ಬಣ್ಣದೋಕುಳಿಯಲಿ ರಂಗೇರುತ್ತಿದೆ ಲೋಕಸಭಾ ಚುನಾವಣೆ!
ನವದೆಹಲಿ, ಮಾರ್ಚ್ 12- ಈ ಬಾರಿ ಹೋಳಿ ಹಬ್ಬ ಹಿಂದೆಂದಿಗಿಂತಲೂ ಹೆಚ್ಚು ಕಲರ್ ಫುಲ್ ಆಗಲಿದೆ. ಏಕೆಂದರೆ ಲೋಕಸಭಾ ಚುನಾವಣೆ ಅಕ್ಷರಶಃ ರಂಗೇರುತ್ತಿದೆ. ಮಹಾಮಹಿಮ ನಾಯಕರ ಪರವಾಗಿ ಬೆಂಬಲಿಗರು ಕೈಗಳಲ್ಲಿ ಪಿಚಕಾರಿಗಳನ್ನಿಟ್ಟುಕೊಂಡು ಯುದ್ಧಕ್ಕೆ ನಿಂತಿದ್ದಾರೆ!
ಸಾಮಾನ್ಯವಾಗಿ ಡೋರೆಮನ್, ಛೋಟಾ ಭೀಮ್ ಕಾರ್ಟೂನ್ ಚಿತ್ರಗಳಲ್ಲಿ ಹೋಲಿ ಪಿಚಕಾರಿಗಳು ಮಾರಾಟಕ್ಕೆ ಸಿಗುತ್ತವೆ. ಆದರೆ ಈ ಬಾರಿ ಅವುಗಳ ಮೇಲೆ ಮೋದಿ, ರಾಹುಲ್ ಗಾಂಧಿ, ಕೇಜ್ರಿವಾಲ್ ಅವರ ಚಿತ್ರಗಳು ರಾರಾಜಿಸುತ್ತಿವೆ.
ಪ್ರಚಾರ ಗಿಮಿಕ್- ಮೋದಿ ಪಿಚಕಾರಿ ಜತೆಗೆ ಗುಲಾಲ್ ಫ್ರೀ:

ಆರಂಭದಲ್ಲಿ ಅಂಗಡಿಗಳವರು ಹತ್ತಾರು ಪಿಚಕಾರಿಗಳಿಗೆ ರಾಜಕೀಯ ನಾಯಕರ ಫೋಟೋ ಮೆತ್ತಿ ಸ್ಥಳೀಯವಾಗಿ ಮಾರಾಟ ಮಾಡತೊಡಗಿದರು. ಆದರೆ ಮುಂದೆ ಹೆಚ್ಚು ಜನರನ್ನು ಆಕರ್ಷಿಸತೊಡಗಿದೆ. ಜತೆಗೆ, ರಾಜಕಾರಣಿಗಳ ಕಣ್ಣಿಗೂ ಬಿದ್ದು, ಅದನ್ನು ಪ್ರಚಾರದ ಅತ್ಯುತ್ತಮ ಸಾಮಗ್ರಿಯನ್ನಾಗಿಸಿಕೊಂಡಿದ್ದಾರೆ. ಹಾಗಾಗಿ ಮಾರಾಟಗಾರರು ಭಾರಿ ಪ್ರಮಾಣದಲ್ಲಿ ರಾಜಕಾರಣಿಗಳ ಚಿತ್ರಗಳಿರುವ ಫ್ಯಾನ್ಸಿ ಪಿಚಕಾರಿಗಳನ್ನು ಮಾರಾಟಕ್ಕೆ ಬಿಡುತ್ತಿದ್ದಾರೆ.
ಮಾರಾಟಗಾರರು ರಾಜಕಾರಣಿಗಳ ಪಿಚಕಾರಿಗಳನ್ನು ಮಾರಾಟಕ್ಕೆ ಬಿಟ್ಟಿದ್ದೇ ಅವುಗಳ ಬೆಲೆ ದುಪ್ಪಟ್ಟು ಆಗಿವೆ. ಚಿಕ್ಕ ಸೈಜಿನ ಮೋದಿ ವಾಟರ್ ಗನ್ 140 ರೂ. ಗೆ ಮಾರಾಟವಾಗುತ್ತಿದೆ. ಲಾಭವನ್ನಷ್ಟೇ ಯೋಚಿಸುವ ಮಾರಾಟಗಾರರು ತಮ್ಮ ಬಳಿಯಿರುವ ಅಷ್ಟೂ ಸ್ಟಾಕಿಗೆ ಈಗ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಫೋಟೋಗಳನ್ನು ಅಂಟಿಸಿದ್ದಾರೆ. ಬಿಸಿ ದೋಸಯಂತೆ ಪಿಚಕಾರಿಗಳು ಮಾರಾಟವಾಗುತ್ತಿವೆ. (ಲೋಕಸಭಾ ಚುನಾವಣೆ ವಿವರವಾದ ವೇಳಾಪಟ್ಟಿ ಇಲ್ಲಿದೆ)
ಮೋದಿ ಪಿಚಕಾರಿ ಜತೆಗೆ ಗುಲಾಲ್ ಫ್ರೀ:
ಇನ್ನೂ ಅನೇಕ ಭಾಗಗಳಲ್ಲಿ ಅಭ್ಯರ್ಥಿಗಳ ಹೆಸರುಗಳು ಅಧಿಕೃತವಾಗಿ ಪ್ರಕಟವಾಗಿಲ್ಲ. ಮಾರಾಟಗಾರರು ಅದಕ್ಕಾಗಿ ಕಾಯುತ್ತಿದ್ದಾರೆ. ಅಭ್ಯರ್ಥಿಗಳ ಹೆಸರು ಪ್ರಕಟವಾಗುತ್ತಿದ್ದಂತೆ ಅವರವರ ಫೋಟೋಗಳನ್ನು ಅಂಟಿಸಿ ಮಾರಾಟಮಾಡುವುದು ಇವರ ಇರಾದೆಯಾಗಿದೆ. ವ್ಯಾಪಾರಿಗಳಿಗೆ, ಮೋದಿ ಪಿಚಕಾರಿ (pichkari) ಜತೆಗೆ ಗುಲಾಲ್ (ಬಣ್ಣ) ಉಚಿತವಾಗಿ ನೀಡುವ ಆಲೋಚನೆಯೂ ಇದೆ. ಮುಂದೆ ಬೇಡಿಕೆ ನೋಡಿಕೊಂಡು ಆಮ್ ಆದ್ಮಿಯ ಅರವಿಂದ್ ಕೇಜ್ರಿವಾಲಾರ ಪಿಚಕಾರಿಗಳನ್ನೂ ಮಾರಾಟ ಮಾಡಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications