ಆಹಾರ ಪ್ರೇಮಿಗಳಿಗೆ ಮೊಮೊಸ್ ತಿನ್ನುವ ಸವಾಲ್: ಗೆದ್ದವರಿಗೆ 1 ಲಕ್ಷ ಬಹುಮಾನ
ದೆಹಲಿ, ಏಪ್ರಿಲ್ 20: ಭಾರತದಲ್ಲಿ ಹೋಟೆಲ್ಗಳು ಜನರನ್ನು ಆಕರ್ಷಿಸಲು ಹೊಸ ಹೊಸ ಪ್ರಯತ್ನಗಳನ್ನು ಮಾಡುತ್ತಲೇ ಇರುತ್ತವೆ. ವಿಶೇಷ ಆಹಾರಕ್ಕೆ ಸಂಬಂಧಿಸಿದ ಸವಾಲುಗಳನ್ನು ಹಾಕುತ್ತಲೇ ಇರುತ್ತವೆ. ಭಾರತೀಯ ಆಹಾರ ಪ್ರೇಮಿಗಳು ಇವುಗಳನ್ನು ಪ್ರಯತ್ನಿಸುತ್ತಲೇ ಇರುತ್ತಾರೆ. ಆಹಾರದ ಬಗ್ಗೆ ಉತ್ಸಾಹ ಇರುವುದರಿಂದ ಬಹುತೇಕ ಜನ ಸ್ಪರ್ಧಾತ್ಮಕವಾಗಿ ತಿನ್ನುವುದನ್ನು ಆನಂದಿಸುತ್ತಾರೆ. ನಮ್ಮಲ್ಲಿ ಹೆಚ್ಚಿನವರು ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕ್ಯಾಶುಯಲ್ ಗೋಲ್ ಗಪ್ಪಾ ತಿನ್ನುವ ಸ್ಪರ್ಧೆಯನ್ನ ಏರ್ಪಡಿಸುತ್ತಾರೆ. ಆದರೆ ಕೆಲವರು ಯಶಸ್ಸಿಗಾಗಿ ದೊಡ್ಡ ಸ್ಪರ್ಧೆಗಳನ್ನು ಪ್ರಯತ್ನಿಸುತ್ತಾರೆ. ಇಂತಹ ಆಹಾರ ಪ್ರೇಮಿಗಳಿಗೆ ಮತ್ತೊಂದು ರೋಮಾಂಚಕಾರಿ ಆಹಾರ ತಿನ್ನುವ ಸವಾಲು ಬಂದಿದೆ.
ದೆಹಲಿಯ ಒಂದು ತಿನಿಸು ಮಳಿಗೆಯೊಂದು 15 ನಿಮಿಷಗಳಲ್ಲಿ 35 ಮೊಮೊಗಳನ್ನು ತಿನ್ನಲು ಜನರಿಗೆ ಸವಾಲು ಹಾಕುತ್ತಿದೆ. ಬಹುಮಾನವಾಗಿ 1 ಲಕ್ಷವನ್ನು ನಗದು ರೂಪದಲ್ಲಿ ನೀಡುವುದಾಗಿ ಘೋಷಿಸಿದೆ. ನಮ್ಮನ್ನು ನಂಬುವುದಿಲ್ಲವೇ? ಒಮ್ಮೆ ನೋಡಿ

ಸವಾಲು ಸರಳವಾಗಿ ಕಾಣಿಸಬಹುದು ಆದರೆ ಇದು ಕೆಲವು ನಿಯಮಗಳೊಂದಿಗೆ ಬರುತ್ತದೆ. ಮೊದಲ ನಿಯಮವೆಂದರೆ ಸವಾಲಿನ ಸಮಯದಲ್ಲಿ ನೀವು ವಾಂತಿ ಮಾಡಬಾರದು. ನೀವು ವಾಂತಿ ಮಾಡಿದರೆ ಬಹುಮಾನ ಕಳೆದುಕೊಳ್ಳುತ್ತೀರಿ. ಎರಡನೆಯ ನಿಯಮವೆಂದರೆ ನೀವು ಸಂಪೂರ್ಣ ಮೊಮೊ, ಕವರ್ ಮತ್ತು ಫಿಲ್ಲಿಂಗ್ ಅನ್ನು ತಿನ್ನಬೇಕು. ಮೂರನೆಯ ನಿಯಮವೆಂದರೆ ಈ ಸವಾಲಿನ ವಿಜೇತರು ಮತ್ತೆ ಸ್ಪರ್ಧಿಸಲು ಸಾಧ್ಯವಿಲ್ಲ ಮತ್ತು ಕೊನೆಯದಾಗಿ, ಚಾಲೆಂಜ್ ಅನ್ನು ಪ್ರಾರಂಭಿಸುವ ಮೊದಲು ಜನರು ಬಿಲ್ ಪಾವತಿಸಬೇಕಾಗುತ್ತದೆ.
ಇದನ್ನು ದೆಹಲಿಯ ಬಿಗ್ ಮೊಮೊಸ್ ವರ್ಲ್ಡ್ ಆಯೋಜಿಸಿದೆ. ಸವಾಲನ್ನು ಪ್ರವೇಶಿಸಲು, ಒಬ್ಬರು 2000 ಅಥವಾ 2500 (ಸಸ್ಯಾಹಾರಿ ಅಥವಾ ಮಾಂಸಾಹಾರಿ ಮೊಮೊಗಳನ್ನು ಅವಲಂಬಿಸಿ) ಪಾವತಿಸಬೇಕಾಗುತ್ತದೆ. ನೀವು ಸವಾಲನ್ನು ಗೆದ್ದರೆ 1 ಲಕ್ಷವನ್ನು ನಗದು ರೂಪದಲ್ಲಿ ಗೆಲ್ಲುವುದು ಮಾತ್ರವಲ್ಲ, ನಿಮ್ಮ ಬಿಲ್ನ ಮರುಪಾವತಿಯನ್ನು ಸಹ ಪಡೆಯಬಹುದು. ಯೂಟ್ಯೂಬ್ ಆಧಾರಿತ ಆಹಾರ ಬ್ಲಾಗರ್ 'ಫುಡಿ ವಿಶಾಲ್' ಈ ವಿಡಿಯೊವನ್ನು ಅಪ್ಲೋಡ್ ಮಾಡಿದ್ದು, 13 ಸಾವಿರ ಲೈಕ್ಗಳೊಂದಿಗೆ 230 ಸಾವಿರ ವೀಕ್ಷಣೆಗಳನ್ನು ಹೊಂದಿದೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
Rishab Shetty: ಅಧ್ಯಾಯ ಎರಡು ಇಲ್ಲಿಂದ ಶುರು; ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ ಪೋಸ್ಟ್ -
ಹೊಸತೊಡಕು: ಮಧ್ಯರಾತ್ರಿಯಿಂದಲೇ ಮಾಂಸ ಖರೀದಿ ಭರಾಟೆ, ಎಷ್ಟಿದೆ ಇಂದಿನ ಚಿಕನ್-ಮಟನ್ ದರ? -
World Happiness Report 2026: ಫಿನ್ಲೆಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ: ನಮ್ಮ ಭಾರತಕ್ಕೆ ಸಿಕ್ಕ ಸ್ಥಾನವೆಷ್ಟು? -
ಈ ಸಂವತ್ಸರಕ್ಕೇಕೆ ಈ ಹೆಸರು? ‘ಪರಾಭವ’ ಅಂದ್ರೆ ‘ಸೋಲು’ ಎಂಬ ಅರ್ಥವಲ್ಲವೇ?












Click it and Unblock the Notifications