110 ಕೋಟಿ ರುಪಾಯಿ ಹಗರಣ; ಸಿಬಿಐ ಬಲೆಗೆ ಬಿದ್ದ ಕಟ್ಟರ್

ನವದೆಹಲಿ, ಡಿಸೆಂಬರ್ 24; ಪಂಜಾಬ್ ನ್ಯಾಷನಲ್ ಬ್ಯಾಂಕ್‌ (ಪಿಎನ್‌ಬಿ) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಕಟ್ಟರ್ ಮೇಲೆ ಸಿಬಿಐ ಇಂದು ಪ್ರಕರಣ ದಾಖಲಿಸಿಕೊಂಡಿದೆ.

2007 ರಲ್ಲಿ ಮಾರುತಿ ಸುಜುಕಿ ತೊರೆದ ನಂತರ ಜಗದೀಶ ಕಟ್ಟರ್, ಕರನೇಷನ್ ಆಟೋ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪೆನಿಯನ್ನು ಹುಟ್ಟುಹಾಕಿದ್ದರು. ಇದಕ್ಕೋಸ್ಕರ ಕಟ್ಟರ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಳಿ 175 ಕೋಟಿ ರುಪಾಯಿ ಸಾಲವನ್ನು ಪಡೆದಿದ್ದರು.

Maruti Suzuki Former MD Jagdish Khattar Charged For PNB Bank Fraud

ಪಿಎನ್‌ಬಿ ಬ್ಯಾಂಕ್ ಬಳಿ ಸುಳ್ಳು ದಾಖಲೆ ಪತ್ರಗಳನ್ನು ನೀಡಿ ಬೃಹತ್ ಮೊತ್ತದ ಹಣಕಾಸು ಚಟುವಟಿಕೆ ನಡೆಸಿದ್ದಾರೆ ಎಂದು ಪಿಎನ್‌ಬಿ ಬ್ಯಾಂಕ್ 2015 ರಲ್ಲಿ ಪ್ರಕರಣ ದಾಖಲಿಸಿತ್ತು. ಇದರಿಂದ ಬ್ಯಾಂಕ್‌ಗೆ 110 ಕೋಟಿ ರುಪಾಯಿ ನಷ್ಟವುಂಟಾಗಿತ್ತು. ಪ್ರಕರಣ 2019 ರ ಅಕ್ಟೋಬರ್‌ನಲ್ಲಿ ಸಿಬಿಐ ಹೆಗಲೇರಿದ ನಂತರ ಇದೇ ಮೊದಲ ಬಾರಿಗೆ ಕಟ್ಟರ್ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+