ನಿಮ್ಮ ಕ್ಷೇತ್ರದ ಶಾಸಕ, ಸಂಸದರ ಕಾರ್ಯಕ್ಕೆ ಅಂಕ ನೀಡಲೊಂದು ಆ್ಯಪ್
ನವದೆಹಲಿ, ಆಗಸ್ಟ್ 24: ನಿಮ್ಮ ಕ್ಷೇತ್ರದ ಶಾಸಕ ಅಥವಾ ಸಂಸದನ ಕಾರ್ಯವನ್ನು ಮೌಲ್ಯಮಾಪನ ಮಾಡಲು ಆಪ್ ಒಂದು ಬಂದಿದೆ. ಅದುವೇ 'ನೇತಾ' (Neta app) ಈ ಆ್ಯಪ್ ಮೂಲಕ ನಿಮ್ಮ ಕ್ಷೇತ್ರದ ಶಾಸಕ ಅಥವಾ ಸಂಸದನಿಗೆ ಅಂಕಗಳನ್ನೂ ನೀಡಬಹುದು.
ಇಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ದೆಹಲಿಯಲ್ಲಿ 'ನೇತಾ ಆ್ಯಪ್' ಬಿಡುಗಡೆ ಮಾಡಿದ್ದಾರೆ. ಆಪ್ನಲ್ಲಿ ಶಾಸಕ, ಸಂಸದರಿಗೆ ಮತದಾರರು ರೇಟಿಂಗ್ ನೀಡುವ ಜೊತೆಗೆ ಅವರ ಕುರಿತು ಟೀಕೆ-ಟಿಪ್ಪಣಿಗಳನ್ನೂ ಬರೆಯಬಹುದು.
ಈ ಆಪ್ನಲ್ಲಿ ಬೇರೆ ಬೇರೆ ಕ್ಷೇತ್ರದ ಶಾಸಕರಿಗೆ ಅಥವಾ ಸಂಸದರಿಗೆ ಸಿಕ್ಕಿರುವ ರೇಟಿಂಗ್ ಹಾಗೂ ಅಂಕಗಳನ್ನು ಎಲ್ಲರೂ ನೋಡಬಹುದಾಗಿದೆ. ಆ ಮೂಲಕ ಒಟ್ಟು ದೇಶದ ಮತದಾರನ ಭಾವನೆ ತಿಳಿಯಲು ಸಹ ಸಹಕಾರಿಯಾಗಿದೆ.

27 ವರ್ಷದ ಪ್ರಥಮ್ ಅವರಿಂದ ನಿರ್ಮಾಣ
27 ವರ್ಷದ ಪ್ರಥಮ್ ಮಿತ್ತಲ್ ಎಂಬುವರು ಈ ಆ್ಯಪ್ ಅನ್ನು ನಿರ್ಮಿಸಿದ್ದು, ಪ್ರಣವ್ ಮುಖರ್ಜಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಆಪ್ ಬಿಡುಗಡೆ ಮಾಡಿದರು.

ಆಧಾರ್ ಸಂಖ್ಯೆ ಮೂಲಕ ರಿಜಿಸ್ಟರ್
ಒನ್ಟೈಮ್ ಪಾಸ್ವರ್ಡ್ ಮತ್ತು ಆಧಾರ್ ಸಂಖ್ಯೆ ಮೂಲಕ ಬಳಕೆದಾರರನ್ನು ಆ್ಯಪ್ ಗುರುತಿಸುತ್ತಿದೆ. ರಾಜಕಾರಣಿಗಳಿಗೆ ಅಂಕ ಕೊಡುತ್ತಿರುವುದು ಮತದಾರನೇ ಎಂದು ಗುರುತಿಸಲು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಬಾಟ್ (ರೋಬೋಟ್)ಗಳನ್ನು ಉಪಯೋಗಿಸಿ ಉತ್ತಮ ಅಂಕಗಳನ್ನು ಕೊಟ್ಟುಕೊಳ್ಳುವ ಸಾಧ್ಯತೆ ಇರುವ ಕಾರಣ ಹೀಗೆ ಭದ್ರತೆ ಒದಗಿಸಲಾಗಿದೆ.

ಲೊಕೆಶನ್ ಅನುಸರಿಸಿ ಕ್ಷೇತ್ರದ ಗುರುತು
ಈ ಆ್ಯಪ್ ಬಳಕೆದಾರನ ಲೊಕೆಶನ್ ಅನುಸರಿಸಿ ಕ್ಷೇತ್ರದ ಶಾಸಕ ಹಾಗೂ ಸಂಸದನ ಚಿತ್ರವನ್ನು ತೋರಿಸುತ್ತದೆ. ಬಳಕೆದಾರನು ತನ್ನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯೂ ಆಪ್ನಲ್ಲಿದೆ.

ಆಡ್ರಾಯ್ಡ್ನಲ್ಲಿ ಕಾರ್ಯ ಮಾಡುತ್ತೆ
ಆ್ಯಪ್ ಅನ್ನು ಈಗಾಗಲೇ ಲಕ್ಷಾಂತರ ಮಂದಿ ಡೌನ್ಲೋಡ್ ಮಾಡಿದ್ದಾರೆ. ಆಪ್ ಆಂಡ್ರಾಯ್ಡ್ ಮತ್ತು ಐಒಎಸ್ ಮೊಬೈಲ್ಗಳಲ್ಲಿ ಬಳಸಬಹುದಾಗಿದೆ. ಹೆಸರು, ಆಧಾರ್ ಸಂಖ್ಯೆ ನೀಡಿ ರಿಜಿಸ್ಟರ್ ಮಾಡಿಕೊಂಡು ಮತ ಚಲಾಯಿಸಬಹುದಾಗಿದೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications