೇತೃತ್ವದ ಜಂಟಿ ಸಮಿತಿ ಒಟ್ಟಾರೆ 60ಕ್ಕೂ ಅಧಿಕ ಶಿಫಾರಸುಗಳನ್ನು ಸಿದ್ಧಪಡಿಸಿ ವರದಿ ತಯಾರಿಸಿದೆ. ಮಾಜಿ ಸಂಸದರ ಪಿಂಚಣಿಯನ್ನು ಸಹ ಶೇ.75ರಷ್ಟು ಏರಿಸಲು ಸಮಿತಿ ವರದಿಯಲ್ಲಿ ತಿಳಿಸಿದೆ. ಸರ್ಕಾರ ಈ ವರದಿಯನ್ನು ಒಪ್ಪಿದ್ದೇ ಆದರೆ ಸಂಸದರು ತಿಂಗಳಿಗೆ ಸುಮಾರು 1 ಲಕ್ಷ ರೂ.ದಷ್ಟು ಸಂಬಳ ಪಡೆಯಲಿದ್ದಾರೆ.[ಸಂಸದರಿಗೆ 4 ರೂಪಾಯಿಗೆ ಭರ್ಜರಿ ಊಟ!]
ಸಂಬಳ ಏರಿಕೆಯ ಕುರಿತು ಕೇಂದ್ರ ಸರ್ಕಾರ ಶಾಸಕರ ಸದನ ಸಮಿತಿಯೊಂದನ್ನು ರಚಿಸಿ ವರದಿ ನೀಡಲು ಆದೇಶಿಸಿತ್ತು. ಅದರನ್ವಯ ಸಮಿತಿ ತನ್ನ ವರದಿಯನ್ನು ಗುರುವಾರ ಸಲ್ಲಿಸಿದೆ. [ಕರ್ನಾಟಕದ ಶಾಸಕರ ಸಂಬಳ ಎಷ್ಟು ಗೊತ್ತಾ?]

* ಬಿಜೆಪಿ ಸಂಸದ ಯೋಗಿ ಆದಿತ್ಯಾನಾಥ್ ನೇತೃತ್ವದ ಜಂಟಿ ಸದನ ಸಮಿತಿಯಿಂದ ಶಿಫಾರಸು.
* ಮಾಜಿ ಸಂಸದರ ಪಿಂಚಣಿ ಮೊತ್ತ 20,000 ರು ನಿಂದ 50,000 ರು ಗೆ ಏರಿಕೆ.
* ವೇತನ ಆಯೋಗ ಪರಿಷ್ಕರಣೆಯಂತೆ ಸಂಸದರ ಸಂಬಳ ಏರಿಕೆಗೆ ಕ್ರಮ.
* ಸಂಸತ್ ಅಧಿವೇಶನದ ಸಮಯದಲ್ಲಿ ದಿನಭತ್ಯೆ ಪ್ರತಿ ಸಂಸದರಿಗೆ 2,000 ರು ನೀಡಬೇಕು.
* ವಾರ್ಷಿಕವಾಗಿ 20 ರಿಂದ 25 ಬಾರಿ ಉಚಿತ ವಿಮಾನಯಾನಕ್ಕೆ ಅವಕಾಶ.
* ಪರ್ಸನಲ್ ಸೆಕ್ರೆಟರಿಗಳಿಗೂ ಎಸಿ ಫಸ್ಟ್ ಕ್ಲಾಸ್ ಟಿಕೆಟ್. [ಕೇಂದ್ರ ಬಜೆಟ್ 2015-16: ಯಾವುದು ಏರಿಕೆ? ಯಾವ್ದು ಇಳಿಕೆ?]
* ಆರೋಗ್ಯ ಸಂಬಂಧಿತ ಸೌಲಭ್ಯಗಳು ಸಂಸದರಿಗಷ್ಟೇ ಅಲ್ಲದೆ, ಅವರ ಮಕ್ಕಳು, ಮೊಮ್ಮಕ್ಕಳಿಗೂ ತಲುಪಬೇಕು.
* 2010ರಿಂದ ಸಂಸದರ ಸಂಬಳದಲ್ಲಿ ಪರಿಷ್ಕರಣೆ ಮಾಡಲಾಗಿಲ್ಲ.
* ಸದ್ಯದ ಮಾಹಿತಿ ಪ್ರಕಾರ ಸಂಸದರ ವರಮಾನ ಭತ್ಯೆ ಸೇರಿ ಪ್ರತಿ ತಿಂಗಳಿಗೆ 1.4 ಲಕ್ಷ ರು ನಷ್ಟಿದೆ.
(ಒನ್ ಇಂಡಿಯಾ ಸುದ್ದಿ)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications