ಜಯಲಲಿತಾ ವಿಚಾರಣೆ ಅಗತ್ಯವಿಲ್ಲ: ಸುಪ್ರೀಂಕೋರ್ಟ್
ನವದೆಹಲಿ, ಏ.22: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸೆಲ್ವಿ ಜೆ ಜಯಲಲಿತಾ ಅವರಿಗೆ ಸುಪ್ರೀಂಕೋರ್ಟಿನಿಂದ ಸಿಹಿ ಸುದ್ದಿ ಸಿಕ್ಕಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಅವರನ್ನು ಮತ್ತೊಮ್ಮೆ ವಿಚಾರಣೆಗೊಳಪಡಿಸುವ ಅಗತ್ಯವಿಲ್ಲ ಎಂದು ತ್ರಿಸದಸ್ಯ ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ವಿಶೇಷ ಸರ್ಕಾರಿ ಅಭಿಯೋಜಕ ನೇಮಕ ಕೂಡಾ ಸರಿಯಿಲ್ಲ ಎಂದು ನ್ಯಾಯಪೀಠ ಹೇಳಿದೆ.[ಜಯಲಲಿತಾ ಜಾಮೀನು 4 ತಿಂಗಳು ವಿಸ್ತರಣೆ]
ಜಯಲಲಿತಾ
ಅಕ್ರಮ
ಆಸ್ತಿ
ಪ್ರಕರಣದ
ಮುಂದಿನ
ವಿಚಾರಣೆ
ಮುಗಿದಿದ್ದು
ಸೋಮವಾರ
ತೀರ್ಪು
ಪ್ರಕಟಿಸುವ
ಸಾಧ್ಯತೆಯಿದೆ.
ಡಿಎಂಕೆ
ಮುಖಂಡ
ಅನ್ಬಳಗನ್
ಅವರು
ನೀಡಿರುವ
ಸಾಕ್ಷಿ
ಹಾಗೂ
ಇತ್ತೀಚಿನ
ಮನವಿಯನ್ನು
ಕರ್ನಾಟಕ
ಹೈಕೋರ್ಟ್
ಪರಿಶೀಲಿಸಿದ
ನಂತರ
ಈ
ಪ್ರಕರಣದ
ಬಗ್ಗೆ
ಸುಪ್ರೀಂಕೋರ್ಟ್
ತೀರ್ಪು
ನೀಡುವ
ನಿರೀಕ್ಷೆಯಿದೆ.
[ಅಕ್ರಮ
ಆಸ್ತಿ
ಗಳಿಕೆ
ಪ್ರಕರಣ
:
ಟೈಮ್
ಲೈನ್]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜಾಮೀನು ಅವಧಿಯನ್ನು ಮೇ 12ರವರೆಗೆ ವಿಸ್ತರಣೆ ಮಾಡಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ಶುಕ್ರವಾರ(ಏ.17) ಕ್ಕೆ ಜಯಲಲಿತಾ ಜಾಮೀನು ಅವಧಿ ಮುಕ್ತಾಯಗೊಂಡಿತ್ತು. [ಜಯಲಲಿತಾಗೆ ಜಾಮೀನು ಸಿಕ್ಕಿದ್ದೇಕೆ? ಆದೇಶ ಪ್ರತಿ ಓದಿ]
ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಜಯಲಲಿತಾ ಅವರಿಗೆ ಅ.17, 2014ರಂದು ಸುಪ್ರೀಂಕೋರ್ಟ್ನಿಂದ ಜಾಮೀನು ಲಭಿಸಿತ್ತು.ಜೈಲುವಾಸ ಅಂತ್ಯಗೊಂಡ ನಂತರ ಚೆನ್ನೈಗೆ ಮರಳಿದ್ದರು. ಕೋರ್ಟ್ ನಿರ್ದೇಶನದಂತೆ ತಮ್ಮ ನಿವಾಸದಲ್ಲೇ ನೆಲೆಸಿ ರಾಜಕೀಯದಿಂದ ದೂರವುಳಿದಿದ್ದರು.